ಕಣ್ಣಿನ ಸಮಸ್ಯೆಗಳಿಗೆ ಸರ್ಜರಿ ಇಲ್ಲದೆಯೇ ಪರಿಹಾರ .......ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ

 


ಕಣ್ಣುಗಳ ಆರೋಗ್ಯ ಮುಖ್ಯ ಎಕೆ..?

ಜಗತ್ತಿನ ಎಲ್ಲ ಜೀವಿಗಳಿಗೂ ಅತ್ಯವಶ್ಯಕವಾದ ದೇಹದ ಭಾಗ ಎಂದರೆ ಅದು ಕಣ್ಣು .ನಾವು ಜಗತ್ತಿನ ಸೌಂದರ್ಯ ಆಸ್ವಾದಿಸಲು ಸಂಭ್ರಮಿಸಲು ಕಣ್ಣುಗಳು ಮುಖ್ಯ ಪಾತ್ರವಹಿಸುತ್ತವೆ. ಆದರೆ  ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಂದು ವಿಷಯವನ್ನು ನಾವು ಆನ್ಲೈನ್ , ವಿಡಿಯೋ ಮುಖಾಂತರ ಹೆಚ್ಚಾಗಿ ತಿಳಿದುಕೊಳ್ಳುತ್ತೇವೆ ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಚಿಕ್ಕ ,ಚಿಕ್ಕ ಮಕ್ಕಳಿಗೂ ಕನ್ನಡಕ ಹಾಕುವ ಪರಿಸ್ಥಿತಿ ಬಂದಿದೆ. ನಾವು.ಕಣ್ಣುಗಳ ಆರೋಗ್ಯವನ್ನು ಕಾಪಾಡದೇ ಇದ್ದರೆ ಮುಂದಿನ ದಿನಗಳಲ್ಲಿ ಅತಿ ವೇಗವಾಗಿ ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಅವಕಾಶವಿರುತ್ತದೆ. ಆಧುನಿಕಯುಗದಲ್ಲಿ  ನಾವು ಮೊಬೈಲ್ ಹಾಗೂ ಕಂಪ್ಯೂಟರ್ಗಳ ವೀಕ್ಷಣೆಯನ್ನು ಕಡಿಮೆ ಮಾಡುವುದು ಅಸಾಧ್ಯವಾಗಿದೆ . ನಾವು ಅತಿ ಹೆಚ್ಚು ಡಿಜಿಟಲ್ ವಿಡಿಯೋಗಳನ್ನು ನೋಡುತ್ತಿದ್ದರೆ ಅದರಿಂದ ಕಣ್ಣಿಗೆ ಹೆಚ್ಚಿನ ಶ್ರಮ ಕೊಟ್ಟಂತಾಗುತ್ತದೆ ಇದನ್ನು ತಪ್ಪಿಸಲು ಆಗಾಗ ನಾವು ಹೊರಗಡೆ ಬಂದು ದೂರದ ವಸ್ತುಗಳನ್ನು ವೀಕ್ಷಣೆ ಮಾಡಿದಾಗ ನಮ್ಮ ಕಣ್ಣುಗಳ ಮೇಲೆ ಬೀಳುವ ಭಾರವು ಕಡಿಮೆಯಾಗಿ ಕಣ್ಣು ಪುನಶ್ಚೇತನಗೊಳ್ಳುತ್ತಾ ಹೋಗುತ್ತದೆ. 

ಕಣ್ಣುಗಳ ರಕ್ಷಣೆಗಾಗಿ ವಿಟಮಿನ್ ಯುಕ್ತ ಪೋಷಕಾಂಶ ಆಹಾರವನ್ನು ಸೇವಿಸುವುದು ಒಳ್ಳೆಯದು ಉದಾಹರಣೆಗೆ ಮೀನು ,ಮೊಟ್ಟೆ, ಮಾಂಸ, ಹಸಿರು ತರಕಾರಿಗಳು ,ಹಣ್ಣುಗಳು ,ಇತ್ಯಾದಿ ಚಿಕ್ಕ ಮಕ್ಕಳಿಗೆ ಮೊಬೈಲ್ ಫೋನ್ಗಳನ್ನ ನೀಡುವುದು ಅವರ ಕಣ್ಣಿನ ಮೇಲೆ ಬಹಳ ಕೆಟ್ಟ ಪರಿಣಾಮ ಉಂಟುಮಾಡುತ್ತದೆ. ಏಕೆಂದರೆ ಮಕ್ಕಳ ಕಣ್ಣಿನಲ್ಲಿರುವ ರೆಟಿನಾದ  ಮೇಲೆ ತೀವ್ರ ಒತ್ತಡ ಉಂಟಾಗಿ ಮುಂದೆ ಮಕ್ಕಳಿಗೆ ಕನ್ನಡಕ ಬರುವ ಸಾಧ್ಯತೆ ಇರುತ್ತದೆ . ಚಿಕ್ಕ ಮಕ್ಕಳು ಈ ಮೊಬೈಲ್ ಅಥವಾ ಇತರೆ ಡಿಜಿಟಲ್ ವಸ್ತುಗಳನ್ನು ಹತ್ತಿರದಿಂದ ವೀಕ್ಷಿಸುವುದರಿಂದ  ಕಣ್ಣಿನ ಬೆಳವಣಿಗೆಯಲ್ಲಿ ತುಂಬಾ ಬದಲಾವಣೆ ಉಂಟಾಗಿ ಕಣ್ಣಿನ ಪೊರೆ ಸಹಿತ ಬರಬಹುದು. ಇದರ ಬದಲಾಗಿ ಮಕ್ಕಳನ್ನು ಸೂರ್ಯನ ಬಿಸಿಲಲ್ಲಿ ಆಟ ಆಡಲೂ ಬಿಡುವುದರಿಂದ ಅವರ ಕಣ್ಣುಗಳು ಹೆಚ್ಚಿನ ದೃಷ್ಟಿ ಸಾಮರ್ಥ್ಯವನ್ನು ಪಡೆಯುತ್ತವೆ. ಪಾಲಕರು  ಮೊಬೈಲ್ ವೀಕ್ಷಣೆ ಕಡಿಮೆ ಮಾಡಬೇಕುಇದು ಮಕ್ಕಳ ಮೇಲೆ ಪರಿಣಾಮ ಬೀರಿ ಮಕ್ಕಳು ಸಹಿತ  ಮೊಬೈಲ್ ವೀಕ್ಷಣೆಯನ್ನು ಕಡಿಮೆ ಮಾಡುತ್ತಾರೆ. ಮುಖ್ಯವಾಗಿ ಮಕ್ಕಳು ಅವರ ತಂದೆ ತಾಯಿಯ ಅಭ್ಯಾಸಗಳನ್ನು ಅನುಕರಣೆ ಮಾಡುತ್ತಿರುತ್ತಾರೆ ಆದ್ದರಿಂದ ಪಾಲಕರು ಮೊಬೈಲ್ ವೀಕ್ಷಣೆ ಕಡಿಮೆ ಮಾಡುವುದು ಒಳಿತು.

ಕಣ್ಣಿನ ಸುರಕ್ಷತೆ ಗೋಸ್ಕರ 20ರ ಸೂತ್ರವನ್ನು ಅಳವಡಿಸಿಕೊಳ್ಳಬೇಕು .

 ನಮ್ಮ ಕಣ್ಣನ್ನು ಯಾವಾಗಲೂ ಒದ್ದೆ ಆಗಿರುವಂತೆ ಅಥವಾ ನೀರಿನಾಂಶದಿಂದ ತುಂಬಿರುವಂತೆ ನೋಡಿಕೊಳ್ಳುವುದು ಮುಖ್ಯ. ಕಣ್ಣಿನಲ್ಲಿ ನೀರಿನ ಅಂಶ ಕಾಣದೆ ಇದ್ದಲ್ಲಿ ಇದು ಸತತ ಕಣ್ಣುಗಳ ಮೇಲಿನ ಹೆಚ್ಚಿನ ಒತ್ತಡವನ್ನು ಪ್ರತಿನಿಧಿಸುತ್ತದೆ .ಆದ್ದರಿಂದ ಪ್ರತಿ 20 ನಿಮಿಷಕ್ಕೊಮ್ಮೆ 20 ಸೆಕೆಂಡುಗಳು 20 ಅಡಿ ದೂರದ ವಸ್ತುಗಳನ್ನು ನೋಡುವುದು ಅಭ್ಯಾಸ ಮಾಡಿಕೊಳ್ಳಬೇಕು ಇದನ್ನು ಕಣ್ಣಿನ 20 ರ ಸೂತ್ರ ಎನ್ನುತ್ತೇವೆ. ಇದನ್ನು ಅನುಕರಣೆ ಮಾಡುವುದರಿಂದ ನಮ್ಮ ಕಣ್ಣಿಗೆ ವಿಶ್ರಾಂತಿ ಸಿಗುವುದರ ಜೊತೆಗೆ ಕಣ್ಣಿನ  ದೃಷ್ಟಿ ಸಾಮರ್ಥ್ಯ ವೃದ್ಧಿಸುತ್ತದೆ ಹಾಗೂ ನಮ್ಮ ಕಣ್ಣು ಒದ್ದೆಯಾಗಿರಲು ಇದು ಸಹಾಯಕಾರಿ .

 ನಮ್ಮ ದೇಹದ ಇತರ ಭಾಗಗಳಿಗೆ ಕ್ಯಾನ್ಸರ್ ಹಡುವಂತೆ ಕಣ್ಣಿಗೂ ಕ್ಯಾನ್ಸರ್ ಹರಡುತ್ತದೆ ಕಣ್ಣಿನ ಕ್ಯಾನ್ಸರ್ ನಲ್ಲಿ ಹಲವಾರು ವಿಧಗಳಿವೆ ಕಣ್ಣಿನ ರೆಪ್ಪೆ, ಕಣ್ಣಿನ ರೆಟಿನಾ, ಕಣ್ಣಿನ ಸುತ್ತಲೂ ಕ್ಯಾನ್ಸರ್ ಹರಡುವುದು ಹೇಗೆ ಹಲವಾರು ವಿಧಗಳಿವೆ. ಕಣ್ಣಿಗೆ ಯಾವುದೇ ಸಮಸ್ಯೆ ಕಾಣಿಸದಲ್ಲಿ ತಕ್ಷಣವೇ ವೈದ್ಯರನ್ನ ಸಂಪರ್ಕಿಸುವುದು ಮುಖ್ಯ  ಇಲ್ಲವಾದಲ್ಲಿ ಬೇಗ ಹರಡುವ ಅವಕಾಶವಿರುತ್ತದೆ.

ಕಣ್ಣಿನ ಆರೋಗ್ಯಕ್ಕಾಗಿ ಸೇವಿಸಬೇಕಾದ ಆಹಾರಗಳು

ಕಣ್ಣಿನ ಆರೋಗ್ಯವನ್ನು ಕಾಪಾಡಲು ನಾವು ಉತ್ತಮವಾದ ಆಹಾರ ಸೇವನೆಯನ್ನು ಅಳವಡಿಸಿಕೊಳ್ಳುವುದು ಮುಖ್ಯ ಮುಖ್ಯವಾಗಿ ಹಸಿರು ಸೊಪ್ಪುಗಳು ಮೊಟ್ಟೆ ಮೀನು ಮಾಂಸ ಹಣ್ಣುಗಳು ಹೀಗೆ ಎಲ್ಲ ಪೋಷಕಾಂಶವುಳ್ಳ ಆಹಾರವನ್ನು ಆಯಾ ಕಾಲಕ್ಕೆ ತಕ್ಕಂತೆ ಸೇವಿಸಿದಾಗ ನಮ್ಮ ಕಣ್ಣುಗಳಿಗೆ ಪೋಷಕಾಂಶಗಳು ದೊರೆತು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಹಾಗೂ ಕಣ್ಣನ್ನು ವಿಪರೀತ ಉಜ್ಜುವುದು ಕಣ್ಣನ್ನು ಒತ್ತುವುದು ಮಾಡುವುದರಿಂದ ಕಣ್ಣಿಗೆ ತೊಂದರೆಯಾಗುವುದು ಜೊತೆಗೆ ಹಾನಿ ಕೂಡ ಆಗಬಹುದು ಆದ್ದರಿಂದ ಸಾಧ್ಯವಾದಷ್ಟು ಸ್ವಚ್ಛ ನೀರಿನಿಂದ ಕಣ್ಣನ್ನು ಆಗಾಗ ತೊಳೆಯುತ್ತಿರಿ ಸಾಧ್ಯವಾದಷ್ಟು ಕಣ್ಣನ್ನು ತೇವಾಂಶದಿಂದಿಡಿ.

ಕಣ್ಣಿಗೆ ಆಗಾಗ ಹರಳೆಣ್ಣೆಯಿಂದ ಮಸಾಜ್ ಮಾಡಿ ಇದರಿಂದ ಕಣ್ಣಿನ ಆರೋಗ್ಯವು ಹೆಚ್ಚುತ್ತದೆ ಹರಳೆಣ್ಣೆಗೆ ವಿರೇಚಕ ಗುಣವಿದೆ ಇದನ್ನು ಆಂತರಿಕವಾಗಿ ತೆಗೆದುಕೊಂಡಾಗ ನಮ್ಮ ದೇಹದಲ್ಲಿರುವ ತ್ಯಾಜ್ಯ ವಸ್ತುಗಳನ್ನು ಹೊರಹಾಕುತ್ತದೆ.ಬಾಹ್ಯವಾಗಿ ತೆಗೆದುಕೊಂಡಾಗ ಚರ್ಮದ ಮೂಲಕ ಹಾದು ಹೋಗಿ ನೋವನ್ನು ಗುಣಪಡಿಸುವ ಸಾಮಾರ್ಥ್ಯವಿದೆ .ಆದ್ದರಿಂದ ಹರಳೆಣ್ಣೆ ಬಳಸುತ್ತೀರಿ.

ಕಣ್ಣಿನ ಆರೋಗ್ಯಕ್ಕಾಗಿ ಹಲವಾರು ವ್ಯಾಯಾಮಗಳಿವೆ. 

ಒಂದು ಕತ್ತಲೆಯ ಕೋಣೆಯಲ್ಲಿ ಒಂದು ಮೇಣದ ದೀಪವನ್ನು ಆ ದೀಪವನ್ನು 10 ಅಡಿ ದೂರದಿಂದ ಸಾಧ್ಯವಾದಷ್ಟು ಹೊತ್ತು ಏಕಾಗ್ರತೆಯಿಂದ ವೀಕ್ಷಿಸಿ ಇದರಿಂದ ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ

ಕಣ್ಣಿನ ಆರೋಗ್ಯಕ್ಕಾಗಿ ಹಲವಾರು ಕಣ್ಣಿನ ವ್ಯಾಯಾಮಗಳಿವೆ, ಕಣ್ಣನ್ನು ತಿರುಗಿಸುವುದು ಹಾಗೂ ರೆಪ್ಪೆ ಮುಚ್ಚಿ ತೆಗೆಯುವುದು ಹಾಗೂ ಸ್ವಚ್ಛವಾದ ತಣ್ಣೀರಿನಲ್ಲಿ ಒಂದು ನಿಮಿಷಗಳ ಕಾಲ ತೆರೆದ ಕಣ್ಣನ್ನು ಮುಳುಗಿಸುವುದು ಹೀಗೆ ಹಲವಾರು ವ್ಯಾಯಾಮಗಳಿಗೆ ಇವುಗಳನ್ನು ಮಾಡಿ ನಮ್ಮ ಕಣ್ಣನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು ಕಣ್ಣಿನಿಂದ ಮಾತ್ರ ನಾವು ಈ ಸಮಾಜವನ್ನು ನೋಡಲು ಸಾಧ್ಯವಾಗುತ್ತದೆ ಅನುಭವಿಸಲು ಸಾಧ್ಯವಾಗುತ್ತದೆ.



ನಿಮ್ಮ ಮಕ್ಕಳು ಸರಿಯಾಗಿ ಊಟ ಮಾಡುತ್ತಿಲ್ಲವೇ ಹಾಗದರೆ ಗಮನಿಸಿ......

 

ಮಕ್ಕಳಿಗೆ ಬಲವಂತದ ಊಟ ಸರಿಯಲ್ಲ....
ಎಲ್ಲಾ ಪೋಷಕರ ಸಾಮಾನ್ಯ ತೊಂದರೆ ಎಂದರೆ ತಮ್ಮ ಮಗು ಹೆಚ್ಚು ಊಟ ಮಾಡುತ್ತಿಲ್ಲ .ಅವರ ತೂಕದಲ್ಲಿ ಎರಿಕೆ ಆಗುತ್ತಿಲ್ಲ ಎಂಬ ಅಳಲು ಇರುತ್ತದೆ.ಅದಕ್ಕಾಗಿ ನಾವು ಎನನ್ನು ಅರ್ಥ ,ಮಾಡಿಕೊಳ್ಳಬೇಕೆಂದರೆ  ಅವರ ಸಾಮರ್ಥಕ್ಕೆ ಅನುಗುಣವಾಗಿ ಉಟ ಮಾಡುತ್ತಿರುತ್ತಾರೆ ನಾವು ಅವರಿಗೆ ಬಲವಂತವಾಗಿ ಊಟ ಮಾಡಿಸುವುದರಿಂದ ಮಕ್ಕಳಿಗೆ ಬಟ್ಟಲು & ಚಮಚ ನೋಡಿದ ತಕ್ಷಣ ಭಯದ ಭಾವನೆ ಉಂಟಾಗುತ್ತದೆ. ಊಟವನ್ನು ಶಿಕ್ಷೆ ಎಂದು ಭಾವಿಸುತ್ತಾ ಹೋಗುತ್ತವೆ.

 6 ತಿಂಗಳಿನಿಂದ 1 ವರ್ಷದೊಳಗಿನ ಮಕ್ಕಳು 2 ರಿಂದ 4 ಚಮಚದ ವರೆಗೆ ತಿನ್ನಬಹುದು ಎಂಬುದು ನೆನಪಿಡಿ.ಹಾಗೆಯೇ 1 ವರ್ಷದ ನಂತರ ಬಾಟಲ್ಗಳಲ್ಲಿ ಹಾಲುಣಿಸುವ ವಿಧಾನವನ್ನು ಕಡಿಮೆ ಮಾಡಿ ಕಾರಣ ಮುಂದೆ ಮಕ್ಕಳು ಆಹಾರ ಸ್ವಿಕರಿಸುವ ವಿಧಾನ ರೂಢಿಸಿಕೊಂಡಿರದ ಕಾರಣ ಆಹಾರ ಸೇವನೆ ಕಡಿಮೆ ಆಗಬಹುದು.ಹೊರಗಿನ ಪದಾರ್ಥಗಳನ್ನು ನೀಡುವುದುಅಂದರೆ ಬೇಕರಿ ಪದಾರ್ಥಗಳು,ಕರಿದ ಪದಾರ್ಥಗಳು,ಪ್ಯಾಕ್‌ ಮಾಡಿದ ಆಹಾರ ಪೊಟ್ಟಣಗಳು ಈ ರೀತಿಯ ಆಹಾರಗಲನ್ನು ಮಕ್ಕಳ ಸೇವನೆಗೆ ಕೊಡಬೇಡಿ ಇದರಿಂದ ಅವರ ಜಿರ್ಣ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.ಮನೆಯಲ್ಲಿ ಟೀ,ಬಿಸ್ಕೆಟ್‌ ನಂತಹ ಆಹಾರಗಳನ್ನು  ನೀಡಬೇಡಿ. ಇದರಿಂದ ಮಕ್ಕಳಿಗೆ ಹಸಿವು ಊಂಟಾಗುವುದಿಲ್ಲ. ಹಾಗೆಯೇ ಮಕ್ಕಳ ಊಟವನ್ನು ಎಲ್ಲರೊಂದಿಗೆ ಊಟ ಮಾಡಿಸಿ ಇತರರು ಊಟ ಮಾಡುವುದನ್ನು ನೋಡಿ ತಾವು ಊಟ ಮಾಡಬೇಕು ಎಂಬ ಭಾವನೆ ಮಕ್ಕಳಲ್ಲಿ ಬೆಳೆಯುತ್ತದೆ.

ಮಕ್ಕಳ ಊಟದ ಸಾಮರ್ಥ್ಯವು ಅವರ ಬೊಗಸೆ ಎಷ್ಟಿರುತ್ತದೆ ಅವರಿಗೆ ಹೆಚ್ಚಿನ ಪ್ರಮಾಣದ ಬಲವಂತದ ಊಟ ಮಾಡಿಸಿ ತೂಕ ಹೆಚ್ಚಿಸಲು ಸಾಧ್ಯವಿಲ್ಲ ಮಕ್ಕಳು ನೈಸರ್ಗಿಕವಾಗಿ ಊಟ ಮಾಡುವ ವಿಧಾನದಲ್ಲೇ ಪೌಷ್ಟಿಕಾಂಶಗಳನ್ನು ಬೆರೆಸಿ ಊಟ ಮಾಡಿಸುವುದು ಉತ್ತಮ ಉದಾಹರಣೆಗೆ ಮಕ್ಕಳು ಊಟ ಮಾಡುವ ಆಹಾರದಲ್ಲಿ ತುಪ್ಪವನ್ನು ಬೆರೆಸಿ ತಿನಿಸುವುದರಿಂದ ಮಕ್ಕಳ ಮೆದುಳಿಗೆ ಸರಿಯಾದ ಪೋಷಕಾಂಶಗಳ ರವಾನೆ ಆಗುತ್ತದೆ ಕೆಲವು ಪೋಷಕರಲ್ಲಿ ತುಪ್ಪ ತಿನ್ನಿಸುವುದರ ಕುರಿತಾಗಿ ಗೊಂದಲವಿದೆ ಇದರಿಂದ ಮಕ್ಕಳಲ್ಲಿ ನೆಗಡಿ, ಕೆಮ್ಮು ಕಫ ಉಂಟಾಗಬಹುದು ಎಂಬ ಭಯವಿದೆ ಆದರೆ ತುಪ್ಪವು ಪೌಷ್ಟಿಕಾಂಶ ವಾಗಿದ್ದು ಇದು ನಮ್ಮ ಆಹಾರವನ್ನು ಮೆದುಳಿಗೆ ರವಾನಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ

 ತುಪ್ಪವು ಕೊಬ್ಬು ಪದಾರ್ಥವಾಗಿದ್ದು ಇದು ಆಹಾರದಲ್ಲಿ ಮಿಶ್ರಣವಾಗಿ ಮೆದುಳಿಗೆ ರವಾನಿಸುವಲ್ಲಿ ತುಪ್ಪದ ಕೊಬ್ಬು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಶುದ್ಧವಾದ ದೇಸಿ ತುಪ್ಪವನ್ನು ಬಳಸುವುದು ಉತ್ತಮ. ಹಣ್ಣುಗಳನ್ನು ಮಕ್ಕಳಿಗೆ ಸರಳ ರೂಪದಲ್ಲಿ ನೀಡಿ ಅಂದರೆ ಜ್ಯೂಸ್ ಗಳ ರೂಪದಲ್ಲಿ ಮಕ್ಕಳಿಗೆ ನೀಡಿ. ಹಾಗೆ ಆಹಾರದಲ್ಲಿ ಹಾಲನ್ನು ಸೇರಿಸಿ ನೀಡುತ್ತಿದ್ದರೆ ಕೆನೆಭರಿತ ಹಾಲನ್ನು ಬಳಸಿ ಇದರಿಂದ ಪೋಷಕಾಂಶಗಳು ದೇಹದ ಎಲ್ಲಾ ಭಾಗಗಳಿಗೆ ಸಾಗಿಸಲು ಕೊಬ್ಬು ಸಹಕಾರಿಯಾಗುತ್ತದೆ. ಹಾಲಿಗೆ ನೀರನ್ನು ಬೆರೆಸಿ ತಿನ್ನಿಸುವುದರಿಂದ ಪೋಷಕಾಂಶಗಳು ಪೂರ್ಣ ಪ್ರಮಾಣದಲ್ಲಿ ಮಕ್ಕಳ ದೇಹದಲ್ಲಿ ಹೀರಿಕೆ ಆಗುವುದಿಲ್ಲ. ಮಕ್ಕಳಿಗೆ ಮಾಲ್ಟ್ ಗಳನ್ನು ತಿನ್ನಿಸುತ್ತಿದ್ದರೆ ಅದರಲ್ಲಿ ಬಳಸುವ ಕಾಳುಗಳನ್ನು ನೆನೆಸಿ ಮೊಳಕೆ ಬರಿಸಿ ನಂತರ ಒಣಗಿಸಿ ಅವುಗಳನ್ನು ಪುಡಿ ಮಾಡಿಕೊಳ್ಳುವುದು ಸೂಕ್ತ ಏಕೆಂದರೆ ಇಂತಹ ಕಾಳುಗಳಲ್ಲಿ ಸಮೃದ್ಧ ಭರಿತ ಪೋಷಕಾಂಶಗಳಿದ್ದು ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗುತ್ತವೆ . ಹಾಗೆಯೇ ಮಕ್ಕಳಿಗೆ ಜೇನುತುಪ್ಪ ಬೆಲ್ಲ ದಿಂದ ತಯಾರಿಸಿದ ಸಿಹಿ ತಿನಿಸುಗಳನ್ನು ನೀಡಿ .ಮೊಟ್ಟೆ ಮಾಂಸ ನೀಡಿ ಇದರಲ್ಲಿ ಸಿಗುವ ಪ್ರೋಟೀನ್ ಗಳು ಮಕ್ಕಳ ಬೆಳವಣಿಗೆ ಹಾಗೂ ತೂಕ ಹೆಚ್ಚಿಸಲು ಸಹಕಾರಿ ಆಗುತ್ತದೆ. ಮಕ್ಕಳು ಊಟ ಮಾಡುವ ಸಂದರ್ಭದಲ್ಲಿ ಫೋನ್ ಗಳನ್ನು ನೀಡಬೇಡಿ ಇದರಿಂದ ಸಹಜವಾಗಿ ಬಿಡುಗಡೆಯಾಗುವ ಲಾಲಾರಸ ಮಕ್ಕಳಲ್ಲಿ ಬಿಡುಗಡೆಯಾಗುವುದಿಲ್ಲ.

 ಮಕ್ಕಳ ತೂಕದ ಕುರಿತು

ನಿಯಮಿತವಾಗಿ ಸರಿಯಾದ ಸಮಯಕ್ಕೆ ಪ್ರತಿನಿತ್ಯ ಮಕ್ಕಳಿಗೆ ಊಟ ಮಾಡಿಸಿ ಇದರಿಂದ ಮಕ್ಕಳು ಹಠ ಮಾಡದೆ ಸಹಜವಾಗಿ ಊಟ ಮಾಡಲು ಸಾಧ್ಯವಾಗುತ್ತದೆ. ಮಕ್ಕಳ ತೂಕವು ಹುಟ್ಟಿನಿಂದ ಆರು ತಿಂಗಳಲ್ಲಿ ಎರಡು ಪಟ್ಟು ಹೆಚ್ಚುತ್ತದೆ ಹಾಗೆ ಒಂದು ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಗುತ್ತದೆ. ಮಕ್ಕಳ ತೂಕದ ಬೆಳವಣಿಗೆಯು ಅವರು ಹುಟ್ಟಿದಾಗ ಇದ್ದ ತೂಕವನ್ನು ಅವಲಂಬಿಸಿರುತ್ತದೆ ಅದರ ಮೇಲೆ ಮಗುವಿನ ಬೆಳವಣಿಗೆ ಸಾಗುತ್ತದೆ ಹಾಗಾಗಿ ಪೋಷಕರು ಮಕ್ಕಳನ್ನು ಗುಂಪಿನಲ್ಲಿ ಊಟ ಮಾಡಿಸುವುದು ಅಭ್ಯಾಸ ಮಾಡಿಸಬೇಕು.ಇದರಿಂದ ಮಕ್ಕಳು ಎಲ್ಲರೊಂದಿಗೆ ಬೆರೆತು ಹೆಚ್ಚು ಊಟ ಮಾಡಲು ಕಲಿಯುತ್ತಾರೆ. 

 ಮಕ್ಕಳ ತೂಕದ ಚಾರ್ಟಗಳನ್ನು ಗಮನಿಸುವ ಮೂಲಕ ಮಕ್ಕಳ ಬೆಳವಣಿಗೆ ಗಮನಿಸಿ ನಿಜಕ್ಕೂ ಕುಂಠಿತವಾಗಿದ್ದರೆ ವೈದ್ಯರನ್ನು ಭೇಟಿ ಮಾಡಿ .

ನರ ದೌರ್ಬಲ್ಯದಿಂದ ಕೈ ಕಾಲುಗಳಲ್ಲಿ ಜೋಮು ,ಮರಗಟ್ಟುವಿಕೆ ಉಂಟಾದರೆ ...ಪರಿಹಾರ ಗಮನಿಸಿ

  

 ನರ ದೌರ್ಬಲ್ಯ ಉಂಟಾಗಲೂ ಕಾರಣ..

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ನರ ದೌರ್ಬಲ್ಯವು ಒಂದು ಪ್ರಮುಖವಾದ ಖಾಯಿಲೆಯಾಗಿದೆ  ಅದರಲ್ಲೂ ವಿಶೇಷವಾಗಿ ಯುವಕರಲ್ಲಿ ಇದು ಹೆಚ್ಚಾಗಿ ಕಾಣುತ್ತೇವೆ ಕಾರಣ ಮಾನಸಿಕ ಅಸಮತೋನತೆ ಚಿಕ್ಕ ವಿಷಯಗಳಿಗೆ ಬೇಸರ ಮಾಡಿಕೊಳ್ಳುವುದು ಇತ್ಯಾದಿ. ದೌರ್ಬಲ್ಯವು ನಮ್ಮ ಆಹಾರದಲ್ಲಿನ ಪೋಷಾಕಾಂಶಗಳ ಕೊರತೆಯಿಂದ ಉಂಟಾಗಬಹುದು ಅಥವಾ ಸಕ್ಕರೆ ಖಾಯಿಲೆಯಿಂದಾಗಿಯು ನರ ದೌರ್ಬಲ್ಯವು ಉಂಟಾಗಬಹುದು. ನಮ್ಮ ದೇಹದಲ್ಲಿ ನರ ದೌರ್ಬಲ್ಯ ಸಮಸ್ಯೆ ಉಂಟಾದಾಗ ಅನೇಕ ಲಕ್ಷಣಗಳನ್ನು ನಮ್ಮ ದೇಹವು ತೋರಿಸುತ್ತದೆ.ಇಂತಹ ಲಕ್ಷಣಗಳನ್ನು ಆರಂಭದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆಯನ್ನು  ತೆಗೆದುಕೊಡರೆ ಮುಂದೆ ಉಂಟಾಗಬಹುದಾದ ಸಮಸ್ಯೆಗಳಿಂದ ಹೊರಬರಬಹುದು.

 ನರ ದೌರ್ಬಲ್ಯದ ಲಕ್ಷಣಗಳು 

ನಡೆಯುವುದಕ್ಕೆ ತೊಂದರೆಯಾಗುವಂತೆ  ನಮ್ಮ ಸ್ನಾಯುಗಳು ಮರಗಟ್ಟುವುದು.

ಬಾಹ್ಯ ಅಂಗಗಳ ವೈಫಲ್ಯ ಉಂಟಾಗುವುದು. ಉದಾ :ಬರವಣಿಗೆ ಮಾಡಲು ಸಾದ್ಯವಾಗದಿರುವುದು,

ಮಾಂಸಖಂಡಗಳಲ್ಲಿ ಸಡಲಿಕೆ ಹಾಗು ದೌರ್ಬಲ್ಯ ಉಂಟಾಗುವುದು,ಕೈ ,ಕಾಲುಗಳಲ್ಲಿ ನಡುಗುವಿಕೆ ಉಂಟಾಗುವುದು.

ನಡೆಯುವಾಗ ಹಾಗು ನಿಂತಾಗ ಕಾಲು& ಪಾದಗಳಲ್ಲಿ ವಿಪರೀತ ನೋವು ಉಂಟಾಗುವುದು.ಕೈಗಳಲ್ಲಿ ಸೆಳೆತ ಉಂಟಾಗವುದು.

ನಮ್ಮ ದಿನನಿತ್ಯದ ವೇಗವಾಗಿ ಮಾಡುವ ಕೆಲಸಗಳನ್ನು ವೇಗವಾಗಿ ಮಾಡಲು ಸಾಧ್ಯವಾಗದಿರುವುದು.

ಸಕ್ಕರೆ ಖಾಯಿಲೆ ಇರುವವರಲ್ಲಿ ನರ ದೌರ್ಬಲ್ಯವು ವೇಗವಾಗಿ ಉಂಟಾಗುತ್ತದೆ ಕಾರಣ  ನಮ್ಮ ದೇಹದಲ್ಲಿ  ಚಿಕ್ಕ ಚಿಕ್ಕ ರಕ್ತನಾಳಗಳಲ್ಲಿ ನಂಜು ಉಂಟಾಗಿ ಸರಬರಾಜು ಆಗುವ ರಕ್ತದಲ್ಲಿ  ಆಮ್ಲಜನಕ,ಪೋಷಾಕಾಂಶಗಳ ಕೊರತೆಯಿಂದಾಗಿ ನರ ದೌರ್ಬಲ್ಯ ಉಂಟಾಗುತ್ತದೆ. ಇದರಿಂದ ಪಾದಗಳಲ್ಲಿ ಊರಿ ಉಂಟಾಗಿ ನಿದ್ದೆ ಬರದಂತಾಗುತ್ತದೆ ಪರಿಣಾಮವಾಗಿ ಇತರೆ ಮಾನಸಿಕ ಖಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ.



ನರಗಳಲ್ಲಿ ಉಂಟಾಗುವ ಸಮಸ್ಯೆಗಳಿಗೆ ನಮ್ಮ ಆಹಾರದ ಮೂಲಕ ಪ್ರಾರಂಭದಲ್ಲಿಯೇ  ಗಮನಿಸಿ ನಮ್ಮ ಆಹಾರದಲ್ಲಿ ಬದಲಾವಣೆ ಮಾಡಿಕೊಂಡು ಸರಿ ಪಡಿಸಬಹುದು.

ನರಗಳಿಗೆ ಅಗತ್ಯವಾದ ವಿಟಮಿನ್‌ ಸಿ,  B12 ,B6 ,OMEGA3 FATY ACIDS,BCOMPEX, ಕೂಡಿರುವ  ಆಹಾರಗಳ ಸೇವನೆಯಿಂದ ದೂರಮಾಡಬಹುದು.

ನಮ್ಮ ಆಹಾರದಲ್ಲಿ ಕ್ಯಾಲ್ಸಿಯಂ ಸೇವನೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕು.ಊದಾ ; ಹಾಲು,ಮೊಟ್ಟೆ...ಇತ್ಯಾದಿ

ನಾವು ಊಸಿರಾಡುವಾಗ ನಡೆಯುವ ಉಸಿರಾಟ ಕ್ರಿಯೆಯಿಂದಾಗಿ ಹಲವು ರೀತಿಯ ಬ್ಯಾಕ್ಟೀರಿಯಗಳು ಉತ್ಪತ್ತಿಯಾಗುತ್ತವೆ.ಇವು ನಮ್ಮ ದೇಹದ ನರಗಳು ಹಾಗು ಇತರೆ ಅಂಗಗಳ ಮೇಲೆಯು ದುಷ್ಪರಿಣಾಮ ಬೀರುತ್ತವೆ. ಆದ್ದರಿಂದ ನಮ್ಮ ಆಹಾರದಲ್ಲಿ ANTI -OXIDENT ಪದಾರ್ಥಗಳ ಸೇವನೆ ಮಾಡುವುದರಿಂದ ತಡೆಗಟ್ಟಬಹುದು ಊದಾ; ಅರಿಶಿಣ,ಶುಂಠಿ,ಬೆಳ್ಳುಳ್ಳಿ,ಗಳನ್ನು ದಿನ ನಿತ್ಯದ ಆಹಾರದಲ್ಲಿ ಸೇವಿಸಬೇಕು.

ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯಬೇಕು , ನಮ್ಮ ಆಹಾರದಲ್ಲಿ ಸೊಪ್ಪುಗಳನ್ನು ಸೇರಿಸಿ ಕೊಳ್ಳವುದರಿಂದ  ಹಾಗು(GREEN JUICE) ಸೊಪ್ಪಿನ ಜ್ಯುಸ್ ಗಳನ್ನು ಸೇವಿಸುವುದರಿಂದ ನರದೌರ್ಬಲ್ಯ ದಿಂದ ಹೊರಬರಬಹುದು. ಇದರಿಂದ ಮೆಗ್ನೇಶೀಯಂ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ.

 ನರಗಳಲ್ಲಿ ರಕ್ತ ಸಂಚಾರ ಉತ್ತಮವಾಗಲೂ ಬೀಟ್ ರೂಟ್‌ ಸೇವನೆ ಉತ್ತಮ

ಹಣ್ಣುಗಳ ಸೇವೆನೆಯಿಂದ ಮುಖ್ಯವಾಗಿ ವಿಟಮಿನ್‌ ಸಿ  ಇರುವ ಹಣ್ಣುಗಳ ಸೇವನೆ ಉತ್ತಮ. ಮುಖ್ಯವಾಗಿ ಡ್ರೈ ಫ್ರುಟ್ಸ್‌ ಸೇವನೆಯಿಂದ ವಿಟಮಿನ್‌ ಕೆ, ಜಿಂಕ್‌, ಮುಂತಾದ ಅಂಶಗಳು ದೇಹಕ್ಕೆ ದೊರೆಯುತ್ತವೆ.

ನಾವು ಉತ್ತಮ ರೀತಿಯ FATTY ACID ಇರುವ ಆಹಾರ ಸೇವನೆ ಮಾಡಿದಾಗ ನರ ದೌರ್ಬಲ್ಯದಿಂದ ಹೊರಬರಬಹುದು.ಎಕೆಂದರೆ ಒಳ್ಳೆಯ ಕೊಬ್ಬು ನರಗಳಿಗೆ ಆಹಾರ ವಿಶೇಷವಾಗಿ ಮೆದುಳಿಗೆ ನಮ್ಮ ಆಹಾರ ತಲುಪಬೇಕೆಂದರೆ ಕೊಬ್ಬಿನ ಮೂಲಕವೇ ಸಾಗಬೇಕು ಆದ್ದರಿಂದ ಹಾಲು,ತುಪ್ಪ,ಆವಕಾಡೋ ಹಣ್ಣುಗಳ ಸೇವನೆ ಮಾಡಬೇಕು. ಉತ್ತಮ ವ್ಯಾಯಮ ,ಪ್ರಾಣಾಯಾಮ ಗಳು ನಮ್ಮನರಗಳ ಆರೋಗ್ಯ ಉತ್ತಮ ವಾಗುತ್ತದೆ.ನಾಡಿಶೋಧನಾ ಪ್ರಾಣಯಾಮ, ವಾಯು ಮುದ್ರೆ, ಚಿನ್ಮ ಮುದ್ರೆ
ಯಂತಹ ವ್ಯಾಯಮ ಮಾಡುವುದು.ತಲೆಗೆ ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರನ್ನು ಸ್ನಾನ ಮಾಡುವುದರಿಂದ ನಮ್ಮ ನರಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.


ನರ ದೌರ್ಬಲ್ಯ  ತಡೆಯಲು ಯಾವ ಆಹಾರಗಳನ್ನು ಸೇವಿಸಬಾರದು. 

ಹೆಚ್ಚು ಸಕ್ಕರೆ ಇರುವ ಅಹಾರ ಪದಾರ್ಥಗಳ ಸೇವನೆಯಿಂದ ದೂರವಿರುವುದು, ಹಾಗು ಹೆಚ್ಚು ಸಂಶ್ಲೇಷಿತ ಆಹಾರ ಸೇವನೆಯಿಂದ ದೂರವಿರುವುದು ಅಂದರೆ ಪ್ಯಾಕ್‌ ಮಾಡಿರುವ ಆಹಾರ ಪದಾರ್ಥ ತೆಗೆದುಕೊಳ್ಳಬಾರದು,

ಜಂಕ್‌ ಫುಡ್ ಹಾಗು ಎಣ್ಣೆಯಲ್ಲಿ  ಕರಿದ ಆಹಾರ ಪದಾರ್ಥಗಳ ಸೇವನೆಯಿಂದ ದೂರವಿರುವುದು, ಕೃತಕ ಬಣ್ಣ ಸೇರಿಸಿದ ಆಹಾರ ಪದಾರ್ಥಗಳು ,ನಮ್ಮ ಆಹಾರದಲ್ಲಿ ಉಪ್ಪು,ಮತ್ತು ಸಕ್ಕರೆ ಯನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಂಡಷ್ಟು ನಮ್ಮ ಆರೋಗ್ಯ ಕಾಪಡಿಕೊಳ್ಳುತ್ತೇವೆ.

ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರದಲ್ಲೂ ವಿಷ ತುಂಬಿಕೊಂಡಿದೆ. ಹೆಚ್ಚಾಗಿ ಪ್ಲಾಸ್ಟಿಕ್‌ ಗಳಲ್ಲಿ ಪ್ಯಾಕ್‌ ಮಾಡಿದ ಆಹಾರ ಸೇವನೆ ಉತ್ತಮವಲ್ಲ. ಇವು ಹಲವಾರು ಖಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ.

ನಮ್ಮ ದೇಹಕ್ಕೆ ಉಂಟಾಗುವ ಪ್ರತಿ ಖಾಯಿಲೆಯು ಮುಂದೆ ಹಲವಾರು ಖಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ ಆದ್ದರಿಂದ ಎಚ್ಚೆತ್ತುಕೊಳ್ಳುವುದು ಒಳಿತು.



 

ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ಕರುಳಿನ ಆರೋಗ್ಯ ಸಮಸ್ಯೆ ಇರಬಹುದು.

 ಕರುಳಿನ ಅನಾರೋಗ್ಯಕ್ಕೆ ಕಾರಣವಾಗುವ ಅಂಶಗಳು 

ನಮ್ಮ ಆಹಾರ ಸೇವನೆಯಲ್ಲಿ ಸಂಸ್ಕರಣೆ ಹೊಂದಿದ ಆಹಾರಗಳಾದ ಕೆ ಎಫ್ ಸಿ ,ಪಿಜ್ಜಾ, ಬರ್ಗರ್, ಸೇವಿಸುತ್ತಿದ್ದರೆ ಮತ್ತು ನಮಗೆ  ಹಸಿವಾಗದೆ ಇರುವುದು, ಪದೇ ,ಪದೇ ತಲೆ ಸುತ್ತುವುದು, ಹಳಸಿದ ಆಹಾರ ಸೇವನೆ ಮಾಡುವುದು, ಆಹಾರದಲ್ಲಿ ನಾರಿನಂಶ ಇರದೆ ಇರುವ ಆಹಾರ ಸೇವಿಸುವುದು, ಒಂದೇ ಆಹಾರವನ್ನು ಸತತ ಸೇವಿಸುವುದು ಇವೆಲ್ಲವೂ ನಮ್ಮ ಕರುಳಿನ ಅನಾರೋಗ್ಯವನ್ನು ತೋರಿಸುತ್ತವೆ .

ನಮ್ಮ ಕರುಳಿನ ಆರೋಗ್ಯ ಉತ್ತಮವಾಗಬೇಕೆಂದರೆ ನಾವು ಊಟ ಮಾಡಿದ ಆಹಾರ ನಮ್ಮ ದೇಹಕ್ಕೆ ಪೂರ್ಣ ಪ್ರಮಾಣದಲ್ಲಿ ಹೀರಿಕೆಯಾಗಬೇಕು ಹಾಗು ಕರುಳಿನಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಗಳು ಉತ್ತಮವಾಗಿ ಬೆಳೆಯುವಂತಹ ಆಹಾರ ಸೇವಿಸುವುದು  ನಮ್ಮ ಕರುಳು ಆರೋಗ್ಯವಾಗಿದ್ದರೆ ನಾವು ಊಟ ಮಾಡುವಂತಹ ಎಲ್ಲಾ ಆಹಾರಗಳು ನಮ್ಮ ದೇಹಕ್ಕೆ ಹೀರಿಕೆಯಾಗುತ್ತವೆ ಸಣ್ಣ ಕರುಳು ಆರೋಗ್ಯವಾಗಿ ಇರಬೇಕೆಂದರೆ .ನಮ್ಮ ದೇಹಕ್ಕೆ ವ್ಯಾಯಾಮ ಹಾಗೂ ಆರೋಗ್ಯಕರ ಭೋಜನ ಅಗತ್ಯ .ದಿನನಿತ್ಯದ ವ್ಯಾಯಾಮ ಸಣ್ಣ ಕರುಳನ್ನು ಆರೋಗ್ಯವಾಗಿಡುತ್ತದೆ ಈ ರೀತಿಯ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ದಣಿವಾಗಿ ಆ ದಣಿವಿನಿಂದ ದೇಹಕ್ಕೆ ಒಳ್ಳೆ ನಿದ್ದೆ ಸಿಗುತ್ತದೆ .ಇದರಿಂದ ನಮ್ಮ ಕರಳುಗಳು ಆರೋಗ್ಯಕರವಾಗುತ್ತದೆ. ಹಾಗೂ ದಿನಕ್ಕೆ ನಾಲ್ಕರಿಂದ ಐದು ಲೀಟರ್ ನೀರು ಕುಡಿಯುವುದರಿಂದ ಕರುಳಿನ ಪಚನ ಕ್ರಿಯೆಯೂ ಉತ್ತಮವಾಗುತ್ತದೆ.

ನಮ್ಮ ಕರುಳು ಆರೋಗ್ಯವಾಗಿರಲು ನಾವು ಯಾವ ಆಹಾರವನ್ನು ಸೇವಿಸಬಾರದು

ಸಕ್ಕರೆಯು ನಮ್ಮ ದೇಹಕ್ಕೆ ಉತ್ತಮವಲ್ಲ ಎಂದು ಬಹಳಷ್ಟು ವೈದ್ಯರು ಈಗಾಗಲೇ ತಿಳಿಸಿರುತ್ತಾರೆ. ಇದು ಕರಳಿಗೂ ಕೂಡ ಉತ್ತಮವಲ್ಲ ಕಾರಣ ಸಕ್ಕರೆಯಲ್ಲಿರುವ ಅತಿಯಾದ ಗ್ಲುಕೋಸ್ ಅಂಶವು ಕರುಳಿನಲ್ಲಿಕೆಟ್ಟ ಬ್ಯಾಕ್ಟೀರಿಯಗಳನ್ನು ಬೆಳೆಯಲೂ ಸಹಕರಿಸುತ್ತದೆ. ಇದರಿಂದ ನಮ್ಮ ಜೀರ್ಣಕ್ರಿಯೆ ಹಾಗು ಆರೋಗ್ಯದ ಮೇಲೆ ಕೆಟ್ಟ  ಪರಿಣಾಮ ಬೀರುತ್ತದೆ.

ಕರಿದ ಪದಾರ್ಥಗಳನ್ನು ಸೇವಿಸುವುದು ನಮ್ಮ ಕರುಳಿಗೆ ಉತ್ತಮವಲ್ಲ ಏಕೆಂದರೆ  ಈ ಪದಾರ್ಥಗಳು ಜೀರ್ಣ ಕ್ರಿಯೆಯನ್ನು ನಿಧಾನಗೊಳಿಸುತ್ತವೆ ಹಾಗೂ ಕರುಳಿನ ಆರೋಗ್ಯಕರ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸುತ್ತದೆ  ಕಾರಣ ಈ ಆಹಾರಗಳು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಆಹಾರಗಳಾಗಿವೆ ಎಣ್ಣೆಯಲ್ಲಿ ಕರೆದ ಪದಾರ್ಥಗಳನ್ನು ಆದಷ್ಟು ದೂರವಿಡಿ

ಫಾಸ್ಟ್ ಫುಡ್ ಅಥವಾ ಟ್ಯಾಕ್ಡ್ ಫುಡ್ ಉದಾಹರಣೆ ಪಿಜ್ಜಾ ಬರ್ಗರ್ ಮುಂತಾದ ಆಹಾರ ಪದಾರ್ಥಗಳನ್ನು ಆದಷ್ಟು ದೂರವಿಡಿ ಏಕೆಂದರೆ ಈ ಪದಾರ್ಥಗಳಲ್ಲಿ ಫೈಬರ್ ಪ್ರಮಾಣ ಬಹಳ ಕಡಿಮೆ ಇರುತ್ತದೆ ಹಾಗೂ ಹೆಚ್ಚಾಗಿ ನಾಲಗೆ ರುಚಿಗೋಸ್ಕರ ಕೃತಕ ರಸಾಯನಗಳನ್ನು ಸೇರಿಸಿರುತ್ತಾರೆ. ಈ  ರೀತಿಯ ಆಹಾರಗಳು ಕ್ರಮೇಣ ಕರುಳಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಜೊತೆಗೆ ನಮ್ಮ ಕೆಲವು ಅಭ್ಯಾಸಗಳು ಉದಾಹರಣೆಗೆ ಧೂಮಪಾನ ‌,ಮಧ್ಯ ಸೇವನೆಂತಹ ಅಭ್ಯಾಸಗಳು ಕರುಳಿನ ಮೇಲೆ ದುಷ್ಪರಿಣಾಮವನ್ನು ಬೀರುತ್ತವೆ. 

ಆಂಟಿಬಯೋಟಿಕ್ ಔಷಧಗಳನ್ನುಹೆಚ್ಚಾಗಿ  ಸೇವಿಸುವುದರಿಂದ ನಮ್ಮ ಕರುಳಿಗೆ ಸಮಸ್ಯೆ ಆಗುತ್ತದೆ ಏಕೆಂದರೆ ಈ ಔಷಧಗಳು ಕೃತಕ ರಸಾಯನದಿಂದ ತುಂಬಿರುತ್ತವೆ. ಇವುಗಳು ನಮ್ಮ ಕರುಳಿನ ಆರೋಗ್ಯಕರ 
ಬ್ಯಾಕ್ಟೀರಿಯಗಳನ್ನು ನಾಶಗೊಳಿಸಿ ಕೆಟ್ಟ ಬ್ಯಾಕ್ಟೀರಿಯ ಬೆಳೆಯಲು ಕಾರಣವಾಗುತ್ತದೆ

ನಮ್ಮ ಕರುಳಿನಲ್ಲಿ ಸುಮಾರು 300 ರಿಂದ ಸಾವಿರದವರೆಗೆ ಹಲವಾರು ವಿಧದ ಬ್ಯಾಕ್ಟೀರಿಯಗಳು ಇರುತ್ತವೆ ಇವು ಕರುಳನ್ನು ಆರೋಗ್ಯವಾಗಿಟ್ಟು ಜೀರ್ಣ ಕ್ರಿಯೆಗೆ ಸಹಕರಿಸುತ್ತವೆ ನಾವು ತಿನ್ನುವ ಆಹಾರವು ಕೃತಕ ರಸಾಯನಗಳಿಂದ ಕೂಡಿದ್ದು ಅದು ದೇಹ ಸೇರಿದಾಗ ಈ ಬ್ಯಾಕ್ಟೀರಿಯಗಳಿಗೆ ತೊಂದರೆಯನ್ನುಂಟು ಮಾಡಿ ಅವುಗಳ ನಾಶಕ್ಕೆ ಕಾರಣವಾಗುತ್ತದೆ 

ಕರುಳು ಆರೋಗ್ಯವಾಗಿರಲು ನಾವು ಮಾಡಬೇಕಿರುವ ಕಾರ್ಯಗಳು

ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ನಮ್ಮ ಕರುಳಿನಲ್ಲಿರುವ ಅನಾರೋಗ್ಯಕರ ಬ್ಯಾಕ್ಟೀರಿಯಗಳು ನಾಶವಾಗಿ ಆರೋಗ್ಯಕರ ಬ್ಯಾಕ್ಟೀರಿಯಗಳು ಹೆಚ್ಚಾಗಿ ಬೆಳೆಯಲು ಸಹಕಾರಿಯಾಗುತ್ತದೆ

ಹೆಚ್ಚು ನಾರಿನಂಶ ಹೊಂದಿರುವ ಪದಾರ್ಥಗಳನ್ನು ಸೇವಿಸುವುದರಿಂದ ಕರುಳನ್ನು ಆರೋಗ್ಯವಾಗಿಡಬಹುದು ನಾರಿನ ಅಂಶದಿಂದ ಆರೋಗ್ಯಕರ ಬ್ಯಾಕ್ಟೀರಿಯಗಳ ಉತ್ಪತ್ತಿ ಹೆಚ್ಚಾಗಿ ಜೀರ್ಣಕ್ರಿಯೆ ಸುಲಭವಾಗುತ್ತದೆ 

ಹೆಚ್ಚಾಗಿ ಸಸ್ಯಹಾರವನ್ನು ಸೇವಿಸುವುದರಿಂದ ಕರುಳಿನ ಆರೋಗ್ಯವನ್ನು ಕಾಪಾಡಬಹುದು . ಹಾಲು ಮೊಸರು ಮಜ್ಜಿಗೆ ಸೇವಿಸುವುದರಿಂದ ಹಾಗೂ ದೋಸೆ ಇಡ್ಲಿ ಮುಂತಾದ ಪದಾರ್ಥಗಳಲ್ಲಿ ಸೋಡಾ ಪುಡಿಯನ್ನು ಬೆರೆಸಿರುತ್ತೇವೆ ಇದು ಸಹ ನಮ್ಮ ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಗಳು ಬೆಳೆಯಲು ಸಹಕರಿಸುತ್ತವೆ ಇಂತಹ ಪದಾರ್ಥಗಳನ್ನು ಸೇವಿಸುವುದು ಉತ್ತಮ.

ಒಟ್ಟಾರೆಯಾಗಿ ಕರುಳಿನಿಂದ ಹಲವಾರು ಸಮಸ್ಯೆಗಳು ಪ್ರಾರಂಭವಾಗುತ್ತವೆ ಉದಾರಣೆಗೆ ತಲೆನೋವು ಆಮಶಂಕೆ ಹಾಗೂ ರೋಗ ನಿರೋಧಕ ಶಕ್ತಿ ಕುಂದುವುದು ಮೈ ಕೈ ನೋವು ಉಂಟಾಗುವುದು ಹೀಗೆ ಹಲವಾರು ತೊಂದರೆಗಳು ಕರುಳಿನ ಅನಾರೋಗ್ಯದಿಂದ ಉಂಟಾಗುತ್ತದೆ ಇಂತಹ ಸಂದರ್ಭದಲ್ಲಿ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ .


ದಿನ ನಿತ್ಯದ ಆಹಾರ ಪದರ್ಥಗಳಿಂದ ಕೀಲು ನೋವಿಗೆ ಪರಿಹಾರವಿದೆ ....


ಕೀಲು ನೋವು ಸಮಸ್ಯೆ ಎಕೆ ಬರುತ್ತದೆ....?
ನಮ್ಮ ದೇಶದಲ್ಲಿ ಕೀಲು ನೋವಿಗೆ ಸಂಬಂಧಿಸಿದಂತೆ ಶೇಕಡ 10 ರಷ್ಟು ಜನರು ಈ ಬಾದೆಯಿಂದ ಬಳಲುತ್ತಿದ್ದಾರೆ . ಮನುಷ್ಯ ಸತತ ಚಟುವಟಿಕೆಗಳಿಂದ ಉತ್ಸಾಹಿ ಆಗಿರಬೇಕಾದರೆ  ಕೈ ಕಾಲುಗಳು ಚೆನ್ನಾಗಿ ಕೆಲಸ ಮಾಡಬೇಕು ಆಗ ತಾನೇ ಅವನು ತಾನು ಅಂದುಕೊಂಡಿದ್ದನ್ನು ಸಾಧಿಸಬಹುದು.ಕೈ ಕಾಲುಗಳು ಚೆನ್ನಾಗಿ ಕೆಲಸ ಮಾಡಬೇಕಾದರೆ ಕೀಲುಗಳಲ್ಲಿರುವ ದ್ರವ್ಯ (synovial fluid) ಚೆನ್ನಾಗಿ ನಿರ್ವಹಿಸಬೇಕಾಗುತ್ತದೆ. ಕೀಲುಗಳು ನಮ್ಮ ದೇಹದಲ್ಲಿ ಸಹಉಪಯೋಗಿ ಅಂಗವಾಗಿ ಕೆಲಸ ಮಾಡುತ್ತವೆ. ನಾವು ತಿನ್ನುವ ಆಹಾರದಲ್ಲಿ ಪೋಷಕಾಂಶಗಳು ಕಡಿಮೆಯಾದರೆ ಕೀಲು  ನೋವು ಕಾಣಿಸಿಕೊಳ್ಳುತ್ತದೆ .ಹಾಗೂ ನಮ್ಮ ದೇಹದಲ್ಲಿ ನಂಜು(infection) ಉಂಟಾದರೆ  ಕಾಣಿಸಿಕೊಳ್ಳಬಹುದು ಕೀಲು ನೋವು ಹೆಚ್ಚಾಗಿ ನಮ್ಮ ವಂಶವಾಹಿಗಳಿಂದ ಬರಬಹುದು ಅಥವಾ ನಮ್ಮ ಜೀವನ ಶೈಲಿಯಿಂದ ಕೂಡ ಉಂಟಾಗಬಹುದು. ಹಳೆ ಕಾಲದಲ್ಲಿ ಜನರು ಹೆಚ್ಚು ಚಟುವಟಿಕೆಯಿಂದ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಇಂದಿನ ಜೀವನಶೈಲಿಯು ಕೇವಲ ಕುಳಿತಲ್ಲಿಯೇ ಜಗತ್ತನ್ನು ನಿರ್ವಹಿಸಬಹುದಾಗಿದೆ. ಯಾವುದೇ ಚಟುವಟಿಕೆ ಇಲ್ಲದೆ ಕುಳಿತಲ್ಲಿಯೇ ಎಲ್ಲವನ್ನು ಮಾಡುವ ನಮ್ಮ ಜೀವನ ಶೈಲಿ  ಈ ಕಾರಣದಿಂದಾಗಿಯೂ ಕೀಲು ನೋವು ಉಂಟಾಗುತ್ತದೆ. ಅಥವಾ ಮೂಳೆಗಳು ಫ್ರಾಕ್ಚರ್ ಆದಂತಹ ಸಂದರ್ಭದಲ್ಲಿ ಕೀಲು ನೋವುಗಳು ಕಾಣಿಸಿಕೊಳ್ಳಬಹುದು ಕ್ರೀಡೆಗಳಲ್ಲಿ ವ್ಯಾಯಾಮಗಳಲ್ಲಿ ತಮ್ಮನ್ನು ತಾವು ತೊಡಗಿಸದೆ ಇರುವುದರಿಂದ ಕಾಣಿಸಿಕೊಳ್ಳಬಹುದು.

ಸಾಮಾನ್ಯವಾಗಿ ವಯ್ಯಸ್ಸಾದಂತೆ ಮೊಣಕಾಲುಗಳಲ್ಲಿನ ದ್ರವ್ಯ ಸವೆಯುತ್ತ ಹೋಗುತ್ತದೆ.ಇದರಿಂದ ಪ್ರತಿ ಹೆಜ್ಜೆ ಇಟ್ಟಾಗಲೂ ನೋವು ಕಾಣಿಸಿಕೊಳ್ಳುತ್ತದೆ. ಕೀಲುಗಳಲ್ಲಿರುವ  ದ್ರವ್ಯ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ ನಡೆಯಲು ಸಾದ್ಯವಾಗುವುದಿಲ್ಲ.ಈ ಸಮಸ್ಯೆಗಳು ಇತ್ತೀಚೆಗೆ 30 ವರ್ಷದವರಿಂದ ಪ್ರಾರಂಭವಾಗುತ್ತಿದೆ. ಇದನ್ನು ನಿರ್ಲಕ್ಷ್ಯ ಮಾಡುವುದರಿಂದ ಮೊಣಕಾಲು ಮೂಳೆಗಳ ಸವೆತ ಉಂಟಾಗಿ ಕೊನೆಗೆ ಸರ್ಜರಿ ಮಾಡಿಸಿಕೊಳ್ಳಬೇಕಾಗುತ್ತದೆ. ಇದನ್ನು ಆರಂಭದಲ್ಲಿಯೇ ಗುರುತಿಸಿ ಹಾಗು ಆಹಾರದಲ್ಲಿ ಬದಲವಾಣೆ ಮಾಡಿಕೊಳ್ಳುವುದರಿಂದ ಪುನಃ ಕೀಲುಗಳ  ದ್ರವ್ಯವನ್ನು ಹೆಚ್ಚಿಸಿ ಕೊಳ್ಳಬಹುದು. ವಾಹನಗಳಲ್ಲಿನ  ಭಾಗಗಳು ಸವೆಯದಂತೆ  ಹೇಗೆ ನಾವು ಗ್ರೀಸ್‌ ಬಳುಸುತ್ತವೆಯೋ ಹಾಗೆಯೇ  ನಮ್ಮ ಕೀಲುಗಳಲ್ಲಿರುವ ದ್ರವ್ಯ ಹೆಚ್ಚಾಗಬೇಕೆಂದರೆ ಅದಕ್ಕೆ ಸೂಕ್ತವಾದ ಆಹಾರ ಸೇವನೆ ಅಗತ್ಯ. ಮೂಳೆ ಮತ್ತು ಕೀಲು ಸವೆತ ಉಂಟಾಗುವುದು ನಮ್ಮ ದೇಹದಲ್ಲಿ ಸೋಡಿಯಂ ಶೇಖರಣೆಯಿಂದ  ನಮ್ಮ ಆಹಾರದಲ್ಲಿ ಸೋಡಿಯಂ ಸೇವನೆ ಕಡಿಮೆ ಮಾಡಬೇಕು.
   
ಈ ಕೀಲು ನೋವಿಗೆ ನಮ್ಮ ದಿನನಿತ್ಯ ಬಳಸುವ ಆಹಾರ ಪದಾರ್ಥಗಳೇ ಔಷಧಿಯಾಗಿ ಬಳಸಬಹುದು ಅಂತಹ ಪದಾರ್ಥಗಳು ಯಾವುವೆಂದು ನೋಡೊಣ .

ಅರಿಶಿಣ 
ಅರಿಶಿಣದಲ್ಲಿ(curcumin) ಕರ್ ಕ್ಯೂಮಿನ್ ಎಂಬ ಪದಾರ್ಥವಿದೆ  ಇದರಲ್ಲಿ(anti inflamentory & anti oxident) ಕೀಲುಗಳ ಉರಿಯುತವನ್ನು ಕಡಿಮೆ ಮಾಡುವ ಹಾಗೂ ಕೀಲುಗಳ ಒಳಗಡೆ ಆಮ್ಲಜನಕದ ಪ್ರವೇಶವನ್ನು ನಿರ್ಭಂಧಿಸುವ ಗುಣವಿದೆ  ಜೊತೆಗೆ ಅರಿಶಿಣವನ್ನು ಕೀಲುಗಳ ಮೇಲೆ ಹಚ್ಚಿದಾಗ  ವೇಗವಾಗಿ ಗಾಯಗಳು ಗುಣಮುಖರಾಗಲೂ ಸಹಕರಿಸುತ್ತದೆ.
 ಕೀಲು ನೋವುಗಳೆ ಅಲ್ಲ ಹೃದಯಾಘಾತದಂತಹ ಅವಗಡಗಳು ಕೂಡ ಅರಿಶಿಣ ಸೇವನೆಯಿಂದ ಕಡಿಮೆ ಮಾಡಬಹುದು. ಈ ಅರಿಶಿನವನ್ನು ಆಹಾರ ಪದಾರ್ಥಗಳಲ್ಲಿ ಸೇರಿಸಿ ದಿನನಿತ್ಯ ಊಟ ಮಾಡುವುದು ಅಳವಡಿಸಿಕೊಳ್ಳುವುದರಿಂದ ನಮ್ಮ ಕೀಲು ನೋವುಗಳು ಬರದಂತೆ ನೋಡಿಕೊಳ್ಳಬಹುದು.

ಬೆರ್ರಿ ಹಣ್ಣುಗಳು
ಬೆರ್ರಿ ಹಣ್ಣುಗಳು ಅಂದರೆ ಬ್ಲೂ ಬೆರ್ರಿ, ರಾಸ್ ಬೆರಿ ,ಚರ್ರಿ, ನೆಲ್ಲಿಕಾಯಿ, ನೆರಳೇಕಾಯಿ, ಅಂತಹ ಹಣ್ಣುಗಳಲ್ಲಿ(anthosyanin) ಎನ್ನುವಂತಹ ಪದಾರ್ಥ ಇರುತ್ತದೆ ಇದು(anti inflamentory & anti oxident) ಆಂಟಿ ಇನ್ಫ್ಲುಮೆಂಟರಿ ಹಾಗೂ ಆಂಟಿಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ ಮತ್ತು ನಮ್ಮ ದೇಹದ ಮೃದು ಎಲಬುಗಳಿಗೆ ಬೇಕಾದ ದ್ರವ್ಯ ಉತ್ಪತ್ತಿ ಮಾಡುತ್ತದೆ. ಇದರಿಂದ  ಕೀಲುಗಳ ನೋವು ಉರಿಯುತ ಕಡಿಮೆಯಾಗುತ್ತದೆ ಈ ಹಣ್ಣುಗಳಲ್ಲಿ ಕ್ಯಾಲೋರಿಗಳು ಕಡಿಮೆ  ಹಾಗೂ ನಾರಿನಂಶ ಹೆಚ್ಚಿರುವುದರಿಂದ ನಮ್ಮ ತೂಕ ಕಡಿಮೆಗೊಳಿಸಲು ಸಹಕಾರಿಯಾಗಿದೆ ತೂಕ ಕಡಿಮೆಯಾದಂತೆ ಕೀಲಿನ ತೊಂದರೆಯೂ ಕಡಿಮೆಯಾಗುತ್ತದೆ 

ಹಸಿರು ಸೊಪ್ಪುಗಳು
ಮೆಂತೆ, ಮೂಲಂಗಿ, ಪಾಲಕ್, ಪುದಿನ ,ಕರಿಬೇವು ,ಹಲವಾರು ಸೊಪ್ಪುಗಳು ನಮ್ಮ ಪ್ರತಿನಿತ್ಯದ ಆಹಾರ ಪದ್ಧತಿಯಲ್ಲಿ ಇರಬೇಕು ಇವುಗಳಲ್ಲಿ(anti inflamentory & anti oxident)  ಹಲವಾರು ವಿಟಮಿನ್ ,ಮಿನರಲ್ ಮತ್ತು ನಾರು ಪದಾರ್ಥಗಳಿಂದ ಕೂಡಿದೆ. ಮುಖ್ಯಗಳಲ್ಲಿ ಇವುಗಳಲ್ಲಿ ವಿಟಮಿನ್ ಸಿ, ಕೆ ,ಎ, ಬಿ9, ಇರುತ್ತದೆ ಇವು ಕೀಲುಗಳ ಚಲನೆಗೆ ಬೇಕಾದ ದ್ರವ್ಯವನ್ನು ಉತ್ಪತ್ತಿಗೆ ಮಾಡುತ್ತವೆ


ಶುಂಠಿ
ಪಾರಂಪರಿಕವಾಗಿ ಶುಂಠಿಯಲ್ಲಿ ಔಷಧೀಯ ಗುಣಗಳಿವೆ ಎಂಬುದು ನಮ್ಮೆಲ್ಲರಿಗೂ ತಿಳಿದ ವಿಚಾರ ನಮ್ಮ ಮನೆಗಳಲ್ಲಿ ಬರುವ ಸಣ್ಣಪುಟ್ಟ ನೆಗಡಿ ,ಕೆಮ್ಮು ಮುಂತಾದ ಸಮಸ್ಯೆಗಳಿಗೆ ಶುಂಠಿಯನ್ನು ಪರಿಹಾರವಾಗಿ ಉಪಯೋಗಿಸುತ್ತೇವೆ ಶುಂಠಿಯಲ್ಲಿರುವ ಜಿಂಜರ್ ಆಲ್ ಎಂಬ ಪದಾರ್ಥವು ನಮ್ಮ ಕೀಲುಗಳಿಗೆ ಬೇಕಾಗಿರುವ ಸೈನೋವಿಯಲ್ (liquid) ದ್ರವ್ಯವನ್ನು ಉತ್ಪತ್ತಿ ಮಾಡುತ್ತದೆ ಅದೇ ರೀತಿ ಮೂಳೆ ಮಾಂಸಗಳಿಂದ ಬರುವ ನೋವು ಕಡಿಮೆ ಮಾಡಿ ಪಚನ ಕ್ರಿಯೆ ವಾಂತಿ ಬರದೇ ಇರುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ

ಬೆಳ್ಳುಳ್ಳಿ

 ಬೆಳ್ಳುಳ್ಳಿಯಲ್ಲಿ ಇರುವ  ಅಲಿಸಿನ್ ಪದಾರ್ಥವು ಉರಿಯುತ ಕಡಿಮೆ ಮಾಡಲು ಸಹಕಾರಿಯಾಗಿದೆ ಇದರಲ್ಲಿರುವ ಸೆಲೆನೀಯಂ,ಕ್ಯುಯಿರ್ಸಿಟಿನ್  ಎಂಬ ಪದಾರ್ಥಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಹಾಗೂ ತಲೆನೋವು ಬರದಂತೆ ನಿದ್ರೆ ಹೆಚ್ಚಾಗಲು ಸಹಕರಿಸುತ್ತವೆ


ಆಲೀವ್‌ ಎಣ್ಣೆ
ಆಲೀವ್ ಎಣ್ಣೆ ಅದರಲ್ಲೂ EXTRA VIRGIN OLIVE OIL ವಿಶೇಷವಾಗಿ ಹೆಚ್ಚು ಉಪಯೋಗಿಸಿದಷ್ಟು ಒಳ್ಳೆಯದು ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ ಎಂದು ಅಧ್ಯಯನಗಳು ತಿಳಿಸಿವೆ. ದಕ್ಷಿಣ ಅಮೇರಿಕಾದ ಮೆಡಿಟೇರನಿಯನ್ ಪ್ರದೇಶಗಳಲ್ಲಿನ ಜನರಿಗೆ ಸಕ್ಕರೆ ಕಾಯಿಲೆ, ರಕ್ತದೊತ್ತಡ ದಂತಹ ಕಾಯಿಲೆಗಳು ಕಂಡುಬಂದಿಲ್ಲ ಇದರ ಆಧಾರದ ಮೇಲೆ ಅಲ್ಲಿ ಸಮೀಕ್ಷೆ  ಮಾಡಿದಾಗ ಆಲಿವ್ ಆಯಿಲ್ ನಿಂದ ಅವರ ಆರೋಗ್ಯ ಸುಧಾರಿಸಿದ ಅಂಶವು ಬೆಳಕಿಗೆ ಬಂದಿದೆ ಹಾಗಾಗಿ ಆಹಾರದಲ್ಲಿ ಹಾಲಿವು ಎಣ್ಣೆ ಉಪಯೋಗಿಸುವುದು ತುಂಬಾ ಉತ್ತಮ.

 ನಮ್ಮ ಸುತ್ತ ಮುತ್ತಲಿನ ದಿನ ನಿತ್ಯ ಉಪಯೋಗಿಸುವ ಹಲವಾರು ಆಹಾರ ಪದಾರ್ಥಗಳಿಂದ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಇವುಗಳು ಕೇವಲ ಆಹಾರವಲ್ಲ ಔಷಧಿಗಳಂತೆ ಕಾರ್ಯನಿರ್ವಹಿಸುತ್ತವೆ ಇಂತಹ ಆಹಾರ ಪದಾರ್ಥಗಳನ್ನು ಸೇವಿಸಿ ಆಹಾರ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ


ಖಾಲಿ ಹೊಟ್ಟೆಗೆ ಬಿಸಿ ನೀರಿನೊಂದಿಗೆ ತುಪ್ಪ ಸೇರಿಸಿ ತೆಗೆದುಕೊಡರೆ ಉಂಟಾಗುವ ಲಾಭಗಳು.....


ತುಪ್ಪದ ಮಹತ್ವ...

ನಮ್ಮ ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ತುಪ್ಪಕ್ಕೆ ಅಗ್ರಸ್ಥಾನ ಇದೆ ಹಲವಾರು ಶತಮಾನಗಳಿಂದ ಭಾರತದಲ್ಲಿ ತುಪ್ಪವನ್ನು ವೈದ್ಯಕೀಯ ಔಷಧಿಯಾಗಿ ಬಳಸುತ್ತಿದ್ದಾರೆ. ಸಾಲ ಮಾಡಿ ಆದರೂ ತುಪ್ಪ ತಿನ್ನು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು ಅವರು ಹೀಗೆ ಹೇಳುವುದಕ್ಕೆ ಕಾರಣ ತುಪ್ಪದಲ್ಲಿರುವ ಅನೇಕ ಒಳ್ಳೆಯ ಅಂಶಗಳು ಔಷಧಿಯ ಗುಣಗಳು ತುಪ್ಪವು ದೇಹಕ್ಕೆ ಬಹಳ ಒಳ್ಳೆಯದು ಇದರಿಂದ ಬಿಡುಗಡೆಯಾಗುವ ಫ್ಯಾಟಿ ಆಸಿಡ್ ಗಳು ನಮ್ಮ ಚರ್ಮ ಹಾಗೂ ಇನ್ನಿತರೆ ಭಾಗಗಳನ್ನು ಸುರಕ್ಷಿತವಾಗಿಡುತ್ತವೆ

ಹಾಲುತುಪ್ಪ ದಿನನಿತ್ಯ ಸೇವಿಸುವುದು ತಮ್ಮ ಜೀವನದ ಒಂದು ಭಾಗ ಮಾಡಿಕೊಂಡವರ ಆರೋಗ್ಯ ತುಂಬಾ ಚೆನ್ನಾಗಿರುತ್ತೆ ಕಾರಣ ಹಾಲು ಮತ್ತು ತುಪ್ಪಗಳಲ್ಲಿರುವ ವಿಶೇಷ ಲ್ಯಾಕ್ಟಿನ್ ಎಂಬ ಪದಾರ್ಥ ಇದು ನಮ್ಮ ದೇಹದ ಎಲ್ಲಾ ಅಂಗಗಳಿಗೆ ಬೇಕಾದ ಫ್ಯಾಟಿ ಆಸಿಡ್ ಗಳನ್ನು ಸರಬರಾಜು ಮಾಡುತ್ತದೆ

ತುಪ್ಪದಲ್ಲಿರುವ ವೈರಸ್ , ಬ್ಯಾಕ್ಟೀರಿಯ ನೀರೊದಕ ಶಕ್ತಿಯು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ  ಕ್ಯಾನ್ಸರ್ ನಿರೋಧಕ ಗುಣಗಳಿವೆ ಕ್ಯಾನ್ಸರ್ ಬರದಂತೆ ಕಾಪಾಡುವ ಅಮೃತ  ತುಪ್ಪವಾಗಿದೆ.  ಆಯುರ್ವೇದ ಶಾಸ್ತ್ರದಲ್ಲಿ ತುಪ್ಪಕ್ಕೆ ಮೊದಲ ಸ್ಥಾನ ಇದನ್ನ ಭೂಲೋಕದ ಅಮೃತ ಎಂದು ಕರೆಯುತ್ತಾರೆ

ತುಪ್ಪದ ಔಷಧಿಯ ಗುಣಗಳು

ತುಪ್ಪವು ನಮ್ಮ ಆಯಸ್ಸನ್ನು ಹೆಚ್ಚು ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ .ಚರ್ಮಕ್ಕೆ ಒಳ್ಳೆಯ ಕಾಂತಿಯನ್ನು ನೀಡುತ್ತದೆ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ .ಮಲಬದ್ಧತೆ ನಿವಾರಣೆ ಮಾಡುತ್ತದೆ .ಕೂದಲು ಉದುರುವುದನ್ನು ತಡೆಯುತ್ತದೆ. ಬಿಳಿಯ ಕೂದಲುಗಳನ್ನು ಕಪ್ಪಾಗಿಸುತ್ತದೆ. ಮಕ್ಕಳಲ್ಲಿ ಬುದ್ಧಿಶಕ್ತಿ ಹೆಚ್ಚಾಗಲು ತುಪ್ಪ ಸೇವಿಸಬೇಕು. ವಯಸ್ಕರಲ್ಲಿ ಉಂಟಾಗುವ ಅಲ್ಜೈಮರ್ ಕಾಯಿಲೆ ತಡೆಗಟ್ಟಲು ಸಹಕಾರಿಯಾಗುತ್ತದೆ. ಮಂಡಿ ನೋವು  ನಿವಾರಕವಾಗಿ ಕೆಲಸ ಮಾಡುತ್ತದೆ ತುಪ್ಪವು ಆಸ್ತಿ ಮಜ್ಜೆ ಚಲನೆಗೆ ಸಹಕಾರಿಯಾಗುತ್ತದೆ .

ತುಪ್ಪ ಸೇವನೆ ಮಾಡದೆ ಇರುವುದರಿಂದ ಬರುವ ಕಾಯಿಲೆಗಳು

ಮರೆವಿನ ಕಾಯಿಲೆ. ಮಂಡಿ ನೋವು. ಹಲವಾರು ಚರ್ಮ ರೋಗಗಳು ಉಂಟಾಗುವ ಸಂಭವವಿರುತ್ತದೆ.

 ರಕ್ತದಲ್ಲಿ ಎಚ್ ಡಿ ಎಲ್ ಕಡಿಮೆಯಾಗುವ ಸಂಭವ ಇರುತ್ತೆ, 

ತುಪ್ಪ ತಯಾರಿಕೆ ವಿಧಾನ

ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಹಾಲನ್ನು ಕಾಸಿ ಅದರ ಕೆನೆಯಿಂದ ತುಪ್ಪವನ್ನು ತಯಾರಿಸುವ ಪದ್ಧತಿ ಹೆಚ್ಚಾಗುತ್ತಿದೆ .ಇದರಿಂದ ತುಪ್ಪದಲ್ಲಿರುವ ಅನೇಕ ಔಷಧೀಯ ಗುಣಗಳು ಈ ತುಪ್ಪವನ್ನು ಸೇವಿಸಿದಾಗ ನಮಗೆ ಸಿಗುವುದಿಲ್ಲ .ನಮಗೆ ತುಪ್ಪವನ್ನು ಸರಿಯಾದ ರೀತಿಯಲ್ಲಿ ತಯಾರಿಸಿದಾಗ ಮಾತ್ರ ಅದರ ಔಷಧಿಯ ಗುಣಗಳು ಸಿಗುತ್ತವೆ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ತಿಳಿಸಿದಂತೆ ಹಾಲಿನಿಂದ ಮೊಸರನ್ನ ತಯಾರಿಸಿ ಮೊಸರಿನಿಂದ ಬೆಣ್ಣೆ ತೆಗೆದು ತುಪ್ಪ ತಯಾರಿಸಿದಾಗ ಮಾತ್ರ ಅದರಲ್ಲಿನ ಔಷಧೀಯ ಗುಣಗಳು ನಮಗೆ ಸೇವಿಸಿದಾಗ ಲಭ್ಯವಾಗುತ್ತದೆ.ಹಸುವಿನ ಹಾಲಿನಿಂದ ತಯಾರಿಸಿದ ತುಪ್ಪವು ಬಹಳ ಶ್ರೇಷ್ಠವಾಗಿರುತ್ತದೆ.

ತುಪ್ಪವನ್ನು ಯಾವಾಗ ಸೇವಿಸಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು.

ಬೆಳಗ್ಗೆ ಎದ್ದ ತಕ್ಷಣ   ಒಂದು ಲೋಟ ಬಿಸಿನೀರಿಗೆ  5 ರಿಂದ 10ml  ತುಪ್ಪ ಸೇರಿಸಿ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ಸರಿಯಾದ ವಿಧಾನವಾಗಿದೆ. ತುಪ್ಪ ಸೇವಿಸುವಾಗ ತೆಗೆದುಕೊಳ್ಳಬಹುದಾದ ಪಥ್ಯಗಳು  ತುಪ್ಪವನ್ನು ತಂಗಳು ಅನ್ನದ ಜೊತೆಗೆ ಬೆರೆಸಿ ಸೇವಿಸಬಾರದು, ಮೊಸರಿನ ಜೊತೆ ಸೇವಿಸಬಾರದು ,ಜೇನುತುಪ್ಪದ ಜೊತೆಗೆ  ಸಮ ಪ್ರಮಾಣದಲ್ಲಿ ಬೇರೆಸಿ ಸೇವಿಸಬಾರದು ಈ ರೀತಿ ಸೇವಿಸುವುದರಿಂದ ಅನಾರೋಗ್ಯಕರವಾದ  ಪರಿಣಾಮಗಳು ಉಂಟಾಗಬಹುದು

ತುಪ್ಪದಿಂದ ಮಾಡಿದ ಸಿಹಿ ಪದಾರ್ಥಗಳು ಸೇವಿಸಿದ ಮೇಲೆ ಬಿಸಿ ನೀರನ್ನ ಕುಡಿಯಲೇಬೇಕು. ಏಕೆಂದರೆ ಇದರಿಂದ ಅಜೀರ್ಣದ ಸಮಸ್ಯೆ. ಹಾಗೂ ಆಸಿಡಿಟಿ  ಉಂಟಾಗುವ ಸಾಧ್ಯತೆ ಇರುತ್ತದೆ .ಗಂಟಲಲ್ಲಿ ಕೆರೆತ ಉಂಟಾಗಬಹುದು ತುಪ್ಪವನ್ನು ಬಿಸಿ ಆಹಾರದ ಜೊತೆಗೆ ಸೇವಿಸಿದಾಗ ನಮಗೆ ಸರಿಯಾದ ಲಾಭ ಸಿಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ತುಪ್ಪಗಳಲ್ಲಿ ಅಷ್ಟು ಔಷಧೀಯ ಗುಣಗಳಿರುವುದಿಲ್ಲ ಏಕೆಂದರೆ ಅದು ತಯಾರು ಮಾಡುವ ವಿಧಾನ ಪಾಶ್ಚರೀಕರಣ ವಿಧಾನವಾಗಿದೆ . 

ಯಾವ ಯಾವ ಕಾಯಿಲೆಗಳಿಗೆ ಯಾವ  ವಿಧಾನದಲ್ಲಿ ತುಪ್ಪ ಸೇವಿಸುವುದರಿಂದ ಕಾಯಿಲೆಗಳು ವಾಸಿ ಮಾಡಬಹುದು

 ಮಲಬದ್ಧತೆಯಿಂದ ಮೂಲವ್ಯಾಧಿ ,ಮಹಿಳೆಯರಲ್ಲಿ ಋತುಸ್ರಾವದ ಸಮಸ್ಯೆಗಳು, ಗರ್ಭಧಾರಣೆಯ ಸಮಸ್ಯೆಗಳು ,ಮಂಡಿ ನೋವು ಈ ರೀತಿ ಎಲ್ಲಾ ಕಾಯಿಲೆಗಳಿಗೂ ತುಪ್ಪವನ್ನು ಉಪಹಾರ ಸೇವಿಸುವುದಕ್ಕೂ ಮುಂಚೆ ಒಂದು ಚಮಚ ತುಪ್ಪವನ್ನು ಒಂದು ಲೋಟ ಬಿಸಿ ನೀರಲ್ಲಿ ಬೆರೆಸಿ ಸೇವಿಸಿದರೆ ಉಪಯುಕ್ತವಾಗುತ್ತದೆ.

ಹೃದಯ ಸಂಬಂಧಿತ ಕಾಯಿಲೆಗಳಲ್ಲಿ ಕಾಯಿಲೆಗಳಿಗೆ ತುಪ್ಪವನ್ನು ಊಪಹಾರದ ನಂತರ ಒಂದು ಚಮಚ ಬಿಸ್ನೀರಿಗೆ ಬೆರೆಸಿ ತೆಗೆದುಕೊಳ್ಳುವುದರಿಂದ ಪರಿಹಾರ ಸಿಗುತ್ತದೆ

 ಒಣ ಕೆಮ್ಮು ಅಥವಾ ಇನ್ನಿತರೆ ಶ್ವಾಸಕೋಶಗಳ ಸಮಸ್ಯೆಗಳಿಗೆ ತುಪ್ಪವನ್ನು ಬಿಸಿ ಆಹಾರದ ಜೊತೆಗೆ ಸೇವಿಸುವುದರಿಂದ ಈ ಕಾಯಿಲೆಗಳಿಂದ ದೂರವಾಗ ಬಹುದು.

 ಕೂದಲು ಉದುರುವುದು,ತಲೆನೋವಿನ ಸಮಸ್ಯೆಗಳು, ಕಿವಿನೋವಿಗೆ  ಸಂಬಂಧಿಸಿದ ಕಾಯಿಲೆಗಳು, ಕಣ್ಣಿನ ದೃಷ್ಟಿ ಕಡಿಮೆಯಾಗುವುದು, ಹಾಗೂ ಮಲಬದ್ಧತೆಯ ಸಮಸ್ಯೆ ,,ನಿದ್ರೆ ಕಡಿಮೆ ಮಾನಸಿಕ ಒತ್ತಡ, ಉದ್ವೇಗ, ಇಂತಹ ಸಮಸ್ಯೆಗಳಿಗೆ ರಾತ್ರಿ ಊಟವಾದ ನಂತರ ಒಂದು ಚಮಚ ತುಪ್ಪವನ್ನು ಒಂದು ಲೋಟ ಬಿಸಿ ನೀರಿಗೆ ಸೇರಿಸಿ ತೆಗೆದುಕೊಳ್ಳುವುದರಿಂದ ಈ ಸಮಸ್ಯೆಗಳಿಗೆ ಮುಕ್ತಿ ಹಾಡಬಹುದು

ತುಪ್ಪವನ್ನು ಬಾಹ್ಯವಾಗಿ ಯಾವ್ಯಾವ ಸಮಸ್ಯೆಗಳಿಗೆ ತೆಗೆದುಕೊಳ್ಳಬಹುದು

ನಾವು ತೆಗೆದುಕೊಳ್ಳುವ ಪ್ರತಿ ವಾಸನೆಯೂ ನಮ್ಮ ಮೂಗಿನಿಂದ ನೇರವಾಗಿ ಮೆದಳಿಗೆ ರವಾನೆ ಆಗುತ್ತದೆ ಅಲ್ಲಿರುವ ಜೀವಕೋಶಗಳಿಗೆ  ಕ್ರಿಯಾಶೀಲತೆಯನ್ನು ನೀಡುತ್ತದೆ. ಆದ್ದರಿಂದ ತುಪ್ಪವನ್ನು ರಾತ್ರಿ ಮಲಗುವ ಮುಂಚೆ ಎರಡು ಹನಿ  ಮೂಗಿಗೆ ಹಾಕಿಕೊಂಡು ಮಲಗುವುದರಿಂದ ನಿದ್ರೆಯು ಉತ್ತಮವಾಗುತ್ತದೆ. ನೆಗಡಿ ,ಮಲಗಿದಾಗ ಗೊರಕೆ ಬರುವುದು ಕಡಿಮೆಯಾಗುತ್ತದೆ ಹಾಗೂ ಮೆದುಳಿನ ಕ್ರಿಯಾಶೀಲತೆ ಹೆಚ್ಚುತ್ತದೆ .  ಬಿಸಿಯಾದ ಆಹಾರ ಪದಾರ್ಥಗಳಿಗೆ ತುಪ್ಪವನ್ನು ಬೆರೆಸಿ ತಿನ್ನುವುದರಿಂದ ಆಹಾರ ಪದಾರ್ಥಗಳಲ್ಲಿರುವ ವಿಟಮಿನ್ ಗಳು ಪ್ರೋಟೀನ್ ಗಳು ದೇಹಕ್ಕೆ ಹೀರಿಕೊಳ್ಳಲು ತುಪ್ಪ ಸಹಕಾರಿ. ಒಳ್ಳೆಯ ಕೊಬ್ಬು ದೇಹಕ್ಕೆ ಪೂರಕ ಎನ್ನುವುದು  ವೈಜ್ಞಾನಿಕವಾಗಿ ಸಾಬೀತಾಗಿರುವ ಅಂಶವಾಗಿದೆ. ಪ್ರತಿದಿನ ಊಟದ ಜೊತೆ ಒಂದಷ್ಟು ತುಪ್ಪ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ತುಪ್ಪದಲ್ಲಿನ ಕ್ಯಾಲೋರಿ ಪೋಷಕಾಂಶಗಳು ಬ್ಯಾಕ್ಟೀರಿಯ ವಿರುದ್ಧ ಹೋರಾಡುವ ಗುಣವನ್ನು ಹೊಂದಿವೆ ಆದ್ದರಿಂದ ಅನೇಕ ಪ್ರಯೋಜನಗಳಿವೆ ತುಪ್ಪವನ್ನು ಪ್ರತಿದಿನ ಉಪಹಾರಕ್ಕೆ ಅರ್ಧ ತಾಸು ಮುಂಚೆ ಬಿಸಿನೀರಿನೊಂದಿಗೆ ಸೇವಿಸುವುದರಿಂದ ನಾವು ಹಲವಾರು ರೋಗಗಳಿಂದ ದೂರವಿರಬಹುದು.

ತುಪ್ಪವು ಕೊಬ್ಬು ಕರಗುವ ವಿಟಮಿನ್ ಗಳು ಹಾಗೂ ಆರೋಗ್ಯಕರ ಫ್ಯಾಟಿ ಆಸಿಡ್ ಗಳಿಂದ ಕೂಡಿದೆ ತುಪ್ಪದಲ್ಲಿರುವ ಪ್ಯಾಟಿಕ್ ಆಮ್ಲವು ಕರುಳಿನ ಪದರದ ಆರೋಗ್ಯಕ್ಕೆ ನೆರವಾಗುತ್ತದೆ. ತುಪ್ಪವು ಜೀರ್ಣಕ್ರಿಯೆ ಹೆಚ್ಚಾಗುವಂತೆ ಮಾಡುತ್ತದೆ .ಶೀತಾ ಮತ್ತು ಕಟ್ಟಿದ ಮೂಗಿಗೆ ತುಪ್ಪ ಸೇವನೆ ರಾಮಬಾಣ ಎಂದು ಹೇಳಬಹುದು .ತುಪ್ಪದಲ್ಲಿರುವ ಅಮೈನೋ ಆಮ್ಲಗಳು ಕೊಬ್ಬನ್ನು ಕರಗಲು ಸಜ್ಜುಗೊಳಿಸಿ ಕೊಬ್ಬನ್ನು ಕುಗ್ಗಿಸಲು ಸಹಕಾರಿಯಾಗುತ್ತದೆ.  ಮಧುಮೇಹದಿಂದ ಬಳಲುತ್ತಿದ್ದರೆ ಅನ್ನ ಹಾಗೂ ಗೋಧಿಯಿಂದ ತಯಾರಿಸಿದ ಆಹಾರ ಸೇವನೆಯು ಒಳ್ಳೆಯದಲ್ಲ ಇವುಗಳು ಅಧಿಕ ಗ್ಲೈಕೋಜನಿಕ್ ಸಂಕೀರ್ಣ ಆಹಾರ ಪದಾರ್ಥಗಳೆಂದು ಕರೆಯುತ್ತಾರೆ ಇಂತಹ ಪದಾರ್ಥಗಳಿಗೆ ತುಪ್ಪವನ್ನು ಸವರಿ ತಿನ್ನುವುದರಿಂದ ಅವುಗಳ ಜೀರ್ಣಕ್ರಿಯೆ ಸರಾಗವಾಗಿ ಸಾಗುತ್ತದೆ ತುಪ್ಪದಲ್ಲಿರುವ ಪರಿಪೂರ್ಣ ಕೊಬ್ಬು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ನಾಶ ಮಾಡುತ್ತದೆ.











ಸ್ಕೌಟ್ಸ್ ಮತ್ತು ಗೈಡ್ಸ್‌ ವಿಶೇಷ ಮಾಹಿತಿ........

ಸ್ಕೌಟ್ಸ್‌ ಮತ್ತು ಗೈಡ್ಸ್

 ಪ್ರತಿ ವರ್ಷ ಫೆಬ್ರವರಿ 22 ರಂದು ವಿಶ್ವದಾದ್ಯಂತ ಸ್ಕೌಟ್ಸ್ ಮತ್ತು ಗೈಡ್ಸ್‌  ದಿನವನ್ನಾಗಿ ಆಚರಿಸಲಾಗುತ್ತದೆ.ಈ ದಿನ ಅಂತರಾಷ್ರ್ಟೀಯ ಸಂಸ್ಥೆಯಾಗಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಾಪಕರಾದ ಲಾರ್ಡ್ ಬೇಡೆನ್‌ ಪೊವೆಲ್‌ ರವರ ಜನ್ಮ ದಿನವಾಗಿದೆ.ಸದ್ಯ ಈ ಸಂಸ್ಥೆಯ ಸದಸ್ಯರ ಸಂಖ್ಯೆ 5 ಕೋಟಿ 70 ಲಕ್ಷವಾಗಿದೆ ಜಗತ್ತಿನ 176 ದೇಶಗಳಲ್ಲಿ ಈ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ.

ಬಾಯ್‌ ಸ್ಕೌಟ್ಸ್‌  ಅಥವಾ ಬಾಲಚಮೂಚಾರರು ಗಳ ಕಲ್ಪನೆ ಬಂದದ್ದು ಇಂಗ್ಲೆಡಿನ ಲಾರ್ಡ ಬೇಡೆನ್‌ ಪೊವೆಲ್‌ ರವರಿಗೆ1907 ರಲ್ಲಿ ಬಾಯ್‌ ಸ್ಕೌಟ್ಸ್ ಜನ್ಮ ತಾಳಲು ಕಾರಣವಾಯಿತು.

ಈ ಸಂಸ್ಥೆಯ ಗುರಿ ಮತ್ತು ಉದ್ದೇಶಗಳು

ಬಾಲಕರ ದೇಹ ಹಾಗು ಮನಸ್ಸುಗಳನ್ನು ಆರೋಗ್ಯಕರವಾಗಿ ಬೆಳೆಸುವುದು.

ಅವರನ್ನು ತಮ್ಮ ಸಮುದಾಯದ ಅಥವಾ ದೇಶದ ಅಥವಾ ಜಗತ್ತಿನ ಉತ್ತಮ ಪ್ರಜೆಗಳನ್ನಾಗಿ ಮಾಡುವುದು ಮತ್ತು ಇದಕ್ಕಾಗಿ ಅವರಿಗೆ ತರಬೇತಿ ನೀಡುವುದು

ವಿಶ್ವದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿಯನ್ನು ಯಾವುದೇ ಮತ ಪಂಥಗಳಿಗೆ ಅನ್ವಯಿಸದಂತೆ ಬೆಳೆಸಿ ಯಶಸ್ಸು ಕಂಡವರು ಲಾರ್ಡ್ ಬೆಡನ್ ಪೊವೆಲ್ .

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಧ್ಯೇಯ ವಾಕ್ಯ ಬಿ ಪ್ರಿಪೇರ್ಡ್ ಅಂದರೆ ನಿನ್ನ ಕರ್ತವ್ಯವನ್ನು ಮಾಡಲು ಸದಾ ಸಿದ್ದನಾಗಿರು ಎಂದು ಅರ್ಥ ಸೇವೆಯೇ ಸ್ಕೌಟ್ಸ್ ಮತ್ತು ಗೈಡ್ಸ್ ಗಳ ಪರಮ ಗುರಿ ನಿಸ್ವಾರ್ಥ ಮನೋಭಾವ ಪರೋಪಕಾರ ಇವು ಈ ಸಂಸ್ಥೆಯ ಆದರ್ಶಗಳು.

ಭಾರತದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಇದ್ದು ಇದರ  ಕರ್ನಾಟಕದ ಶಾಖೆ  ಬೆಂಗಳೂರಿನಲ್ಲಿ ಇದೆ ಈ ಸಂಸ್ಥೆಯು ಹಲವಾರು ಪರೋಪಕಾರಿಗಳಲ್ಲಿ ತೊಡಗಿದೆ ಈ ಸಂಸ್ಥೆಯ ಧ್ಯೇಯ ಉದಾತ್ತವಾಗಿದ್ದು . ಸಮಾಜದಲ್ಲಿನ ಎಲ್ಲರೂ ನಿನ್ನ ಬಂಧುಗಳು ಎಂಬುದನ್ನು ಚಿಕ್ಕಂದಿನಲ್ಲಿಯೇ ಕಲಿಸುತ್ತಾ ಹೋಗುತ್ತದೆ.

ಲಾರ್ಡ್ ಬೆಡನ್ ಪೊವೆಲ್‌ ರವರ ಸಂಕ್ಷೀಪ್ತ ಮಾಹಿತಿ

ಲಾರ್ಡ್ ಬೆಡನ್ ಪೊವೆಲ್‌ ರವರು 1857ರ ಫೆಬ್ರವರಿ 22ರಂದು ಲಂಡನ್ ಪಟ್ಟಣದಲ್ಲಿ ಜನಿಸಿದರು ಇವರ ತಂದೆ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದರು ಬಾಲ್ಯದಿಂದಲೂ ಪ್ರತಿಬಾವಂತರಾಗಿದ್ದಬೇಡೆನ್ ಪೊವೆಲ್‌ ರವರು ತಮ್ಮ ಹತ್ತೊಂಬತ್ತನೆ ವಯಸ್ಸಿಗೆ ಸೈನ್ಯಕ್ಕೆ ಸೇರಿದರು.ಸ್ವಾರಸ್ಯದ ಸಂಗತಿ ಎಂದರೆ ಭಾರತದಲ್ಲಿ ಹಲವು ವರ್ಷಗಲ ಕಾಲ ಸೈನ್ಯದಲ್ಲಿದ್ದು ಸೇನಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ಅಫ್ಘಾನಿಸ್ಥಾನ,ಆಫ್ರಿಕಾಗಳಲ್ಲಿ ಕೂಡ ಸೇವೆ ಸಲ್ಲಿಸಿದ್ದಾರೆ. ಆಪ್ರಿಕಾದಲ್ಲಿ ನಡೆದ ಬೋಯರ್‌ ಯುದ್ದದಲ್ಲಿ ಭಾಗವಹಿಸಿದ್ದಾರು. ನಂತರ ಅವರಿಗೆ ಸೇನೆಯಲ್ಲಿ ಮೇಜರ್‌ ಜನರಲ್‌ ಹುದ್ದೆ ನೀಡಲಾಯಿತು.ಯುದ್ದ ಭೂಮಿಯಲ್ಲಿ ಪೊವೆಲ್‌ ವೀರ ಯೋಧರಾಗಿರುತ್ತಿದ್ದರು.

ಸ್ಕೌಟ್ಸ ಚಳುವಳಿಯನ್ನು ಪೊವೆಲ್‌ ರವರು ಆರಂಭಿಸಿದ್ದೆ  ಒಂದು ರೋಮಾಂಚಕಾರಿ ಅನುಭವ .ಒಮ್ಮೆ ಅಂದರೆ 1907 ರಲ್ಲಿ ಬ್ರೌನ್‌ ಸೀ ದ್ವೀಪದಲ್ಲಿ ಒಂದು ಶಿಬಿರ  ನಡೆದು ಯಶಸ್ವಿಯಾದಾಗ ಅಲ್ಲಿ ಪಡೆದ ಅನುಭವಗಳ ಕುರಿತು ಪೊವೆಲ್‌ 1908 ರಲ್ಲಿಸ್ಕೌಟಿಂಗ್‌ ಫಾರ್‌ ಬಾಯ್ಸ್‌ ಎಂಬ ಪುಸ್ತಕವನ್ನು ಬರೆದರು. ಇದೇ ಅವರಿಗೆ ಸ್ಕೌಟ್ಸ್‌  ಚಳುವಳಿ ಪ್ರಾರಂಭಿಸಲೂ ಸ್ಪೂರ್ತಿ ನೀಡಿತು ಇದು  ಆರಂಭವಾದ ಕೆಲವೇ ವರ್ಷಗಳಲ್ಲಿ ಇಡೀ ವಿಶ್ವದ ಹಲವೆಡೆಗಳಲ್ಲಿ ಅಸ್ತಿತ್ವಕ್ಕರ ಬಂದು ಬಾಲಕರು ಅಧಿಕ ಸಂಖ್ಯೆಯಲ್ಲಿ  ಸ್ಕೌಟ್ಸ್‌ ಕಾರ್ಯಕ್ರಮಗಳಲ್ಲಿ ಭಾಗವಹಿಸತೊಡಗಿದರು.ಸ್ಕೌಟಿಂಗ್‌ ಒಂದು ಸೇವಾ ಕಾರ್ಯ. ಬೇಡೆನ್‌ ಪೊವೆಲ್‌ ತಾವು ಗಳಿಸಿಕೊಂಡಿದ್ದ ಅಪಾರ ಅನುಭವವನ್ನು  ಸ್ಕೌಟ್ಸ್‌ ಚಳುವಳಿಯ ಉನ್ನತಿಗೆ ಧಾರೆ ಎರೆದರು.ಪ್ರತಿಯೊಬ್ಬ ಬಾಲಕ ಯುವಕನು ಸೇವಾಕಾರ್ಯಗಳಲ್ಲಿ ಭಾಗಿಯಾಗಿ ವಿಶ್ವಮಾನವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲೂ ಈ ಚಳುವಳಿ ನೆರವಾಯಿತು.

ಕೇವಲ ಬಾಲಕರಿಗೆ ಅಲ್ಲದೆ ಬಾಲಕಿಯರಿಗೂ ಅವಕಾಶ ಕಲ್ಪಿಸಲು ಸ್ಕೌಟ್ಸ್‌ ಮಾದರಿಯ ಚಳುವಳಿಯನ್ನು  1910 ರಲ್ಲಿ ಆರಂಭಿಸಿದರು ಇದಕ್ಕಿಟ್ಟ ಹೆಸರು‌ ಗರ್ಲ್ ಗೈಡ್‌ ಚಳುವಳಿ  ಇದುಬಾಲಕಿಯರಲ್ಲಿ ಬಾಹ್ಯ ಚಟುವಟಿಕೆಗಳ ಜೊತೆಗೆ ಗೃಹ ಕೃತ್ಯಗಳಲ್ಲಿ ಅವರನ್ನು ಪರಿಣಿತಿಗೊಳಿಸಲು ತರಬೇತಿ ನೀಡಲಾಗುತ್ತದೆ . ಈ ಸಂಸ್ಥೆಯು ಇಂದು ಅಂತಾರರಾಷ್ಟೀಯ ಮಟ್ಟದವರೆಗು ಬೆಳೆದಿದೆ.

ನಮ್ಮ ರಾಜ್ಯದಲ್ಲಿ1918 ರಲ್ಲಿಬಾಯ್‌ ಸ್ಕೌಟ್ಸ ಸಂಸ್ಥೆಯೂ ,1927 ರಲ್ಲಿ ಗರ್ಲ್‌ ಗೈಡ್ಸ್‌ ಸಂಸ್ಥೆಯು ಆರಂಭವಾದವು ಈ ಸಮಸ್ಥೆಯು ಹಲವಾರು ಉಪಯುಕ್ತ ಚಟುವಟಿಕೆಗಳಲ್ಲಿ ತೊಡಗಿದೆ ಗ್ರಾಮೀಣ ಅಭಿವೃದ್ದಿ, ವಯಸ್ಕರ ಶಿಕ್ಷಣ, ಕುಷ್ಟರೋಗ ನಿಯಂತ್ರಣ ಮೊದಲಾದ ಸಮಾಜ ಸೇವಾ ಕಾರ್ಯ ಗಳಲ್ಲಿ ತೊಡಗಿದೆ .ಇಂದಿಗೂ ಇ ಸಮಸ್ಥೆಯು ಎಲ್ಲೆ ಅವಘಡಗಳಾಗಲಿ ಮುಂದಿರುತ್ತದೆ ಮತ್ತು ಹಲವಾರು ಕಾರ್ಯಕ್ರಮಗಳಲ್ಲಿ ಸೇವಾ ಕಾರ್ಯ ಮುಂದುವರೆಸಿದೆ.‌ ನಿಮ್ಮ ಮನೆಯ ಮಕ್ಕಳು ಯಾರಾದರು ಸ್ಕೌಟ್ಸ್‌ ಮತ್ತು ಗೈಡ್ಸ್‌ ಸೇರುತ್ತೇನೆ ಎಂದರೆ ಅನುಮತಿ ಕೊಡಿ ಅದು ನಿಮ್ಮ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಎಲ್ಲ ಮಕ್ಕಳೊಂದಿಗೆ ಬೆರೆತು ಕೂಡಿ ಬಾಳುವ ಹಾಗೂ ಹಂಚಿಕೊಂಡು ತಿನ್ನುವ ಗುಣ ಬೆಳೆಸಿಕೊಳ್ಳತ್ತಾರೆ.










ಟೀ,ಕಾಫಿ , ಕುಡಿಯೋರು ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು.....




ಟೀ,ಕಾಫಿ , ಕುಡಿಯೋರು ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು.....
ಟೀ ಅಥವಾ ಕಾಫಿ ಎಂದ ತಕ್ಷಣ ನಮಗೆ ನೆನಾಪಾಗುವ ದೃಶ್ಯ ಬೆಳಗಿನ ಜಾವ  ಸಣ್ಣ ಸಣ್ಣ ಅಂಗಡಿಗಳ ಮುಂದೆ ನಿಂತಿರುವ ಜನ ಸಮೂಹ ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲಿ ಈ ದೃಶ್ಯ ಸಾಮಾನ್ಯವಾಗಿ ಕಾಣುತ್ತೇವೆ. ನಮ್ಕ ದೇಶದಲ್ಲಿ ಕಾಫಿ ಅಥವಾ ಟೀ ಮಾತ್ರ ಎಲ್ಲರ ಮನೆಯಲ್ಲೂ ಸಿಗುವಂತಹ ಪಾನೀಯ. ಕೆಲವರಿಗೆ ಒಂದು ಸಲ ಕುಡಿದರೆ ಮತ್ತೇ ಕುಡಿಯಬೇಕೆಂಬ ಆಸೆ. ಮತ್ತೇ ಕೆಲವರಿಗೆ ಕಾಫಿ ಕುಡಿಯದಿದ್ದರೆ ಎನೋ ಕಳೆದುಕೊಂಡ ಅನುಭವ ಆಗಿರುತ್ತದೆ.

ಕಾಫಿ ಅಥವಾ ಟೀ ಗಳಲ್ಲಿ ಹಲವಾರು ವಿಧಗಳಿವೆ  ಗ್ರೀನ್‌ ಟೀ, ಸಾಮಾನ್ಯ ಟೀ, ಹೀಗೆ ಹಲವಾರು ವಿಧ ಕಾಣುತ್ತೇವೆ.ಅದರೆ ನಮ್ಮ ದೇಹಕ್ಕೆ ಅಗತ್ಯವಾದ ಮತ್ತು ನಮ್ಮ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಪಾನೀಯದ ಕುರಿತು ತಿಳಿಯೋಣ.ತೂಕ ಇಳಿಕೆ,ಹಾಗು ಇನ್ನಿತರ ದೇಹ ಹಾಗು ಮಾನಸಿಕ ಸುಧಾರಣೆಗಾಗಿ ಬಹಳಷ್ಟು ಜನರು ಬೇರೆ ಬೇರೆ ಪಾನೀಯಗಳನ್ನು ಪ್ರಮೋಟ್‌ ಮಾಡುತ್ತಿದ್ದಾರೆ ಅದರೆ ಅವುಗಳಿಗೆ ಯಾವುದೇ ಆಧಾರವಿಲ್ಲ ಅದರೆ ಬ್ಲಾಕ್‌ ಕಾಫಿಯ ಕುರಿತು ಹಲವಾರು ಸಂಶೋದನೆಗಳು ಬಂದಿವೆ. ಈ ಸಂಶೋದನೆಗಳು ಬ್ಲಾಕ್‌ ಕಾಫಿ ಮಾನವನ ದೈಹಿಕ ಹಾಗು ಮಾನಸಿಕ ಆರೋಗ್ಯಕ್ಕೆ ಬಹಳ ಉತ್ತಮ ಎಂಬುದನ್ನು ತಿಳಿಸಿಕೊಟ್ಟಿವೆ ಇದರಲ್ಲಿರುವ ನಿಕೋಟಿನ್‌  ನರಮಂಡಲಗಳಲ್ಲಿ ರಕ್ತ ಸರಬರಾಜನ್ನು ವೇಗಗೊಳಿಸುತ್ತದೆ. ಇದರಿಂದ ನಮ್ಮ ಮೆದುಳು ಸಹ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತದೆ. ಹೀಗೆ ಹಲವಾರು ಉತ್ತಮ ಪ್ರಯೋಜನ ಗಳಿವೆ ಎಂಬುದನ್ನುತೋರಿಸಿವೆ.ಅದರೆ ಇದನ್ನು ಸರಿಯಾದ ವಿಧಾನದಲ್ಲಿ ಸೇವಿಸಿದಾಗ ಮಾತ್ರ ಇದರ ಉಪಯೋಗವಾಗುತ್ತದೆ.  

ಬ್ಲಾಕ್‌ ಕಾಫಿ ಕುರಿತು ಮಾಹಿತಿ...

ನಾವು ಕಾಫಿ ಪುಡಿಗೆ ಯಾವುದೇ ಹಾಲು ,ಸಕ್ಕರೆ, ಮಿಶ್ರಣ ಮಾಡದಂತೆ ಕೇವಲ ಬಿಸಿ ನೀರನ್ನು ಸೇರಿಸಿ ಕುಡಿಯುವ ಕಾಫಿಯನ್ನು ಬ್ಲಾಕ್‌ ಕಾಫಿ(black coffe) ಎನ್ನುವರು .ಈ ಬ್ಲಾಕ್‌ ಕಾಫಿ ಸೇವನೆಯಿಂದ ನಮಗೆ ಬಹಳ ಉಪಯೋಗವಿದೆ . ಬ್ಲಾಕ್ ಕಾಫಿ ಒಂದು ಆರೋಗ್ಯ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತದೆ. ಸರಿಯಾದ ಸಮಯದಲ್ಲಿ ಸೇವನೆ ಮಾಡಿದರೆ ನಮ್ಮ ದೇಹದಲ್ಲಿ ಆರೋಗ್ಯಕರ ಬದಲಾವಣೆಗಳು ಉಂಟಾಗುತ್ತವೆ .ನಾವು ಜಿಮ್‌,ಅಥವಾ ಯಾವುದೇ ವ್ಯಾಯಮ ಮಾಡುತ್ತಿದ್ದರೆ   ಬ್ಲಾಕ್‌ ಕಾಫಿ ತೆಗೆದುಕೊಂಡು ಶುರು ಮಾಡುವುದು ಉತ್ತಮ.ಎಕೆಂದರೆ  ಇದು ನಮ್ಮ ದೇಹದಲ್ಲಿನ ಕೊಬ್ಬಿನ ಅಂಶಗಳನ್ನು ಕರಗಿಸಿ ಫ್ಯಾಟಿ ಕೋಶಗಳನ್ನು ಫ್ಯಾಟಿ ಆಸಿಡ್ಗಳಾಗಿ ಪರಿವರ್ತಿಸಿ ನಮ್ಮ ವ್ಯಾಯಮಕ್ಕೆ ಹೆಚ್ಚಿನ ಶಕ್ತಿ ದೊರೆಯುವಂತೆ ಮಾಡುತ್ತದೆ ಬ್ಲಾಕ್‌ ಕಾಫಿ ಕುಡಿದು ನಮ್ಮ ಕೆಲಸ ಶುರು ಮಾಡುವುದರಿಂದ  ನಮ್ಮ ದೇಹದಲ್ಲಿ ಶೇ 50 ರಷ್ಟು metabolisam ಕಾರ್ಯೋನ್ಮಕವಾಗುತ್ತದೆ.ಈ ಮುಖಾಂತರ ಇಡೀ ದಿನ ನಾವು ಚಟುವಟಿಕೆಯಿಂದ ಕೆಲಸ ಮಾಡಲು ಸಹಕಾರಿಯಾಗುತ್ತದೆ.

ಬ್ಲಾಕ್ ಕಾಫಿ ಸೇವನೆಯಿಂದ ಉಂಟಾಗುವ ಲಾಭಗಳೇನು ತಿಳಿದುಕೊಳ್ಳೋಣ

ಸಾಮಾನ್ಯವಾಗಿ ಜನರಲ್ಲಿ ವಯಸ್ಸಾದಂತೆ ಜ್ಞಾಪಕ ಶಕ್ತಿಯ ಪ್ರಮಾಣ ಕುಸಿಯುತ್ತಾ ಹೋಗುತ್ತದೆ ಆದರೆ ಬ್ಲಾಕ್ ಕಾಫಿ ಸೇವನೆಯಿಂದ ನಮ್ಮ ಮೆದುಳಿನಲ್ಲಿರುವ ಜೀವಕೋಶಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ನಿಧಾನವಾಗಿ ಜ್ಞಾಪಕ ಶಕ್ತಿಯ ವೃದ್ಧಿ ಆಗುತ್ತದೆ ಹಾಗೂ ಇಡೀ ದಿನ ಚಟುವಟಿಕೆಯಿಂದ ಪಾಲ್ಗೊಳ್ಳುವಂತೆ ಕಾರ್ಯನಿರ್ವಹಿಸುತ್ತದೆ

ಹಾಗೆಯೇ ನರಮಂಡಲಕ್ಕೆ ಸಂಬಂಧಿಸಿದ ಡೆಮಾನ್ಷಿಯ ಎಂಬ ಕಾಯಿಲೆಯಿಂದ ನಮ್ಮನ್ನು ದೂರ ಮಾಡುತ್ತದೆ. ವ್ಯಾಯಾಮ ಮಾಡುವ ಮುನ್ನ ಬ್ಲಾಕ್ ಕಾಫಿ ಸೇವನೆಯಿಂದ ವ್ಯಾಯಾಮ ಮಾಡುವವರ ಕಾರ್ಯಕ್ಷಮತೆ ಹೆಚ್ಚುತ್ತಾ ಹೋಗುತ್ತದೆ

ಬ್ಲಾಕ್ ಕಾಫಿ ದೇಹದಲ್ಲಿನ ಕೊಬ್ಬಿನ ಜೀವಕೋಶಗಳನ್ನು ಕರಗಿಸಿ ಕೊಬ್ಬಿನ ಆಸಿಡ್ ಗಳಾಗಿ ಪರಿವರ್ತಿಸಿ ಇದನ್ನು ಶಕ್ತಿಯ ರೂಪದಲ್ಲಿ ಪರಿವರ್ತಿಸುತ್ತದೆ

ಬ್ಲಾಕ್ ಕಾಫಿ ನಮ್ಮ ಯಕೃತ್ತಿಗೆ ಅಮೃತವೆಂದೇ ಹೇಳಬಹುದು ಇದು ಯಕೃತ್ತಿನಲ್ಲಿರುವ ಕೊಬ್ಬಿನ ಅಂಶಗಳನ್ನು ಕರಗಿಸಿ ಯಕೃತ್ತನ್ನು ಸುಸ್ಥಿತಿಯಲ್ಲಿಡಲು ಸಹಕರಿಸುತ್ತದೆ ಹಾಗೂ ಯಕೃತ್ತಿಗೆ ಸಂಬಂಧಿಸಿದ ಅನೇಕ ಕಾಯಿಲೆಗಳಿಂದ ದೂರವಿಡುತ್ತದೆ ಮುಖ್ಯವಾಗಿ ಯಕೃತ್ತಿನ ಕ್ಯಾನ್ಸರ್ ಬೇಗ ಹರಡಬಹುದಾದ ಹಾಗೂ ವಾಸಿ ಮಾಡದ ಕಾಯಿಲೆಯಾಗಿದೆ ಇಂತಹ ಕಾಯಿಲೆಯಿಂದ ದೂರವಿರಲು ಬ್ಲಾಕ್ ಕಾಫಿ ಕುಡಿಯುವುದರಿಂದ ಸಾಧ್ಯ.

ನಮ್ಮ ಜಠರದಲ್ಲಿನ ಎಲ್ಲ ಕಲ್ಮಶಗಳನ್ನು ಹಾಗೂ ವಿಷಕಾರಿ ಅಂಶಗಳು ಬ್ಯಾಕ್ಟೀರಿಯಗಳನ್ನು ಮೂತ್ರದ ಮುಖಾಂತರ ಹೊರಹಾಕಲು ಬ್ಲಾಕ್ ಕಾಫಿ ಸಹಕಾರಿಯಾಗಿದೆ.

ಬ್ಲಾಕ್ ಕಾಫಿಯಲ್ಲಿರುವ ಕೆಫಿನ್ ಅಂಶವು ನಮ್ಮನ್ನು ಒತ್ತಡ ಮತ್ತು ಖಿನ್ನತೆಗಳಿಂದ ದೂರವಿರಿಸುತ್ತದೆ ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳಿಂದಾಗಿ ಕ್ಲೋರೋಜಿನಿಕ್ ಆಸಿಡ್ ಮತ್ತು ಮೆಲನೋಡಿನಿನ್ ಅಂಶಗಳು‌ ದೇಹದಲ್ಲಿರುವ ಬ್ಯಾಕ್ಟೀರಿಯಗಳನ್ನು ನಿಯಂತ್ರಿಸುತ್ತವೆ ಕೆಫಿನ್ ನಮ್ಮ ದೇಹದಲ್ಲಿ ಹೆಚ್ಚು ಕ್ಯಾಲೋರಿಗಳು ಖರ್ಚಾಗುವಂತೆ ನೋಡಿಕೊಳ್ಳುತ್ತದೆ

ನಿದ್ರೆ ಬಾರದೇ ಇರುವವರು ಮಧ್ಯಾಹ್ನ 3:00 ಒಳಗೆ 2 ರಿಂದ 3 ಕಪ್ ಸೇವಿಸುವುದರಿಂದ ಇದರ ಉಪಯೋಗವನ್ನು ಪಡೆದುಕೊಳ್ಳಬಹುದು ಮೂರು ಗಂಟೆ ನಂತರ ತೆಗೆದುಕೊಂಡರೆ ಕೆಫಿನ್ ಎಂಬ ರಸಾಯನ ಎಂಟು ಗಂಟೆಯವರೆಗೂ ನಿದ್ರೆ ಬರದಂತೆ ನಮ್ಮ ಮೆದುಳನ್ನು ಕ್ರಿಯಾಶೀಲವಾಗಿಟ್ಟಿರುತ್ತದೆ ಆದ್ದರಿಂದ ಅವರಿಗೆ ರಾತ್ರಿ ನಿದ್ದೆ ಮಾಡಲು ಅನುಕೂಲವಾಗುವುದಿಲ್ಲ


ಬ್ಲಾಕ್ ಕಾಫಿಯಲ್ಲಿರುವ ಅಂಶಗಳು

ವಿಟಮಿನ್ d2, ವಿಟಮಿನ್ d3, ವಿಟಮಿನ್ d5, ಪೊಟ್ಯಾಶಿಯಂ, ಮೆಗ್ನೀಷಿಯಂ, ಮ್ಯಾಂಗನೀಸ್, ನಂತಹ ಅಮೂಲ್ಯ ವಿಟಮಿನ್ ಗಳನ್ನು ಬ್ಲಾಕ್ ಕಾಫಿ ಒಳಗೊಂಡಿದೆ ಹಾಗೂ ಒಂದು ಕಪ್ ಬ್ಲಾಕ್ ಕಾಫಿ2 ಕ್ಯಾಲೋರಿ ಯಷ್ಟು ಒಟ್ಟು ಶಕ್ತಿ ಇರುತ್ತದೆ ಅದರಲ್ಲಿ  0.3 ಗ್ರಾಂ ಪ್ರೋಟೀನ್  ಉಳಿದಂತೆ  ವಿಟಮಿನ್ ಗಳು  ಇರುತ್ತವೆ .

ಇಷ್ಟೆಲ್ಲಾ ಉಪಯೋಗವಿರುವ ಬ್ಲಾಕ್ ಕಾಫಿ ಯನ್ನು ದಿನನಿತ್ಯ ಸೇವಿಸಿ ಹಲವಾರು ರೋಗಗಳಿಂದ ವಿಮುಕ್ತರಾಗೋಣ ಹಾಗೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ.



ಹಣ ಉಳಿತಾಯ ವ್ಯವಸ್ಥಿತ ವಾಗಿ ಮಾಡುವುದು ಹೇಗೆ.....?



ಹಣ ಉಳಿತಾಯ ಮಾಡಲು ಸರಳ ಜೀವನ ಶೈಲಿ ಅಗತ್ಯ.....

 ಇಂದಿನ ಯುವ ಪೀಳಿಗೆ  ದುಡಿದ ಹಣವನ್ನು ಉಳಿತಾಯ ಹೇಗೆ ಮಾಡಬೇಕು ಎಂಬುದರ ಬಗ್ಗೆ ಗಮನ ಹರಿಸುತ್ತಿಲ್ಲ. ತಾವು ದುಡಿದ ಹಣವನ್ನು ದುಬಾರಿ ಬಟ್ಟೆ, ದುಬಾರಿ ವಸ್ತುಗಳ ಖರೀದಿಗೆ ವಿನಿಯೋಗಿಸುತ್ತಾರೆ ಇದರಿಂದ ನಾವು ಮಧ್ಯಮ ವರ್ಗದಿಂದ ಆಚೆಗೆ ಬರಲು ಆಗುವುದಿಲ್ಲ  ನಮ್ಮ ಇಂದಿನ ಪರಿಸ್ಥಿತಿಗೆ ನಮ್ಮ ಆಲೋಚನೆಗಳೆ ಕಾರಣ . ನಮ್ಮ ಜೀವನ ಶೈಲಿಯು ನಮ್ಮ ಅರ್ಥಿಕ ಸ್ಥಿತಿಯನ್ನು ತಿಳಿಸಿಕೊಡುತ್ತದೆ .ನಮ್ಮ ಅರ್ಥಿಕ ಪರಿಸ್ಥಿತಿ ಸುಧಾರಿಸಬೇಕಾದರೆ ನಾವು ಸರಳ ಜೀವನ ಶೈಲಿ ರೂಢಿಸಿಕೊಂಡಾಗ ಮಾತ್ರ ಸಾಧ್ಯ .

 ಉಳಿತಾಯ ಮಾಡುವುದು ಎಂದರೆ   ಸರಳ  ಜೀವನ  ಶೈಲಿಯ ಭಾಗವು ಆಗಿದೆ ನಾವು ಮಧ್ಯಮ ವರ್ಗದವರಾಗಿದ್ದರೇ  ಶ್ರೀಮಂತರಂತೆ  ಕಾರು ಖರೀದಿಸುವುದು, ಇತರೆ ದುಂದು ವೆಚ್ಚಗಳನ್ನು   ಮಾಡಿದಾಗ ನಾವು ಅರ್ಥಿಕವಾಗಿ ಸಬಲರಾಗುವುದಿಲ್ಲ ನಮ್ಮ ಬಳಿ ಎಷ್ಟೇ ಹಣವಿದ್ದರು ನಾವು ನಮಗೆ ಅವಶ್ಯಕತೆ ಇರುವಷ್ಟು ಖರ್ಚನ್ನು ಮಾಡಿದಾಗ ಮಾತ್ರ ನಾವು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೆವೆ  ಎಂದರ್ಥ. ಬದುಕಿನ ಹಲವಾರು ತೊಂದರೆಗಳಿಗೆ ಹಣದಿಂದ ಪರಿಹಾರ ಸಿಗುತ್ತದೆ ಎಂಬುದು ಕಟು ಸತ್ಯ. ನಮ್ಮ ಆನೇಕ ಒತ್ತಡ,ಹಾಗೂ ಉದ್ವಿ಼ಙ್ಞಗಳಿಗೆ  ಹಣವೇ ಕಾರಣವಾಗಿರುತ್ತದೆ. 

ಮನೆ  ಬಜೆಟ್‌ ಅಗತ್ಯ ಎಕೆ?

ನಮ್ಮ  ಹಣಕಾಸು ಉಳಿತಾಯದ ಯೋಜನೆಯನ್ನು ಸಣ್ಣ ವಯಸ್ಸಿನಿಂದ ಪ್ರಾರಂಭಿಸಬೇಕು ಅಂದರೆ 23 ಅಥವಾ 24 ನೇ ವರ್ಷದಿಂದ ಪ್ರಾರಂಭಿಸಿದಾಗ ಧೀರ್ಘ  ಅವಧಿಯಲ್ಲಿ ನಾವು ಮಧ್ಯಮ ವರ್ಗದಿಂದ ಆಚೆ ಬಂದು ನಾವು ಅಂದುಕೊಂಡಿರುವ ಜೀವನ ಸಾಗಿಸಲೂ ಸಹಕಾರಿಯಾಗುತ್ತದೆ ನಮಗೆ ಬರುವ ಸಂಬಳ ಎಷ್ಟೇ ಚಿಕ್ಕದಾಗಿರಲಿ ನಾವು ಅದರ ಶೇಕಡಾ 25 ರಷ್ಟು ಭಾಗವನ್ನು ಉಳಿತಾಯಕ್ಕಾಗಿ ಎತ್ತಿಡಬೇಕು . ಅದರಲ್ಲಿ ಸಲ್ಪ ಪ್ರಮಾಣದ ಹಣವನ್ನು ಬ್ಯಾಂಕಗಳ ಎಫ್ ಡಿ ಯಲ್ಲಿ ಈ ಹಣ ಅವಶ್ಯಕತೆಗೆ ತಕ್ಕಂತೆ ಬಳಸಲು  ಸಾಧ್ಯವಾಗುತ್ತದೆ  ಮತ್ತು ಸ್ವಲ್ಪ ಪ್ರಮಾಣದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ನಾವು ಚಿಕ್ಕ ವಯಸ್ಸಿನಿಂದ ಹೂಡಿಕೆ ಮಾಡುತ್ತಾ ಹೋದಾಗ ಧೀರ್ಘ ಅವಧಿಯಲ್ಲಿ ಅದು ನಮ್ಮನ್ನು ಸ್ವಾವಲಂಬಿಯಾಗಿ ರೂಪಿಸುತ್ತದೆ  .ಆದ್ದರಿಂದ  ಹಣ ಉಳಿತಾಯದ ಮೊದಲ ಹೆಜ್ಜೆಯನ್ನು ನಾವು ಮನೆಯ ಬಜೆಟ್ ನಿಂದ ಆರಂಭಿಸಬೇಕು.  ಮನೆಯ ಬಜೆಟ್ ಎಂಬುದು ಎಲ್ಲರೂ ನಿರ್ಲಕ್ಷ ಮಾಡುವ ವಿಷಯವಾಗಿದೆ. ಆದರೆ ನಾವು ಮಾಡುವ ಸಣ್ಣ ಸಣ್ಣ ಖರ್ಚುಗಳೇ ದೀರ್ಘಾವಧಿಯಲ್ಲಿ ಗಮನಿಸಿದಾಗ ದೊಡ್ಡ ಮೊತ್ತವಾಗಿ ಕಾಣುತ್ತವೆ. ದೇಶದಲ್ಲಿನ  ಹಾಗೂ ಹೋಗು ಗಳನ್ನು ಎಲ್ಲ ಗಮನಿಸುತ್ತೇವೆ, ಆದರೆ ಸ್ವಯಂ ನಮ್ಮ ಮನೆಯಲ್ಲಿ ಉಂಟಾಗುವ ಖರ್ಚುಗಳ ಬಗ್ಗೆ ಬಹಳಷ್ಟು ಜನ ನಾವು ಗಮನಿಸುವುದೇ ಇಲ್ಲ ಆದ್ದರಿಂದ ನಾವು ಮನೆಯ ಬಜೆಟನ್ನು ಗಮನಿಸುತ್ತಾ ಹೋಗಬೇಕು ದೇಶಕ್ಕೆ ಯಾವ ರೀತಿ  ಬಜೆಟ್‌ ಇದೆಯೋ ಹಾಗಯೇ ನಮ್ಮ ಮನೆಗೂ ಬಜೆಟ್‌ನ್ನು ನಾವು ಹಾಕಿಕೊಳ್ಳಬೇಕು.

ಇಂದಿನ ಯುವಕರಲ್ಲಿ ಹಣ ಉಳಿತಾಯದ ಕುರಿತಾಗಿ ಯಾವುದೇ ನಿಯಮಗಳನ್ನು ಹಾಕಿಕೊಂಡಿಲ್ಲ ಆದರೆ ನಮ್ಮ ಹಿರಿಯರು ಮನೆಯಲ್ಲಿ ಯಾವುದಕ್ಕೆ ಎಷ್ಟು ಖರ್ಚಾಯಿತು ಎನ್ನುವುದನ್ನು ಬರೆದಿಟ್ಟುಕೊಳ್ಳುತ್ತಿದ್ದರು ಅಥವಾ ಗಮನಿಸುತ್ತಿದ್ದರು. ಆದರೆ ಇಂದು ಬಹಳಷ್ಟು ಜನರು ಅದನ್ನೆಲ್ಲ ಕಡೆಗಣಿಸುತ್ತಿದ್ದಾರೆ ಹಣ ಉಳಿತಾಯ ಅನ್ನುವುದು ಗಡಿಯಾರದಲ್ಲಿನ ಮುಳ್ಳುಗಳಿದ್ದಂತೆ ಅದರಲ್ಲಿ ನಿಮಿಷದ ಮುಳ್ಳುಗಳು  ದೈನಂದಿನ ಖರ್ಚುಗಳನ್ನು ತೋರಿಸಿದರೆ ಗಂಟೆಯ ಮುಳ್ಳುಗಳು  ತಿಂಗಳಿನಲ್ಲಿ ಉಂಟಾಗುವ ಒಟ್ಟು ಹಣದ ಖರ್ಚಿಗೆ ಲೆಕ್ಕವನ್ನು ತೋರಿಸಿದಂತೆ .ನಮ್ಮ ಮನೆಯ ಬಜೆಟ್‌ ನ್ನು ಹೇಗೆ ರೂಪಿಸಬೇಕು ಹಾಗೂ ಇದರಿಂದ ನಮಗೆ ಉಂಟಾಗುವ ಅನುಕೂಲಗಳು ಯಾವುವು ಎಂಬುದನ್ನು ಗಮನಿಸೋಣ.

ನಮ್ಮ ಮನೆಯ ಬಜೆಟ್ ನಲ್ಲಿ ಮುಖ್ಯವಾಗಿ ಮೂರು ಭಾಗಗಳನ್ನಾಗಿ ಮಾಡಿಕೊಳ್ಳಬೇಕು.

ನಮ್ಮ ಎಲ್ಲ ಮೂಲಗಳಿಂದ ಬರುವ ತಿಂಗಳಿನ ಆದಾಯದ ಪಟ್ಟಿ

ತಿಂಗಳಿನ ನಮ್ಮ ಎಲ್ಲ ಖರ್ಚುಗಳ ಪಟ್ಟಿ

ತಿಂಗಳಿನಲ್ಲಿ ನಮ್ಮ ಅನಿವಾರ್ಯ ಖರ್ಚುಗಳು

ತಿಂಗಳಿನಲ್ಲಿ ಅನಿವಾರ್ಯವಲ್ಲದ ಇತರೆ ಖರ್ಚುಗಳು

ತಿಂಗಳಿನಲ್ಲಿ ಉಳಿತಾಯ ಮಾಡಿದ ಹಣ ಹಾಗೂ ಅದನ್ನು ನಮ್ಮ ಗುರಿ ಸಾಧಿಸಲು ಬಳಸಿದ ರೀತಿ .ಹೀಗೆ ನಮ್ಮ ವರಮಾನ ,ಖರ್ಚು ಹಾಗೂ ಉಳಿತಾಯಕ್ಕೆ ಬಳಸಿದ ಹಣಗಳನ್ನು ಪಟ್ಟಿ ಮಾಡುತ್ತಾ ಹೋಗಬೇಕು ಇದರಲ್ಲಿ ಆ ತಿಂಗಳಿನಲ್ಲಿ ಉಂಟಾದ ಅನಿವಾರ್ಯವಲ್ಲದ ಇತರೆ ಖರ್ಚುಗಳನ್ನು ಮುಂದಿನ ದಿನಗಳಲ್ಲಿ ಹೇಗೆ ನಿಯಂತ್ರಿಸಬಹುದು ಎಂಬುದನ್ನು ನಮಗೆ ನಾವೇ ತಿಳಿದುಕೊಳ್ಳುತ್ತೇವೆ. ಹಾಗೂ ಇದನ್ನು ಆ ಒಂದು ಹಾಳೆಯಲ್ಲಿ ಪ್ರತಿನಿತ್ಯ ಅಥವಾ ವಾರದಲ್ಲಿ ಉಂಟಾದ ಖರ್ಚುಗಳು ಹಾಗೂ ವರಮಾನಗಳನ್ನು ಪಟ್ಟಿ ಮಾಡುತ್ತಾ ಹೋದಂತೆ ನಮಗೆ ನಮ್ಮ ಮನೆಯ ಬಜೆಟ್ ಅರಿವಾಗುತ್ತಾ ಹೋಗುತ್ತದೆ ಮತ್ತು ಕುಟುಂಬದವರೊಡನೆ ಈ ರೀತಿಯ ಬಜೆಟ್ ನ ಚರ್ಚೆ ಮಾಡುವುದರಿಂದ ಮನೆಯ ಕುಟುಂಬದವರು ಒಟ್ಟಿಗೆ ಕುಳಿತು ಮಾತನಾಡಲು ಹಾಗೂ ಸಾಮರಸ್ಯ ಬೆಳೆಯಲು ಸಹ ಇದು ಸಹಕಾರಿಯಾಗುತ್ತದೆ. ಹಾಗೆಯೇ ನಮಗೆ ಬ್ಯಾಂಕ್ ಸಾಲಗಳಿದ್ದರೆ ಆ ಬ್ಯಾಂಕ್ ಸಾಲಗಳಲ್ಲಿ ಅತಿ ಹೆಚ್ಚು ಬಡ್ಡಿ ಇರುವಂತಹ ಸಾಲಗಳನ್ನು ಆದಷ್ಟು ಬೇಗ ತೀರಿಸಲು ಪ್ರಯತ್ನಿಸಬೇಕು.

 ಹೀಗೆ ನಾವು ಉಳಿತಾಯ ಮಾಡಿದ ಹಣವನ್ನು ಎರಡು ರೀತಿಗಳಲ್ಲಿ ವಿಭಾಗಿಸಿ ಹೂಡಿಕೆ ಮಾಡಬೇಕು ಮೊದಲನೆಯದು ನಮಗೆ ಷೇರು ಮಾರುಕಟ್ಟೆ ಬಗ್ಗೆ ತಿಳಿದಿದ್ದರೆ ನೇರವಾಗಿ ಹೂಡಿಕೆ ಮಾಡುವುದು ಇಲ್ಲವಾದಲ್ಲಿ ಮ್ಯೂಚುವಲ್ ಫಂಡ್ ಗಳ ಮೂಲಕ ಸೇಫಾಗಿ ಹೂಡಿಕೆ ಮಾಡುವುದು ಈ ರೀತಿಯ ಹೂಡಿಕೆ ಮಾಡುವುದರಿಂದ ಮುಂದಿನ ಹತ್ತರಿಂದ ಹದಿನೈದು ವರ್ಷಗಳಲ್ಲಿ ನಾವು ಒಳ್ಳೆಯ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ .ಈ ಹಣವನ್ನು ಮಕ್ಕಳ ವಿದ್ಯಾಭ್ಯಾಸ,ಸಾಲವಿಲ್ಲದೇ ಮನೆ ಕಟ್ಟಲು ಬೇರೆ ಬೇರೆ ವಿಧಗಳಲ್ಲಿ ಬಳಸಲು ನೇರವಾಗುತ್ತದೆ.

ನಾವು ಮಾಡಬಾರದ ಕೆಲವು ವಿಷಯಗಳು

ಇದರ ಮಧ್ಯದಲ್ಲಿ ನಾವು ಮತ್ತೊಬ್ಬರನ್ನು ನೋಡಿ ಜೀವನ ಮಾಡಲು ಹೋದರೆ ನಮ್ಮ ಕೈಯಲ್ಲಿ ಯಾವುದೇ ಹಣ ಉಳಿತಾಯವಾಗುವುದಿಲ್ಲ ನಮ್ಮ ಸ್ನೇಹಿತರು ಕಾರು ತೆಗೆದುಕೊಂಡು ನಾವು ತೆಗೆದುಕೊಳ್ಳುವುದು ಆಭರಣ ಕೊಂದರೆ ನಾವು ಕೊಳ್ಳುವುದು ಈ ರೀತಿಯ ಈ ರೀತಿಯ ಅಭ್ಯಾಸಗಳಿಂದ ನಾವು ನಮ್ಮ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ.

ಪರ್ಯಾಯ ಅದಾಯದ ಮೂಲಗಳನ್ನು ಸೃಷ್ಟಿಸಿಕೊಳ್ಳುವುದು

ನಮ್ಮ ಗುರಿಯನ್ನು ಮುಟ್ಟಲು ನಾವು ಆದಾಯವನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯ ಇದಕ್ಕಾಗಿ ಹೊಸ ಕೌಶಲ್ಯಗಳನ್ನು ಕಲಿಯುವುದು ಹಾಗೂ ಇತರೆ ಹಣ ಸಂಪಾದನೆ ಮಾಡುವ ಕೌಶಲ್ಯಗಳ ಕಡೆಗೆ ಗಮನಹರಿಸುವುದರಿಂದ ನಾವು ನಮ್ಮ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ. ನಮ್ಮ ಬದುಕಿನ 60 ಅಥವಾ 70 ನೇ ವಸಂತಗಳಲ್ಲಿ ನಾವು ಹಣಕ್ಕಾಗಿ ನಮ್ಮ ಮಕ್ಕಳ ಬಳಿ ಕೈ ಚಾಚುವಂತಿರಬಾರದು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ನಾವು ಈಗಿನಿಂದಲೇ ನಿರ್ಮಿಸಿಕೊಳ್ಳುವುದು ಉತ್ತಮ.







ತೂಕ ಇಳಿಕೆಗಾಗಿ ಇಷ್ಟು ಮಾಡಿದರೇ ಸಾಕು.....



 ದೇಹದ ತೂಕ ಇಳಿಕೆ ಸವಾಲು ಅಲ್ಲ ...ಶಿಸ್ತು

ದೇಹದ ತೂಕ ಇಳಿಕೆಗಾಗಿ ಜನರು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ ಹಾಗೂ  ಕೆಲವರಿಗೆ ನುಂಗಲಾರದ ತುತ್ತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಬಹಳಷ್ಟು ಜನರು ಕೆಲವು ಆನಾರೋಗ್ಯಕರ ಪಾದರ್ಥಗಳನ್ನು  ನೀಡುವುದರ ಮುಖಾಂತರ ಹಣ ಸಂಪಾದನೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ನಾವು ಮುಖ್ಯವಾಗಿ ಅರ್ಥಮಾಡಿಕೊಳ್ಳ ಬೇಕಿರುವುದೇನಂದರೆ ನಮ್ಮ ದೇಹದಲ್ಲಿನ ಕೊಬ್ಬು ಕರಗಿಸದ ಹೊರತು ನಮ್ಮ ತೂಕ ಇಳಿಕೆಯಾಗುವುದಿಲ್ಲ. ಅದಕ್ಕಾಗಿ ನಾವು ಆಹಾರ ಸೇವನೆಯನ್ನೇ ಕಡಿಮೆಗೊಳಿಸಬೇಕು ಹಾಗೆಂದ ಮಾತ್ರಕ್ಕೆ  ಉಪವಾಸ ಮಾಡುವುದು ಎಂಬ ಅರ್ಥವಲ್ಲ. ಆಹಾರವನ್ನು ಯಾವ ಪ್ರಮಾಣದಲ್ಲಿ ಎಷ್ಟು ತೆಗೆದುಕೊಳ್ಳಬೇಕು ಎಂಬುದು ಮುಖ್ಯ. ಉದಾರಣೆಗೆ ಒಂದು ಪ್ಲೇಟ್ ದೋಸೆಯಿಂದ 500 ಕ್ಯಾಲರಿ ಶಕ್ತಿ ದೊರೆಯುತ್ತದೆ ಅಷ್ಟು ಶಕ್ತಿಯು ನಮ್ಮ ಇಡೀ ದಿನದ ಕೆಲಸ ಕಾರ್ಯಗಳಿಗೆ ಸಾಕಾಗುತ್ತದೆ ಆದರೆ ನಮ್ಮ ನಾಲಿಗೆಯ ರುಚಿಗಾಗಿ ನಾವು ಮನೆಯಲ್ಲಿ ಹೆಚ್ಚು ದೋಸೆಗಳನ್ನು ತಿನ್ನುತ್ತೇವೆ  ಈ ರೀತಿಯ ಚಟುವಟಿಕೆಗಳಿಂದ  ನಮ್ಮ ದೇಹದಲ್ಲಿ ಕ್ಯಾಲರಿಗಳು ಹೆಚ್ಚು ಶೇಖರಣೆ ಗೊಳ್ಳುತ್ತಾ ಹೋಗುತ್ತವೆ.

ನಮ್ಮ ಶರೀರಕ್ಕೆ ಬೇಕಾದ ಆಹಾರದ ಪ್ರಮಾಣ ತಿಳಿಯುವುದು ಮುಖ್ಯ...

ನಾವು ಭಾರತೀಯರು ಆಹಾರ ಪ್ರಿಯರು  ನಮ್ಮ ಮನೆಗೆ ಬಂದ ಅತಿಥಿಗಳನ್ನು ನಾವು ಹಾಗೇ ಕಳಿಸುವುದಿಲ್ಲ ಆದರೆ ನಾವು ತಿಳಿದುಕೊಳ್ಳಬೇಕಿರುವುದು ಎನೆಂದರೆ ನಮ್ಮ ದೇಹಕ್ಕೆ ಬೇಕಾಗುವ ಒಂದು ದಿನದ ಶಕ್ತಿ ಎಷ್ಟು ಎಂಬುದನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ಆಹಾರ ಸೇವನೆ ಮಾಡಿದಾಗ ನಮ್ಮ ದೇಹದ ತೂಕ ಇಳಿಕೆಯು ತಾನಾಗೆ ನಿಯಂತ್ರಣಗೊಳ್ಳುತ್ತದೆ ಶೇಕಡ 90ರಷ್ಟು ತೂಕ  ಇಳಿಕೆಯು ನಾವು ಸೇವಿಸುವ ಆಹಾರದ ಪ್ರಮಾಣದ ಮೇಲೆ ನಿಂತಿದೆ.

ನಾವು ದಿನನಿತ್ಯ ವ್ಯಾಯಾಮ ಮಾಡಿ ಕಸರತ್ತು ನಡೆಸಿ ಸಾಕಷ್ಟು ಆಹಾರವನ್ನು ಸೇವಿಸಿದರೆ ಅದರಿಂದ ತೂಕ ಹೇಳಿಕೆ ಸಾಧ್ಯವಿಲ್ಲ ತೂಕ ಇಳಿಕೆಯು ನೇರವಾಗಿ ನಾವು ಸೇವಿಸುವ ಆಹಾರದ ಮೇಲೆ ಅವಲಂಬನೆಯಾಗಿದೆ.

ತೂಕ ಇಳಿಕೆಗೆ ಪರ್ಯಾಯ ಮಾರ್ಗಗಳಿಲ್ಲ.....

ತೂಕ ಇಳಿಕೆಯನ್ನೆ ಬಂಡವಾಳ ಮಾಡಿಕೊಂಡ ಕೆಲವು ಕಂಪನಿಗಳು ಕೆಲವು ಪಾನೀಯ ಗಳನ್ನು(nutritional drinks) ಕುಡಿಯುವುದರಿಂದ ತೂಕ ಇಳಿಕೆ ಉಂಟಾಗುತ್ತದೆ ಎಂದು ಜನರನ್ನು ನಂಬಿಸಿ ಹಣ ಸಂಪಾದನೆಯಲ್ಲಿ ತೊಡಗಿವೆ ವಾಸ್ತವವಾಗಿ ಈ ಪಾನೀಯಗಳು ಕೇವಲ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತವೆ ಹಾಗೂ ಹಸಿವು  ಉಂಟಾಗದಂತೆ ನೋಡಿಕೊಳ್ಳುತ್ತವೆ ಇದರಿಂದಾಗಿ ಆ ವ್ಯಕ್ತಿಯು ತಾತ್ಕಾಲಿಕವಾಗಿ ತೂಕವನ್ನು ಕಳೆದುಕೊಳ್ಳುತ್ತಾನೆ ಇದನ್ನೆ  ಕಂಪನಿಗಳು ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡು ಸಾಧನೆ ಎಂದು ತೋರಿಸಿ ಇದರ ಜೊತೆಗೆ ತಮ್ಮ ಕಂಪನಿಯ ಹಲವಾರು ಉತ್ಪನ್ನಗಳನ್ನು ಜನರಿಗೆ ಮಾರಾಟ ಮಾಡುವುದರ ಮುಖಾಂತರ ಜನರಿಗೆ ಮೋಸ ಮಾಡುತ್ತವೆ. ಈ ಕಂಪನಿಗಳ ಮುಖ್ಯ ಉದ್ದೇಶ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದೇ ಹೊರತು ಜನರಲ್ಲಿ ಯಾವುದೇ ಶಾಶ್ವತ ತೂಕ ಇಳಿಕೆಯನ್ನು ಉಂಟುಮಾಡುವುದಲ್ಲ ಉದಾಹರಣೆಗೆ ಆ ವ್ಯಕ್ತಿ ಪಾನೀಯಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದಾಗ ಪುನಃ ಅವನು ಮೊದಲಿನಂತೆ ತೂಕವನ್ನು ಹೆಚ್ಚಿಸಿಕೊಳ್ಳುತ್ತಾನೆ ಇಂತಹ ಅನುಭವಗಳು ಸಾಕಷ್ಟು ನಮ್ಮ ಮುಂದೆ ಕಾಣುತ್ತೇವೆ.

ಆದ್ದರಿಂದ ನಾವು ಅರ್ಥಮಾಡಿ ಕೊಳ್ಳಬೇಕಿರುವುದೆನೆಂದರೆ ತೂಕ ಇಳಿಕೆಗೆ ಯಾವುದೇ ಸುಲಭ ದಾರಿಗಳಿಲ್ಲ ಕೇವಲ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ನಿರಂತರವಾಗಿ ಅದನ್ನು ಪಾಲಿಸಿದಾಗ ಮಾತ್ರ ನಾವು ತೂಕ ಇಳಿಕೆಯನ್ನು ಕಾಣಬಹುದು.


ನಮ್ಮ ಆರೋಗ್ಯ ಕಾಪಡಿಕೊಳ್ಳಲೂ ಅನುಸರಿಸಬೇಕಾದ ಇತರೆ ಕ್ರಮಗಳು....

ನಮ್ಮ ಆರೋಗ್ಯವನ್ನು ಸದೃಢವಾಗಿರಲು ನಾವು ಆಹಾರದ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರ ಜೊತೆಗೆ ಕೆಲವು ವ್ಯಾಯಾಮಗಳನ್ನು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಅದರಲ್ಲಿ ಮುಖ್ಯವಾಗಿ ದಿನನಿತ್ಯ ಕೆಲವು (cardio exercises) ಹೃದಯ ಸಂಬದಿತ ವ್ಯಾಯಮಗಳು ಮಾಡಬೇಕು ಉದಾಹರಣೆಗೆ: ವಾಕಿಂಗ್, ರನ್ನಿಂಗ್ ,ಸೈಕ್ಲಿಂಗ್, ಜಾಗಿಂಗ್, ಸ್ಕಿಪ್ಪಿಂಗ್, ಸ್ವಿಮ್ಮಿಂಗ್ ಇವುಗಳನ್ನು ಕಾರ್ಡಿಯೋ ವ್ಯಾಯಾಮ ಎಂದು ಕರೆಯುತ್ತಾರೆ .

ಈ ವ್ಯಾಯಾಮಗಳು ನಮ್ಮ ದೇಹದ ರಕ್ತದೊತ್ತಡ , ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣ, ತೂಕ ಇಳಿಕೆ, ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುತ್ತವೆ ಹಾಗೂ ನಮ್ಮ ಸ್ನಾಯುಗಳು ಗಟ್ಟಿಯಾಗಲು ಸಹಕರಿಸುತ್ತವೆ.

ಜಿಮ್ ನಲ್ಲಿ ವ್ಯಾಯಾಮ ಮಾಡುವುದರಿಂದ ನಮ್ಮ ಸ್ನಾಯುಗಳ ಬೆಳವಣಿಗೆ ಉಂಟಾಗುತ್ತದೆ ಮೂಳೆಗಳು ಗಟ್ಟಿಯಾಗುತ್ತವೆ  ನಮ್ಮ ಶರೀರದ ಸಾಮರ್ಥ್ಯ ಹೆಚ್ಚಾಗುತ್ತಾ ಹೋಗುತ್ತದೆ. ಹಾಗೆಯೇ ಯೋಗ ಮಾಡುವುದರಿಂದ ನಮ್ಮ ನಮ್ಮ ದೇಹದಲ್ಲಿ ಅಂಗಾಂಗಗಳ ಚಲನೆ ಸುಲಭವಾಗುತ್ತದೆ ಹಾಗೆಯೇ ಯೋಗದಿಂದ ಮಾನಸಿಕ ನೆಮ್ಮದಿ, ನಿದ್ರೆ,  ಹೆಚ್ಚಾಗುತ್ತಾ ನಮ್ಮ ಆರೋಗ್ಯಕ್ಕೆ ಪುಷ್ಟಿ ನೀಡುತ್ತದೆ.  ಮೆದುಳಿನ ಕ್ರಿಯಾಶೀಲತೆ ಹೆಚ್ಚುತ್ತದೆ ಮತ್ತು ಏಕಾಗ್ರತೆ ಬೆಳೆಯುತ್ತಾ ಹೋಗುತ್ತದೆ.  ಪ್ರಾಣಾಯಾಮ ಮಾಡುವುದರಿಂದ ನಮ್ಮ ಶಾಸಕೋಶಕ್ಕೆ ಹೆಚ್ಚು ಆಮ್ಲಜನಕ ಪೂರೈಕೆ ಉಂಟಾಗಿ ರಕ್ತದ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದ  ಉದ್ವೇಗ ಒತ್ತಡಗಳು ಕಡಿಮೆಯಾಗುತ್ತದೆ.

 ಆಹಾರ ಪದ್ಧತಿಯಲ್ಲಿನ ಬದಲಾವಣೆಯ ಜೊತೆಗೆ ಕಾರ್ಡಿಯೋ ವ್ಯಾಯಾಮ ಯೋಗ ಪ್ರಾಣಾಯಾಮ ಇವುಗಳನ್ನು ನಮ್ಮ ದಿನನಿತ್ಯದ ಅಭ್ಯಾಸಗಳಾಗಿ ಪರಿವರ್ತಿಸಿಕೊಂಡಾಗ ನಮ್ಮ ತೂಕ ಇಳಿಕೆಯು ಸುಲಭವಾಗಿ ಆಗುತ್ತದೆ ಒಬ್ಬ ವ್ಯಕ್ತಿಯಲ್ಲಿ  35 ವರ್ಷಗಳ ನಂತರ ಅವನ ಮೂಳೆಗಳ ಸಾಮರ್ಥ್ಯ ಕಡಿಮೆಯಾಗುತ್ತಾ ಹೋಗುತ್ತದೆ ಇದನ್ನು ಸಾಕೋಪೀನಿಯ ಎಂದು ಕರೆಯುತ್ತಾರೆ ಇದರಿಂದ ನಮ್ಮ ಮಾಂಸಖಂಡಗಳಲ್ಲಿ ಫೈಬರ್ ಕುಸಿತ ಉಂಟಾಗುತ್ತಾ ವರ್ಷದಿಂದ ವರ್ಷಕ್ಕೆ ಶೇಕಡ ಒಂದರಿಂದ ಎರಡರಷ್ಟು ಪ್ರಮಾಣದಲ್ಲಿ ನಮ್ಮ ದೇಹದ ಶಕ್ತಿ ಸಾಮರ್ಥ್ಯ ಕುಸಿಯುತ್ತಾ ಹೋಗುತ್ತದೆ. ಆದ್ದರಿಂದ ನಮ್ಮ ದೇಹದಲ್ಲಿ ಇವುಗಳ ಕುಸಿತ ಉಂಟಾಗದಂತೆ ಮಾಡಲು ವ್ಯಾಯಮ,ಯೋಗ ಅಗತ್ಯವಾಗಿದೆ.

ನಮ್ಮ ಆಹಾರದಲ್ಲಿನ ಪೋಷಾಕಾಂಶಗಳ ಪ್ರಮಾಣ ಹೀಗಿರಲಿ...

ದಿನನಿತ್ಯದ ನಮ್ಮ ಆಹಾರದಲ್ಲಿ ಶೇಕಡ 25ರಷ್ಟು ಕಾರ್ಬೋಹೈಡ್ರೇಟ್ ಆಹಾರ ಹಾಗೂ ಶೇಕಡ 25% ರಷ್ಟು ಪ್ರೋಟೀನ್ ಆಹಾರವನ್ನು ತೆಗೆದುಕೊಳ್ಳಬೇಕು ಹಾಗೂ ಉಳಿದ 50ರಷ್ಟು ವಿಟಮಿನ್ ಮತ್ತು ಸ್ವಲ್ಪ ಪ್ರಮಾಣದಲ್ಲಿ ಲಿಪಿಡ್ ಉಳ್ಳ ಆಹಾರವನ್ನು ಸೇವಿಸಿದಾಗ ಮಾತ್ರ ನಾವು ಸಮತೋಲಿತ ಆಹಾರವನ್ನು ಸೇವಿಸಿದಂತೆ ಆಗುತ್ತದೆ.

ನಮ್ಮ ತೂಕ ಇಳಿಕೆಯು ನಮ್ಮ ಕೈಯಲ್ಲೇ ಇದೆ. ನಮ್ಮ ಸಮತೋಲಿತ ಆಹಾರ ಸೇವನೆ ಹಾಗೂ ನಾವು ಕೆಲಸ ಮಾಡುವಷ್ಟು ಆಹಾರವನ್ನೇ ಸೇವನೆ ಮಾಡುವ ಪದ್ಧತಿಯನ್ನು ರೂಡಿಸಿಕೊಳ್ಳಬೇಕು ಜೊತೆಗೆ  ದಿನನಿತ್ಯದ ವ್ಯಾಯಾಮ, ಯೋಗ ,ಪ್ರಾಣಾಯಾಮ ಇಂತಹ ಅಭ್ಯಾಸಗಳನ್ನು ರೂಡಿಸಿಕೊಂಡಾಗ ಖಂಡಿತವಾಗಿಯೂ ನಮ್ಮ ಜೀವನ ಬದಲಾವಣೆ ಕಡೆಗೆ ಸಾಗುತ್ತದೆ.







 


ಕರ್ನಾಟಕದ ಗಾಂಧಿ ಎಂದೇ ಖ್ಯಾತರಾದ ವಿಶೇಷ ವ್ಯಕ್ತಿಯ ಕುರಿತು ಇಂದಿನ ಸಮಾಜ ತಿಳಿದುಕೊಳ್ಳುವುದು ಅವಶ್ಯಕ.......


 ಹರ್ಡೇಕರ್‌  ಮಂಜಪ್ಪನವರದು ಕರ್ನಾಟಕದ ರಾಷ್ರೀಯ ಸ್ವಾತಂತ್ರ್ಯ ಹೋರಾಟದಲ್ಲಿ ಬಹಳ ದೊಡ್ಡ ಹೆಸರು  ಬಾಲಗಂಗಾದರ ತಿಲಕ್‌ ರವರ ಪ್ರೇರಣೆಯಿಂದ ಸ್ವಾತಂತ್ರ್ಯ ಚಳುವಳಿಗೆ ದುಮುಕಿ ಮುಂದೆ ಗಾಂಧಿವಾದಗಳಾಗಿ ಗಾಂಧಿಜೀಯವರ ತತ್ವಗಳ ಮಾರ್ಗದಲ್ಲಿ ನಡೆದು  ಕರ್ನಾಟಕದ ಗಾಂಧಿ ಎಂದೇ  ಹೆಸರನ್ನು ಗಳಿಸಿದರು . ಅವರು  ಆಜನ್ಮ ಬಹ್ಮಚಾರಿಗಳಾಗಿದ್ದರು ತಮ್ಮ ಜೀವನೋಪಾಯಕ್ಕಾಗಿ ಶಿರಸಿಯಲ್ಲಿ ಶಾಲಾ ಶಿಕ್ಷಕ ವೃತ್ತಿ ಮಾಡುತ್ತಿದ್ದರು . ಶಾಲಾ ಶಿಕ್ಷಕರಾಗಿ  ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೋಳ್ಳಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತು ಮಂಜಪ್ಪನವರು ತಮ್ಮ ವೃತ್ತಿಗೆ ರಾಜಿನಾಮೆ ನೀಡಿ ದಾವಣಗೆರೆಗೆ ಆಗಮಿಸುತ್ತಾರೆ. ಅಲ್ಲಿ  1906‌ ಸೆಪ್ಟೆಂಬರ್ 6 ರಂದು  ಧನುರ್ಧಾರಿ ಎಂಬ ವಾರ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ.ಇದರ ಉದ್ದೇಶ ಜನರಲ್ಲಿ ದೇಶಭಕ್ತಿಯನ್ನು ಬೆಳಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವಂತೆ ಮಾಡುವುದಾಗಿತ್ತು.

ಮಂಜಪ್ಪನವರ  ಜನನ ಮತ್ತು ಬಾಲ್ಯ

ಹರ್ಡೇಕರ್ ಮಂಜಪ್ಪನವರು 1886 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿಯ ಪಂಪನ ಬನವಾಸಿಯಲ್ಲಿ ಜನಿಸಿದರು.ಚಿಕ್ಕಂದಿನಲ್ಲಿಯೆ ತಂದೆಯನ್ನುಕಳೆದುಕೊಂಡು  ಅಣ್ಣನ ಆಶ್ರಯದಲ್ಲಿ ಬೆಳೆದ ಮಂಜಪ್ಪನವರು ಮುಂದೆ  ಶಿಕ್ಷಕರಾಗಿ ಸೇವೆಯನ್ನು ಪ್ರಾರಂಭಿಸಿದರು ಅದರೆ ಸ್ವಾತಂತ್ರ್ಯ ಚಳುವಳಿಯು  ಅವರಲ್ಲಿ ದೇಶ ಭಕ್ತಿಯ ಕಿಚ್ಚನ್ನು ಹಚ್ಚಿ ಶಿಕ್ಷಕ ವೃತ್ತಿಯನ್ನು ತ್ಯಾಗ ಮಾಡಿ ಹೋರಾಟದಲ್ಲಿ ದುಮುಕುವಂತೆ ಮಾಡಿತು.ದಾವಣಗೆರೆಯ ತಮ್ಮ ವಾರ ಪತ್ರಿಕೆಯ ಮುಖಾಂತರ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಊಂಟಾಮಾಡುವ ಲೇಖನಗಳನ್ನು ಬರೆಯುತ್ತಾರೆ.ಇವರ ಬರವಣಿಗೆಯಿಂದ ಪ್ರೇರಣೆಗೊಂಡು ಆನೇಕರು  ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುತ್ತಾರೆ.

ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಾ ಇದ್ದ ಬ್ರಿಟಿಷ್ ಸರ್ಕಾರ ಮಂಜಪ್ಪ ಅವರನ್ನು ಹೀಗೆ ಬಿಟ್ಟರೆ ನಾವು ಆಡಳಿತ ಮಾಡೋದು ಕಷ್ಟ ಎನಿಸಿ ಅವರನ್ನು ಬಂಧಿಸಲು ಪ್ರಯತ್ನಿಸುತ್ತಾರೆ ಆದರೆ ಸತ್ಯ ಮತ್ತು ದೇಶಭಕ್ತಿ ಮೇಲೆ ನಂಬಿಕೆಯಿದ್ದ ಮಂಜಪ್ಪನವರು ಯಾವುದಕ್ಕೂ ಹೆದರುವುದಿಲ್ಲ ಬಂಧನಕ್ಕೆ ಒಳಗಾದರೂ ತಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ. ಕೇವಲ ಪತ್ರಿಕೋದ್ಯಮ ಅಲ್ಲದೆ ಹಲವಾರು ಪುಸ್ತಕಗಳನ್ನು ಬರೆಯುತ್ತಾರೆ 1921 ರಲ್ಲಿ ರಾಷ್ಟ್ರ ಜೀವನ ಎಂಬ ಗ್ರಂಥವನ್ನು ಬರೆಯುತ್ತಾರೆ. ನಂತರ ಭಾರತೀಯರ ದೇಶಭಕ್ತಿ ಎಂಬ ಮೊದಲ ಗ್ರಂಥವನ್ನು ಅವರೇ ಪ್ರಕಟಿಸುತ್ತಾರೆ ಅದು ತತ್ವಜ್ಞಾನದ ದೃಷ್ಟಿಯಿಂದ ಆಲೋಚಿಸಿ ಬರೆದ ವಿಭಿನ್ನ ಗ್ರಂಥವಾಗಿತ್ತು. ವೀರಶೈವ ಧರ್ಮದ ಬಗ್ಗೆ ವೀರಶೈವ ಸಮಾಜ ಸುಧಾರಣೆ , ಸಮಾಜದಲ್ಲಿ ಸ್ತ್ರೀಯರಿಗೆ ಸಮಾನ ಹಕ್ಕುಗಳು ಗೌರವಗಳನ್ನು ನೀಡಲು ಜಾಗೃತಿ ಮೂಡಿಸುವ ಸಲುವಾಗಿ ಸ್ತ್ರೀ ನೀತಿ ಸಂಗ್ರಹ ಎಂಬ ಮಹಿಳಾ ಕೇಂದ್ರಿತ ಪುಸ್ತಕವನ್ನು ಬರೆಯುತ್ತಾರೆ ಈ ಪುಸ್ತಕಗಳು ಸಮಾಜದಲ್ಲಿ ಮಹತ್ತರ ಬದಲಾವಣೆಗಳನ್ನು ತರುತ್ತದೆ. ಹಾಗೆಯೇ ಮಂಜಪ್ಪನವರು ಆಧ್ಯಾತ್ಮಿಕ ವಾಗಿ ದೇವರಲ್ಲಿ ನಂಬಿಕೆ ಉಳ್ಳವರು ಹಾಗೂ ಜನರು ಆಧ್ಯಾತ್ಮಿಕತೆಯಿಂದ ಮಾತ್ರ ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂಬುದನ್ನು ಬಲವಾಗಿ ನಂಬಿದ್ದರು. ಹಾಗಾಗಿ ತಮ್ಮ ಆಶ್ರಮದಲ್ಲಿ ಭಜನಾ ಕಾರ್ಯಕ್ರಮಗಳು ಧಾರ್ಮಿಕ ಸೇವೆ ಸಮಾಜ ಸೇವೆ ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು

ಗಾಂಧೀಜಿಯವರೊಂದಿಗೆ ಒಡನಾಟ

ಹುಬ್ಬಳ್ಳಿಯಲ್ಲಿ 1922 ರಲ್ಲಿ ಗಾಂಧೀಜಿಯವರ ನೈತಿಕ ತತ್ವ ಆದರ್ಶಗಳನ್ನು  ಅನುಷ್ಠಾನಗೊಳಿಸಲು ಸತ್ಯಾಗ್ರಹ ಸಮಾಜ ಎಂಬ ಸಂಸ್ಥೆಯನ್ನು ಆರಂಭಿಸುತ್ತಾರೆ. ಅದರ ಮರುವ ವರ್ಷವೇ ಹರಿಹರದ ಬಳಿ ಸತ್ಯಾಗ್ರಹ ಆಶ್ರಮವನ್ನು ಸ್ಥಾಪನೆ ಮಾಡುತ್ತಾರೆ ಆದರೆ ದುರಾದೃಷ್ಟವಶಾತ್ ಕೆಲವೇ ವರ್ಷಗಳಲ್ಲಿ ಮಳೆಗಾಲ ಆವರಿಸಿ ಪ್ರವಾಹಕ್ಕೆ ಕೊಚ್ಚಿ ಹೋಗುತ್ತದೆ ಮುಂದೆ ಗಾಂಧೀಜಿಯವರನ್ನು ಭೇಟಿ ಮಾಡಬೇಕೆಂಬ ಅವರ ಸಂಕಲ್ಪಕ್ಕಾಗಿ  ಸಬರಮತಿ ಆಶ್ರಮಕ್ಕೆ ತೆರಳುತ್ತಾರೆ ಅಲ್ಲಿ ಗಾಂಧೀಜಿಯವರ ದೈನಂದಿನ ಚಟುವಟಿಕೆಗಳನ್ನು ತೀರಾ ಹತ್ತಿರದಿಂದ ಕಂಡು ಅವರಿಂದ ಪ್ರಭಾವಿತರಾಗುತ್ತಾರೆ.

 ಹರ್ಡೇಕರ್ ಮಂಜಪ್ಪನವರು
ಸಮ ಸಮಾಜವನ್ನು ನಿರ್ಮಾಣ ಮಾಡಬೇಕೆಂಬ ಪರಿಕಲ್ಪನೆ ಯೊಂದಿಗೆ ಬಸವ ಚರಿತ್ರೆ ಎಂಬ ಪುಸ್ತಕವನ್ನು ಬರೆಯುತ್ತಾರೆ. ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ವೀರಶೈವ ವಿದ್ಯಾಲಯವನ್ನು 1927 ಮೇ 13 ರಂದು ಸ್ಥಾಪನೆ ಮಾಡುತ್ತಾರೆ ತಮ್ಮ ಜೀವನದ ಕೊನೆಯವರೆಗೂ ಸಂಸ್ಥೆಯನ್ನು ಮುನ್ನಡೆಸಿಕೊಂಡು ಎಲ್ಲ ವರ್ಗದ ಜನರಿಗೆ ವಿದ್ಯಾಯನ ತಲುಪಿಸಲು ಶ್ರಮಿಸುತ್ತಾರೆ

ಗಾಂಧೀಜಿಯವರು ಉತ್ತರ ಕರ್ನಾಟಕದಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ಪ್ರವಾಸ ಕೈಗೊಂಡಾಗ ಅವರ ಜೊತೆಗಿದ್ದು ಹೋರಾಟವನ್ನು ಮಾಡುತ್ತಾರೆ ನಾಡಿನ ಜನರಲ್ಲಿ ರಾಷ್ಟ್ರಭಕ್ತಿ ಕೌಶಲ್ಯಗಳ ಕಲಿಕೆ, ಶರಣ ಸಂದೇಶ ಖಾದಿ ಉದ್ಯೋಗ ಹೀಗೆ ಹಲವಾರು ಪುಸ್ತಕಗಳನ್ನು ಬರೆದು ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತಾರೆ

ತಮ್ಮ ಸರಳ ಜೀವನ ಹಾಗೂ ಅಹಿಂಸಾ ಧರ್ಮ ಸಾಮಾಜಿಕ ಹೋರಾಟಕ್ಕಾಗಿ ಹರಡೇಕರ್ ಮಂಜಪ್ಪ ಅವರನ್ನು ಕರ್ನಾಟಕದ ಗಾಂಧಿ ಎಂಬ ಹೆಸರಿನಿಂದ ಕರೆಯಲು ಪ್ರಾರಂಭಿಸುತ್ತಾರೆ ಇಂತಹ ಸರಳ ವ್ಯಕ್ತಿತ್ವ ಮಂಜಪ್ಪನವರು 1947 ಜನವರಿ ಮೂರರಂದು ಇಹಲೋಕ ತ್ಯಜಿಸುತ್ತಾರೆ ಕೊನೆಗೂ ಸ್ವತಂತ್ರ ಭಾರತದಲ್ಲಿ ಕೊನೆಯ ಹೆಸರು ಬಿಡಬೇಕೆಂಬ ಅವರ ಆಸೆ ಈಡೇರಲಿಲ್ಲ ಮಂಜಪ್ಪನವರು ಸ್ವತಂತ್ರ ಚಳುವಳಿ ಸಮಾಜ ಸುಧಾರಣೆ ಹಾಗೂ ಸರಳ ವ್ಯಕ್ತಿತ್ವದಿಂದ ಇಡೀ ನಾಡಿಗೆ ಕೀರ್ತಿ ಹಾಗೂ ಹೆಮ್ಮೆಯ ಪ್ರತೀಕವಾಗಿದ್ದಾರೆ ಇಂತಹ ಮಹಾನೀಯರ ಸ್ಮರಣೆ ನಮ್ಮೆಲ್ಲರ ಜವಾಬ್ದಾರಿ ಇಂದು ಹರ್ಡೆಕರ್ ಮಂಜಪ್ಪ ಅವರ ಜಯಂತಿಯ ದಿನ ಅವರನ್ನು ಸ್ಮರಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದು ಭಾವಿಸುತ್ತೇನೆ.







ಉತ್ತಮ ಅಭ್ಯಾಸಗಳಿಂದ ಜೀವನ ಬದಲಿಸಿಕೊಳ್ಳುವುದು ಹೇಗೆ.......



ಆರೋಗ್ಯಕರ ಅಭ್ಯಾಸಗಳಂದ ಜೀವನ ಬದಲಿಸಿಕೊಳ್ಳಬಹುದು.

 ಯಶಸ್ಸು ಜೀವನದಲ್ಲಿ ನಮಗೆ ಹೊರಗಡೆಯಿಂದ ಬರುವುದಿಲ್ಲ ಅದು ನಮ್ಮ ಅಭ್ಯಾಸಗಳ ಮುಖಾಂತರ ನಮ್ಮಲ್ಲಿಯೇ ಬೆಳೆಯುತ್ತಾ ಹೋಗುತ್ತದೆ ನಮ್ಮ ಸಾಮರ್ಥ್ಯವಾದರೂ , ದೌರ್ಬಲ್ಯವಾದರೂ,  ಎಲ್ಲವೂ ನಮ್ಮ ದಿನನಿತ್ಯದ ಅಭ್ಯಾಸಗಳಿಂದಲೇ ಉಂಟಾಗುತ್ತದೆ. ಆಕಾಶದಲ್ಲಿ ಹಾರಾಡುವ ಹಕ್ಕಿಯ ರೆಕ್ಕೆಗಳಂತೆ ನಮ್ಮನ್ನು ಎತ್ತರಕ್ಕೆ ಕೊಂಡಯುತ್ತವೆ ಅದು ಯಾವ ರೂಪದಲ್ಲಾದರೂ ಸರಿ ಸಮಾಜದಲ್ಲಿ ಗೌರವ ,ಪ್ರೀತಿ ,ಹಾಗೂ ಸುಖವಾಗಿ ಜೀವಿಸಲು ಬೇಕಾದ ಎಲ್ಲಾ ಅವಕಾಶಗಳನ್ನು ಒದಗಿಸುತ್ತದೆ .ಕಟ್ಟ ಅಭ್ಯಾಸಗಳು ಕಾಲಿಗೆ ಕಟ್ಟಿದ ಕಬ್ಬಿಣದ ಸರಪಳಿಯಂತೆ ನಮ್ಮನ್ನು ಬೆಳವಣಿಗೆಯತ್ತ ಮುಂದೆ ಹೋಗಲು ಬಿಡುವುದಿಲ್ಲ ನಮ್ಮನ್ನು ಎಲ್ಲಾ ರೀತಿಯ ಬೆಳವಣಿಗೆಯಿಂದ ನಿರ್ಬಂಧಿಸುತ್ತವೆ ನಮ್ಮ ಜೀವನದಲ್ಲಿ ನಾವು ಎತ್ತರಕ್ಕೆ ಬೆಳೆದರೂ ಅಥವಾ ಬೆಳೆಯದೆ ಇದ್ದರೂ ಅದು ಸಾಮಾಜಿಕವಾಗಿ , ಆರ್ಥಿಕವಾಗಿಯಾದರೂ, ಶೈಕ್ಷಣಿಕವಾಗಿ ಆದರೂ ಸಾಂಸ್ಕೃತಿಕವಾಗಿಯಾದರೂ ,ಯಾವುದೇ ಬೆಳವಣಿಗೆ ಆದರೂ ಈ ಎಲ್ಲದಕ್ಕೂ ಕಾರಣ ನಮ್ಮ ದೈನಂದಿನ ಅಭ್ಯಾಸಗಳೇ ಆಗಿದೆ.

ನಮ್ಮ ದೈನಂದಿನ ಅಭ್ಯಾಸಗಳು ನಮ್ಮನ್ನು ಒಳ್ಳೆಯ ಆರೋಗ್ಯವುಳ್ಳ ಅಥವಾ ಕೌಶಲ್ಯವುಳ್ಳ ವ್ಯಕ್ತಿಯಾಗಿ ರೂಪಿಸಬಲ್ಲವೂ ನಾವು ಒಳ್ಳೆಯ ದೈನಂದಿನ ಅಭ್ಯಾಸಗಳನ್ನು ಬೆಳೆಸಿಕೊಳ್ಳದಿದ್ದರೆ ಅದೇ ರೀತಿಯಾಗಿ ನಾವು ಅನಾರೋಗ್ಯ ಕ್ಕೆ ಗುರಿಯಾಗಬಹುದು. ಯಾವುದೇ ಚಟುವಟಿಕೆಗಳನ್ನು ಮಾಡದೇ ಇರುವಂತಹ ದುರ್ಬಲ ವ್ಯಕ್ತಿಯು ಆಗಬಹುದು, ಹಾಗಾದರೆ ನಾವು ಉತ್ತಮ ಬೆಳವಣಿಗೆಯತ್ತ  ಸಾಗಲು ಸಮಾಜದಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಏನೆಲ್ಲ ದಿನನಿತ್ಯದ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ನೋಡೋಣ.

ನಾವು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕೆಂದರೆ ದಿನನಿತ್ಯದ ಅಭ್ಯಾಸಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

* ದಿನನಿತ್ಯ  ಒಂದು ಗಂಟೆ ಮುಂಚಿತವಾಗಿ ಏಳಬೇಕು

ಸಾಮಾನ್ಯವಾಗಿ ನಾವು ದಿನನಿತ್ಯ ಏಳುವ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಎದ್ದೇಳುವುದರಿಂದ ಆ ಸಮಯವನ್ನು ನಾವು ನಮ್ಮ ಆರೋಗ್ಯ ಅಥವಾ ಇತರೆ ಕೌಶಲ್ಯಗಳನ್ನು ಕಲಿಯುವುದಕ್ಕೆ ಬಳಸಿಕೊಳ್ಳಬಹುದು ವಿದ್ಯಾರ್ಥಿಗಳಾದರೆ ಓದಲು ಬರೆಯಲು ತಮ್ಮ ಶೈಕ್ಷಣಿಕ ಚಟುವಟಿಕೆ ಕಡೆಗೆ ಗಮನಹರಿಸಬಹುದು ವಯಸ್ಕರ ಆದರೆ ತಾವು ಪ್ರಗತಿ ಹೊಂದಬೇಕಿರುವ ಕ್ಷೇತ್ರದಲ್ಲಿ ಕೌಶಲ್ಯಗಳನ್ನು ಬಳಸಿಕೊಳ್ಳುವುದಕ್ಕೆ ಆ ಸಮಯವನ್ನು ಮೀಸಲಿಡಬೇಕಾಗುತ್ತದೆ ವಯಸ್ಕರ ಅಥವಾ ವೃದ್ಧರಾದರೆ ವ್ಯಾಯಾಮ ಯೋಗ ಮುಂತಾದ ಚಟುವಟಿಕೆಗಳಿಗೆ ಈ ಸಮಯವನ್ನು ಮೀಸಲಿಟ್ಟು ಆ ಕೆಲಸಗಳಲ್ಲಿ ಪರಿಣಿತಿಯನ್ನು ಕ್ರಮೇಣ ಸಾಧನೆ ಮಾಡಬಹುದು ಇದರಿಂದ ನಾವು ಮಾಡುತ್ತಿರುವ ವೃತ್ತಿಯಲ್ಲಿ ಹೆಚ್ಚಿನ ಕೌಶಲ್ಯವನ್ನು ಪಡೆದುಕೊಳ್ಳಲು ಹಾಗೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಹಾಗೂ ನಮ್ಮ ಗುರಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಬೇಗ ಸಾಧಿಸಲು ಸಾಧ್ಯವಾಗುತ್ತದೆ ಬೇಗ ಹೇಳುವುದರಿಂದ ಯಾವುದೇ ಒತ್ತಡವಿಲ್ಲದೆ ಅವಸರವಾಗಿ ಕೆಲಸಗಳನ್ನು ಮಾಡಿಕೊಳ್ಳುವ ಅನಿವಾರ್ಯ ಉಂಟಾಗುವುದಿಲ್ಲ ಮತ್ತು ಆ ದಿನ ನಾವು ಅಂದುಕೊಂಡಷ್ಟು ಯೋಜನಾ ಬದ್ಧವಾಗಿ ಮುಂದಕ್ಕೆ ಸಾಗುತ್ತದೆ ಅದರಲ್ಲೂ ವಿಶೇಷವಾಗಿ 20 ನಿಮಿಷಗಳ ವ್ಯಾಯಾಮ ಮಾಡುವುದರಿಂದ ಅಂದಿನ ಲವಲವಿಕೆಯು ಇಡೀ ದಿನ ಮುಂದುವರಿಯಲು ಸಾಧ್ಯವಾಗುತ್ತದೆ.


* ಮಾಡುವ ಪ್ರತಿ ಕೆಲಸವನ್ನು ಕ್ರೀಯಾಶೀಲಾವಾಗಿ ಹಾಗೂ ಸೃಜನಶೀಲವಾಗಿ ಮಾಡಬೇಕು

ನೀವು ಯಾವುದೇ ಕೆಲಸವನ್ನು ಮಾಡುತ್ತಿದ್ದರು ಅದನ್ನು ಸಾಧ್ಯವಾದಷ್ಟು ಕಡಿಮೆ ಅವಧಿಯಲ್ಲಿ ಮುಗಿಸಲು ಪ್ರಯತ್ನಿಸಿಕೊಳ್ಳುವುದು ಎರಡನೇ ವಿಧಾನವಾಗಿದೆ ಇದು ನಮ್ಮಲ್ಲಿ ಒಂದು ಕೆಲಸವನ್ನು ಆದಷ್ಟು ಶೀಘ್ರದಲ್ಲಿ ಮುಗಿಸುವ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯನ್ನು ನಮ್ಮಲ್ಲಿ ಬೆಳೆಸುತ್ತದೆ ಉದಾಹರಣೆಗೆ ವಿದ್ಯಾರ್ಥಿಗಳಾಗಿದ್ದರೆ ನಿಮಗೆ ಕಷ್ಟವೆನಿಸುವ ವಿಷಯವನ್ನು ನೆನಪಿಟ್ಟುಕೊಳ್ಳಲು ನಿಮಗೆ ಸಾಧ್ಯವಾಗದಿದ್ದರೆ ನೀವು ಶಿಕ್ಷಕರ ಸಹಾಯದಿಂದ ಆ ವಿಷಯವನ್ನು ಎಷ್ಟು ಬೇಗ ಸಾಧ್ಯ ಅಷ್ಟು ಸುಲಭವಾಗಿ ನೆನಪಿಟ್ಟುಕೊಳ್ಳುವ ವಿಧಾನವನ್ನು ಅವರಿಂದ ತಿಳಿದುಕೊಳ್ಳಬಹುದು ಆ ಮೂಲಕ ನಿಮ್ಮ ಕೌಶಲ್ಯವನ್ನು ಬೆಳೆಸಿಕೊಳ್ಳಬಹುದು ಅದೇ ರೀತಿಯಾಗಿ ಕೃಷಿ ಚಟುವಟಿಕೆ ಆಗಿರಬಹುದು ಬೇರೆ ಬೇರೆ ವ್ಯಕ್ತಿಗಳಲ್ಲಿ ನಿರ್ವಹಿಸುತ್ತಿರುವವರು ತಮ್ಮ ವೃತ್ತಿಯಲ್ಲಿರುವ ಕೆಲಸಗಳನ್ನು ಆದಷ್ಟು ಕೌಶಲ್ಯದಿಂದ ಮಾಡಲು ಶ್ರಮವಹಿಸಿದರೆ ನಮ್ಮ ಕೆಲಸವು ಸುಲಭವಾಗಿರ ಜೊತೆಗೆ ಇನ್ನು ಹೆಚ್ಚಿನ ಸಾಧನೆಯನ್ನು ಆ ಕ್ಷೇತ್ರದಲ್ಲಿ ಮಾಡಲು ಸಾಧ್ಯವಾಗುತ್ತದೆ.


*  ಸ್ವಯಂ ಕಾಳಜಿಯ ಕಡೆಗೆ  ಗಮನಹರಿಸುವುದು

ದೈಹಿಕ ಸ್ವಯಂ ಕಾಳಜಿ.

ನಮ್ಮ ಸಮಯ ಶಕ್ತಿಯನ್ನು ನಾವು ನಮ್ಮ ಸ್ವ ಬೆಳವಣಿಗೆಗೆ ಬಳಸಬೇಕು ಬೇರೆಯವರ ಇಚ್ಛಾಶಕ್ತಿಗೆ ತಕ್ಕಂತೆ ಬದುಕಲು ನಾವು ಈ ಭೂಮಿಗೆ ಬಂದಿಲ್ಲ ಎಂಬುದನ್ನು ಸದಾ ನೆನಪಿನಲ್ಲಿಟ್ಟು ನಮ್ಮ ಕಾರ್ಯಗಳನ್ನು ಮಾಡುತ್ತಾ ಹೋಗಬೇಕು ಮುಖ್ಯವಾಗಿ ನಮ್ಮ ದೈಹಿಕ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ನಾವು ಹೆಚ್ಚು ಗಮನ ಹರಿಸಬೇಕು ನಾವು ನಮ್ಮ ದೇಹಕ್ಕೆ ಹಾನಿ ಮಾಡಿಕೊಳ್ಳುವುದು ಅಥವಾ ಅನಾರೋಗ್ಯಗೊಳಿಸಿಕೊಳ್ಳುವುದು ಸಮಂಜಸವಲ್ಲ ಮುಂದೆ ನಮ್ಮ ಆರೋಗ್ಯ ಕೆಟ್ಟರೆ ಯಾರು ಸಹಿತ ಅದನ್ನು ಸರಿಪಡಿಸಲಾಗುವುದಿಲ್ಲ ಅದರ ಕಷ್ಟವನ್ನು ನಾವೇ ಅನುಭವಿಸಬೇಕಾಗುತ್ತದೆ ಹಾಗಾಗಿ ನಮ್ಮ ಆರೋಗ್ಯ ಚೆನ್ನಾಗಿಟ್ಟುಕೊಳ್ಳುವುದು ಎಂದರೆ ನಮ್ಮ ದೇಹ ಗಟ್ಟಿಮುಟ್ಟಾಗಿ ನೋಡಿಕೊಳ್ಳುವುದು ಇದಕ್ಕಾಗಿ ನಾವು ಪ್ರತಿನಿತ್ಯದ ವ್ಯಾಯಾಮ ಯೋಗ ಕಸರತ್ತುಗಳನ್ನು ಮಾಡುವುದರ ಮುಖಾಂತರ ನಮ್ಮ ದೇಹದ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಎಂದರೆ ದೇಹ ಆರೋಗ್ಯವಾಗಿರಬೇಕೆಂದರೆ ಒಳ್ಳೆಯ ಪ್ರೋಟೀನ್ ಯುಕ್ತ ಆಹಾರ ಸೇವನೆ ಅಗತ್ಯ ಹಾಗೂ ಅದಕ್ಕೆ ತಕ್ಕಂತೆ ವಿಶ್ರಾಂತಿ ಅಂದರೆ ದಿನಕ್ಕೆ ಎಂಟು ತಾಸುಗಳ ನಿದ್ದೆ ಬಹು ಮುಖ್ಯ ಇವುಗಳನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಿದರೆ ನಮ್ಮ ಆರೋಗ್ಯವು ಚೆನ್ನಾಗಿರುವುದು ಜೊತೆಗೆ ನಮ್ಮ ದೇಹವು ಗಟ್ಟಿಮುಟ್ಟಾಗಿರುತ್ತದೆ.


* ಭಾವನಾತ್ಮಕ ಸ್ವಯಂ ಕಾಳಜಿ.

ಭಾವನಾತ್ಮಕ ಸ್ವಭಾವ ಬೆಳವಣಿಗೆಗೆ ಸಂಬಂಧಿಸಿದಂತೆ ನಾವು ಇತರರನ್ನು ಹೆಚ್ಚು ಹೆಚ್ಚಿಕೊಳ್ಳುವುದು ಅವರಿಗಾಗಿ ತ್ಯಾಗಗಳನ್ನು ಮಾಡುವುದು ಇಂತಹ ಮನೋಭಾವದಿಂದ ದೂರ ಇರುವುದು ಒಳಿತು ಇದರಿಂದಾಗಿ ಕೊನೆಗೆ ನೋವು ಉಂಟಾಗಿ ಮಾನಸಿಕ ಸಮಸ್ಯೆ ನಮ್ಮಲ್ಲಿ ಆವರಿಸಬಹುದು ಯಾವುದೇ ವಿಷಯದಲ್ಲಾದರೂ ಮೊದಲು ನಮ್ಮ ಕುರಿತಾಗಿ ಆಲೋಚನೆ ಮಾಡಿದ ನಂತರ ಇತರೆ ವಿಷಯಗಳ ಕುರಿತಾಗಿ ಯೋಚನೆ ಮಾಡುವುದು ಸೂಕ್ತ ನಮ್ಮ ಭಾವನಾತ್ಮಕ ವಿಷಯಗಳ ಮೇಲೆ ಋಣಾತ್ಮಕ ಪರಿಣಾಮ ಉಂಟಾಗದಂತೆ ನೋಡಿಕೊಳ್ಳುವುದು ಬಹು ಮುಖ್ಯವಾದ ಕೆಲಸವಾಗಿರುತ್ತದೆ.


* ಅಧ್ಯಾತ್ಮಿಕ ಸ್ವಯಂ ಕಾಳಜಿ

ಹಾಗೆ ಈ ಭೂಮಿಯ ಮೇಲೆ ನಮಗೆ ನೋವು ಕೊಡುವುದು ಯಾವುದಾದರೂ ಒಂದು ಶಕ್ತಿ ಇದೆ ಎಂದರೆ ನಮ್ಮ ಬೆಳವಣಿಗೆಯನ್ನು ಸಹಿಸಿಕೊಳ್ಳುವ ಶಕ್ತಿ ಯಾವುದಕ್ಕಾದರೂ ಇದೆ ಎಂದರೆ ಅದು ಆ ಭಗವಂತನಿಗೆ ಮಾತ್ರ. ದೇವರ ಸ್ಮರಣೆಯಿಂದ  ನಮ್ಮ ಮಾನಸಿಕ ನೆಮ್ಮದಿ  ಹಾಗೂ ಪ್ರಶಾಂತತೆ ,ಸಮಾಧಾನದಿಂದ ಜೀವಿಸಲು ಪ್ರಾರ್ಥನೆ ಮತ್ತು ಆಧ್ಯಾತ್ಮಿಕ ಜೀವನ ಅಗತ್ಯ. ಇದಕ್ಕಾಗಿ ನಾವು ಇಷ್ಟಪಡುವ ಯಾವುದೇ ದೇವರ ಆಗಲಿ ಅವರಿಗೆ ಬೆಳಗಿನ ಪ್ರಾರ್ಥನೆ ಮತ್ತು ನಮಸ್ಕಾರಗಳೊಂದಿಗೆ ಅಂದಿನ ದಿನ ಪ್ರಾರಂಭಿಸಬೇಕು ಏಕೆಂದರೆ ನಮ್ಮ ಎಲ್ಲ ಮನಸ್ಸಿನ ಮಾತುಗಳು ಸಂಕಟಗಳು ನೋವುಗಳನ್ನು ಕೇಳಿಸಿಕೊಂಡು ಅವುಗಳಿಗೆ ಯಾವುದೇ ತಕರಾರು ಇಲ್ಲದೆ ಸ್ವೀಕರಿಸುವವನು ಎಂದರೆ ಅದು ಭಗವಂತನು ಮಾತ್ರ ದೇವರ ಧ್ವನಿಯು ಯಾವಾಗಲೂ ನಮಗೆ ಸಕಾರಾತ್ಮಕವಾದ ಪರಿಹಾರವನ್ನು ನೀಡುತ್ತದೆ ಅಲ್ಲಿ ಋಣಾತ್ಮಕ ವಿಷಯಗಳಿಗೆ ಅವಕಾಶವಿಲ್ಲ ಆದ್ದರಿಂದ ನೀವು ಯಾವುದೇ ಕೆಲಸ ಕಾರ್ಯಗಳು ಆರಂಭಿಸುವ ಮುನ್ನ ನಿಮಗೆ ಹಿತವೆನಿಸುವ ದೇವರ ಸ್ಮರಣೆ ಮಾಡಿ ಆ ಮೂಲಕ ಮಾನಸಿಕ ಪ್ರಶಾಂತತೆ ಪಡೆದುಕೊಂಡು ಮುಂದಿನ ಕಾರ್ಯಗಳನ್ನು ಮಾಡುವುದು ಸೂಕ್ತ ಈ ರೀತಿಯ ಅಭ್ಯಾಸವು ದೀರ್ಘಾವಧಿಯಲ್ಲಿ ನಮಗೆ ಧನಾತ್ಮಕ ನಂಬಿಕೆಯನ್ನು ಉಂಟುಮಾಡುತ್ತದೆ ಅದರ ಫಲಗಳು ಮುಂದಿನ ದಿನಗಳಲ್ಲಿ ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸಹಕಾರಿಯಾಗಿರುತ್ತದೆ.

ಈ ರೀತಿ ಅಭ್ಯಾಸಗಳಿಂದ ನಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕಿದ್ದರೆ ನೀವು ಗಮನಿಸಬೇಕಾದ ಅಂಶಗಳು ....

  

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲೂ ಅಸಕ್ತಿ ಇದ್ದಲ್ಲಿ ನೀವು ತಿಳಿದುಕೊಳ್ಳಬೇಕಾದ ಅಂಶಗಳು

ಹಣ ಉಳಿತಾಯ ಮಾಡಲು ನಾವು ಹಲವಾರು ವಿಧಾನಗಳನ್ನು ಆಯ್ಕೆ ಮಾಡಿ ಕೊಳ್ಳುತ್ತೇವೆ ದುಡಿದ ಹಣವನ್ನು ಕೆಲವರು ಬ್ಯಾಂಕಿನಲ್ಲಿ ಇನ್ನೂ ಕೆಲವರು ಚೀಟಿ ಕಟ್ಟಿ ಹಣ ಉಳಿತಾಯ ಮಾಡುತ್ತಾರೆ ಹಾಗೆಯೆ ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ

ಷೇರು ಮಾರುಕಟ್ಟೆಯು ಈಗ ಹೂಡಿಕೆ ಮಾಡಲು ಸರಿಯಾದ ಸಮಯ ಎಂದು ಭಾವಿಸಬಹುದು ಏಕೆಂದರೆ ಇದುವರೆಗೂ ಕಂಪನಿಗಳು ಹೆಚ್ಚು ಬೆಲೆಯಲ್ಲಿ ವಹಿವಾಟು ಆಗುತ್ತಿದ್ದವು ಅದನ್ನು HIGH PE RATIO ಎನ್ನುತ್ತೇವೆ. ಆದರೆ ಕಳೆದ ಆರು ತಿಂಗಳಿನಿಂದ ಮಾರುಕಟ್ಟೆ ಕುಸಿತ ಕಂಡು ಒಂದು ಹಂತದಲ್ಲಿದೆ ಇಲ್ಲಿಂದ ನಿಧಾನವಾಗಿ ಚೇತರಿಸಿಕೊಳ್ಳಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ 

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕಾದರೆ ನಾವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು

sector analysis and sector growth 

ನಾವು ಹೂಡಿಕೆ ಮಾಡುವ ಕ್ಷೇತ್ರದ(sector)ವ್ಯಾಪ್ತಿ ಮತ್ತು ತಿಳುವಳಿಕೆ ಅಗತ್ಯ .ಆ ಕ್ಷೇತ್ರದಲ್ಲಿ ಅಲ್ಪಕಾಲದ ಬೆಳವಣಿಗೆ ಇದೆಯೋ ಅಥವಾ ದೀರ್ಘಕಾಲದ ಬೆಳವಣಿಗೆ ಇದೆಯೋ ಎಂಬುದನ್ನು ಗಮನಿಸಬೇಕು ಉದಾಹರಣೆಗೆ ಸೋಲಾರ್ ಎನರ್ಜಿ, ವಿಂಡ್ ಎನರ್ಜಿ, ನೈಸರ್ಗಿಕ ಅನಿಲಗಳು, ಇವುಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಇದೆ ಮತ್ತು ನಮ್ಮ ಹೂಡಿಕೆಯು ಕನಿಷ್ಠ ಐದು ವರ್ಷಗಳಿಂದ ಹಿಡಿದು ಗರಿಷ್ಠ 30 ರಿಂದ 40 ವರ್ಷಗಳು ದೀರ್ಘವಾಗಿರಬೇಕು ಆಗ ಮಾತ್ರ ನಾವು ಮಾರುಕಟ್ಟೆಯಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಇಲ್ಲವಾದಲ್ಲಿ ನಾವು ನಷ್ಟದಲ್ಲೇ ಉಳಿಯಬೇಕಾಗಬಹುದು 

ನಾವು ಹೂಡಿಕೆ ಮಾಡುವ ಕಂಪನಿಯ ಮ್ಯಾನೇಜ್ಮೆಂಟ್ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ.

ನಾವು ಹೂಡಿಕೆ ಮಾಡುವ ಮ್ಯಾನೇಜ್ಮೆಂಟ್ ಯಾವುದೇ ರೀತಿಯ ಅವ್ಯವಹಾರ ದಲ್ಲಿ ತೊಡಗಿರಬಾರದು ಮತ್ತು ತಮ್ಮ ಸಂಬಳಗಳನ್ನು ಹೆಚ್ಚು ಮಾಡಿಕೊಳ್ಳುತ್ತಾ ಹೋಗಬಾರದು. ಕಂಪನಿಯ ಲಾಭ ಕಡಿಮೆಯಾದರೂ ತಮ್ಮ ಸಂಬಳಗಳನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ ಎಂದರೆ ಅವರಿಗೆ ಕಂಪನಿಯ ಬೆಳವಣಿಗೆ ಬಗ್ಗೆ ಆಸಕ್ತಿ ಇಲ್ಲ ಎಂಬುದು ತೋರಿಸುತ್ತದೆ ಅದೇ ರೀತಿಯಾಗಿ ಅಕ್ರಮ ಹಣದ ವಹಿವಾಟು ಕೂಡ ಕಂಪನಿಯ ಕಂಪನಿಯಲ್ಲಿ ಮಾಡಬಾರದು

ಕಂಪನಿಯ ಮಾಲೀಕರು ತಮ್ಮ ಶೇರುಗಳನ್ನು ಮಾರಿಕೊಳ್ಳಬಾರದು ಏಕೆಂದರೆ ಇದು ಅವರು ಕಂಪನಿಯ ಬೆಳವಣಿಗೆಯನ್ನು ಮುಂದುವರಿಸುತ್ತಿಲ್ಲ ಎಂಬುದು ತೋರಿಸುತ್ತದೆ ಹಾಗೂ ತಮ್ಮ ತ್ರೈಮಾಸಿಕ ವರದಿಯಲ್ಲಿ ತಮ್ಮ ಕಂಪನಿಯು ಮುಂದಿನ ದಿನಗಳಲ್ಲಿ ಮಾಡಬಹುದಾದ ಸಾಧನೆಗಳ ಬಗ್ಗೆ ಹಾಗೂ ತಾವು ವಿಸ್ತರಿಸಬಹುದಾದ ಕ್ಷೇತ್ರದ ಬಗ್ಗೆ ಹೂಡಿಕೆದಾರರಲ್ಲಿ ನಂಬಿಕೆಯನ್ನು ಮೂಡಿಸಬೇಕು ಆಗ ಮಾತ್ರ ಕಂಪನಿಯ ಮ್ಯಾನೇಜ್ಮೆಂಟ್ ಮೇಲೆ ಒಂದು ನಂಬಿಕೆ ಬರುತ್ತದೆ

ಕಂಪನಿಯ ದೊಡ್ಡ ಹುದ್ದೆಗಳಲ್ಲಿರುವ ಅಧಿಕಾರಿಗಳ  ಶಿಕ್ಷಣ, ಜ್ಞಾನ, ಅರ್ಹತೆ ,ಅನುಭವ, ಇವೆಲ್ಲವೂ ಹೂಡಿಕೆದಾರರು ಗಮನಿಸಬೇಕು ಕಂಪನಿಯಲ್ಲಿರುವ ಮ್ಯಾನೇಜ್ಮೆಂಟ್ ಅನುಭವ ಹೆಚ್ಚಿದ್ದರೆ ಅವರು ಹೆಚ್ಚು ಲಾಭಗಳಿಸಲು ಸಾಧ್ಯವಾಗುತ್ತದೆ 

ಯಾವುದೇ ಕಂಪನಿಯಲ್ಲಿ ಹೂಡಿಕೆ ಮಾಡುವ ಮೊದಲು ಆ ಕಂಪನಿಯ ಮೂಲಭೂತ ಅಂಶಗಳನ್ನು(fundamental analysis) ಗಮನಿಸಬೇಕು.

ಅಂದರೆ ಕಂಪನಿಯಲ್ಲಿ ಮಾಲೀಕರ ಶೇರುಗಳ ಸಂಖ್ಯೆ,ಕಂಪನಿ ,ಪ್ರತಿ  ತ್ರೈಮಾಸಿಕ ಹಾಗೂ ವರ್ಷದಲ್ಲಿ ಗಳಿಸುವ ಲಾಭ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆಯಾ? ಹಾಗೂ ಆದಾಯದಲ್ಲಿ ಏರಿಕೆ ಮಾಡುತ್ತಿದೆಯಾ? ಎಂಬುದನ್ನು ಗಮನಿಸಬೇಕು ಹಾಗೂ ಪ್ರತಿ ವರ್ಷವೂ ಡಿವಿಡೆಂಟ್ ಅನ್ನು ತನ್ನ ಷೇರುದಾರರಿಗೆ ನೀಡುತ್ತಿದೆಯೇ ?ಎಂಬುದನ್ನು ಗಮನಿಸಬೇಕು ಹಾಗೂ ಕಂಪನಿ PE RATIO ಎಷ್ಟಿದೆ ಎಂಬುದನ್ನು ಗಮನಿಸಬೇಕು

 diversification of stocks(ನಮ್ಮ ಹೂಡಿಕೆಯು ಹಲವಾರು ಕ್ಷೇತ್ರಗಳ ಕಂಪನಿಗಳ ಮೇಲಿರಬೇಕು)

ಹಾಗೂ ನಮ್ಮ ಹೂಡಿಕೆಯು ಕೇವಲ ಒಂದೇ ಕ್ಷೇತ್ರಕ್ಕೆ ಸಂಬಧಿಸಿದ ಕಂಪನಿಗಳಿಗೆ  ಸೀಮಿತವಾಗಿರಬಾರದು. ಇದು ಹಲವಾರು ಕ್ಷೇತ್ರಗಳನ್ನು ಒಳಗೊಂಡಿರಬೇಕು ಉದಾಹರಣೆಗೆ ನಮ್ಮ ಬಳಿ ಒಂದು ಲಕ್ಷ ಹಣವಿದ್ದರೆ ಅದನ್ನುಬೇರೆ ಬೇರೆ ಕ್ಷೇತ್ರಕ್ಕೆ ಸಂಬದಿಸಿದ  ಪ್ರತಿ ಕಂಪನಿಯ ಮೇಲೆ 20,000 ದಂತೆ ಹೂಡಿಕೆ ಮಾಡಬೇಕು

ಹೂಡಿಕೆದಾರರಲ್ಲಿ ಮಾರುಕಟ್ಟೆ ಏರಿಳಿತಗಳನ್ನು ಸಹಿಸಿಕೊಳ್ಳುವ ತಾಳ್ಮೆ ಬೆಳಿಸಿಕೊಳ್ಳಬೇಕು

ಮುಖ್ಯವಾಗಿ ಶೇರು ಮಾರುಕಟ್ಟೆಯಲ್ಲಿ ಉಂಟಾಗುವ ಏರಿಳಿತಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನಾವು  ಬೆಳೆಸಿಕೊಂಡಿರಬೇಕು ಆಗ ಮಾತ್ರ ನಾವು ಮಾರುಕಟ್ಟೆಯಲ್ಲಿ ಸಾಧನೆ ಮಾಡಲು ಸಾಧ್ಯ ಒಮ್ಮೆ ನಾವು ಮಾರುಕಟ್ಟೆಯಲ್ಲಿ ಹಣ ಹೂಡಿದ ನಂತರ ಆ ಹಣವು ಮಾರುಕಟ್ಟೆಯದು ಎಂಬ ನಂಬಿಕೆಯನ್ನು ನಾವು ಬೆಳೆಸಿಕೊಳ್ಳಬೇಕು ಉದಾಹರಣೆಗೆ, ನೀವು ಜೀವ ವಿಮಾ ಪಾಲಿಸಿಗಳಲ್ಲಿ ಹಣ ಹೂಡಿಕೆ ಮಾಡುತ್ತೀರಿ . ಆ ಹಣವು ಹೇಗೆ 30 ವರ್ಷಗಳ ನಂತರ ಕೊಡುತ್ತಾರೋ ಹಾಗೆಯೇ ಈ ಹಣ ಎಂದು ಭಾವಿಸಿದರೆ ಮಾತ್ರ ನಾವು ಇದರಲ್ಲಿ ಸಾಧನೆ ಮಾಡಲು ಸಾಧ್ಯ


ನೀವು ಹೂಡಿಕೆ ಮಾಡುವ ಹಣವು ಬ್ಯಾಂಕುಗಳಿಂದ ಸಾಲ ತಂದು ಅಥವಾ ಬಡ್ಡಿಗೆ ಸಾಲ ತಂದು ಹೂಡಿಕೆ ಮಾಡಿದರೆ ಖಂಡಿತ ಸಮಸ್ಯೆಯಲ್ಲಿ ಸಿಲುಕುತ್ತೀರಿ ನಿಮ್ಮ ಬಳಿ ಆ ತಿಂಗಳಿನಲ್ಲಿ ಖರ್ಚು ಮಾಡಬೇಕಾದ ಹಣವನ್ನು ಉಳಿಸಿಕೊಂಡು ಉಳಿದ ಹಣವನ್ನು ಕಂಪನಿಗಳ ಮೇಲೆ ಹೂಡಿಕೆ ಮಾಡಿ 

ನೀವು ಶೇರು ಮಾರುಕಟ್ಟೆಗೆ ತೀರಾ ಹೊಸಬರಾಗಿದ್ದರೆ ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿ ಇದು ನಿಮ್ಮಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ವಿಶ್ವಾಸವನ್ನು ನಿಧಾನವಾಗಿ ಹೆಚ್ಚಿಸುತ್ತಾ ಹೋಗುತ್ತದೆ ಎರಡು ವರ್ಷ ಮೂರು ವರ್ಷಗಳ ನಂತರ ನಿಮಗೆ ಸಿಕ್ಕ ಅನುಭವದಿಂದ ನೀವು ನೇರವಾಗಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಪ್ರಾರಂಭಿಸಿ

ಗಮನಿಸಿ ಷೇರು ಮಾರುಕಟ್ಟೆಯು ನಾವು ಅಂದುಕೊಂಡಷ್ಟು ಸುಲಭವಾಗಿ ದುಡ್ಡನ್ನು ಗಳಿಸಿಕೊಡುವುದಿಲ್ಲ ಅದು ನಮ್ಮ ತಾಳ್ಮೆ ,ಬುದ್ಧಿಶಕ್ತಿ ,ಸಾಮಾನ್ಯ ಜ್ಞಾನವನ್ನು, ಪರೀಕ್ಷೆ ಮಾಡುತ್ತದೆ

ಶೇರು ಮಾರುಕಟ್ಟೆಯಲ್ಲಿ ಪ್ರಾರಂಭದಲ್ಲಿ ಹೂಡಿಕೆ ಮಾಡುವವರು ಬಹಳ ಸಣ್ಣ ಮೊತ್ತದಿಂದ ಪ್ರಾರಂಭಿಸಬೇಕು ಆಗ ಅದರಲ್ಲಿ ಉಂಟಾಗುವ ಏರಿಳಿತಗಳ ಬಗ್ಗೆ ಕಲ್ಪನೆ ಸಿಗುತ್ತದೆ ಕೊನೆಯದಾಗಿ ಮಾರುಕಟ್ಟೆ ನಿಧಾನವಾಗಿ ನಿಮ್ಮ ಹಣವನ್ನು ಹೆಚ್ಚು ಮಾಡುತ್ತಾ ಹೋಗಿ ನಿಮ್ಮ ಅನುಭವ ಹೇಗೆ ಹೆಚ್ಚುತ್ತಾ ಹೋಗುತ್ತಿರೋ ಹಾಗೆ ನಿಮ್ಮ ಹೂಡಿಕೆಯನ್ನು ಹೆಚ್ಚು ಮಾಡುತ್ತಾ ಹೋಗಿ ಇದು ನಿಮ್ಮಲ್ಲಿ ಯಾವುದೇ ಭಯ ಇರದೇ ಹೂಡಿಕೆ ಮಾಡುವ ಧೈರ್ಯವನ್ನು ಕೊಡುತ್ತದೆ 

ಷೇರು ಮಾರುಕಟ್ಟೆಯಲ್ಲಿ ಎಷ್ಟು ಪ್ರಮಾಣದ ರಿಸ್ಕ್ ಇದೆಯೋ ಅಷ್ಟೇ ಪ್ರಮಾಣದ ಹಣ ಗಳಿಸುವ ಅವಕಾಶವೂ ಇದೆ, ಸಾಮಾನ್ಯ  ಹೂಡಿಕೆದಾರರು ಇಲ್ಲಿಂದಲೇ ಶ್ರೀಮಂತರಾಗಿದ್ದಾರೆ. ಉದಾರಣೆಗೆ ರಾಕೇಶ್ ಜುಂಜುನ್ವಾಲ ,ರಮೇಶ್ ದಮನಿ, ವಿಜಯ್ ಕೇಡಿಯಾ,
ಈ ವ್ಯಕ್ತಿಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಿಳಿದುಕೊಳ್ಳಿ ಹಾಗೂ ಹೇಗೆ ಇವರು ಸಾಮಾನ್ಯ ವ್ಯಕ್ತಿಯಾಗಿದ್ದವರು ಇಂದು ಕೋಟ್ಯಾಧಿಪತಿಗಳಾಗಿದ್ದಾರೆ ಎಂಬುದು ತಿಳಿದು ಬರುತ್ತದೆ ಇವರು ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ನಷ್ಟಗಳು ಲಾಭಗಳನ್ನು ಕಂಡು ಕೊನೆಗೆ ಯಶಸ್ಸನ್ನು ಸಾಧಿಸಿದ್ದಾರೆ ಅವೆಲ್ಲವನ್ನು ಸ್ವೀಕರಿಸುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು ಮುಂದಿನ ದಿನಗಳಲ್ಲಿ ಷೇರು ಮಾರುಕಟ್ಟೆ ಕುರಿತಾಗಿ ಹೆಚ್ಚಿನ ವಿಷಯಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ ತಾವು ಇಂತಹ ವಿಷಯಗಳನ್ನು ನನ್ನಿಂದ ಓದಲು ಇಷ್ಟ ಪಟ್ಟರೆ, ಕೆಳಗೆ ಕಾಮೆಂಟ್ಗಳನ್ನು ಮಾಡಿ ಈ ರೀತಿ ನೀವು ಕಮೆಂಟ್ ಮಾಡುವುದರಿಂದ ನಾನು ಯಾವ ವಿಷಯಗಳನ್ನು ನಿಮಗೆ ತಿಳಿಸಬೇಕು ಎಂಬುದು ನನಗೆ ಅರ್ಥವಾಗುತ್ತದೆ ಧನ್ಯವಾದಗಳು







ಮಾರಣಾಂತಿಕ ಮಕ್ಕಳ ಕ್ಯಾನ್ಸರ್ ಕುರಿತ ತಿಳುವಳಿಕೆ ಅಗತ್ಯ.....

 ಕ್ಯಾನ್ಸರ್ ಎಂದ ತಕ್ಷಣವೇ ಜನರಲ್ಲಿ ಸಾಮಾನ್ಯವಾಗಿರುವ ವಿಚಾರವೆಂದರೆ ಇದು ಗುಣಮುಖವಾಗಲಾರದ ಕಾಯಿಲೆ ಆಸ್ಪತ್ರೆಗೆ ಹೋದರು ನಾವು ಬದುಕುವುದಿಲ್ಲ ಎಂಬ ನಂಬಿಕೆ ಗ್ರಾಮೀಣ ಪ್ರದೇಶದಲ್ಲಿ ಹಾಗೂ ಕೆಲವು ನಗರ ಪ್ರದೇಶಗಳಲ್ಲಿ ಜನರಲ್ಲಿ ಇದೆ ಆದರೆ ಈ ಕಾಯಿಲೆ ಕಂಡುಬಂದ ತಕ್ಷಣ ಆದಷ್ಟು ಬೇಗ ಜಾಗೃತಿ ವಹಿಸಿದರೆ ಖಂಡಿತವಾಗಿ ವಾಸಿ ಮಾಡಬಹುದು

ಇತ್ತೀಚಿಗೆ ಕ್ಯಾನ್ಸರ್ ಎಲ್ಲ ವಯೋಮಾನದವರಲ್ಲೂ ಕಂಡು ಬರುತ್ತಿದೆ ನಮ್ಮ ದೇಶದಲ್ಲಿ ತಂಬಾಕು ಸೇವನೆಯಿಂದ  ಸತತ ಕುಡಿತದಿಂದ ಕ್ಯಾನ್ಸರ್ ಹೆಚ್ಚಾಗಿ ಬರುತ್ತಿದೆ ಎಂದು ಸಂಶೋಧನಾ ವರದಿಗಳು ಹೇಳುತ್ತಿವೆ ವಯಸ್ಸಾದವರಲ್ಲಿ ಇದರ ಪ್ರಮಾಣ ಹೆಚ್ಚಿದ್ದರೆ ಮಕ್ಕಳಲ್ಲೂ ಕೂಡ ಇದು ಕಾಣಿಸಿಕೊಳ್ಳುತ್ತಿದೆ

ಕ್ಯಾನ್ಸರ್ ಒಂದು  ಮಾರಣಾಂತಿಕ ಕಾಯಿಲೆ ಎಂಬುದು ನಿಜವಾದರೂ ಸರಿಯಾದ ಸಮಯದಲ್ಲಿ ಜಾಗೃತಿ ವಹಿಸಿದರೆ ಇದರಿಂದ ಗುಣಮುಖರಾಗಬಹುದು ಎಂಬುದು ಸತ್ಯ .ಇತ್ತೀಚೆಗೆ ಖ್ಯಾತ ಚಿತ್ರ ನಟ ಡಾ. ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ನಿಂ

ದ ಬಳಲುತ್ತಿದ್ದರು ನಂತರ ಸೂಕ್ತ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿ ಚಿಕಿತ್ಸೆ ಪಡೆದ ಗುಣಮುಖರಾಗಿ ಬಂದಿದ್ದಾರೆ

ಈ ಕ್ಯಾನ್ಸರ್ ಮಕ್ಕಳಿಗೂ ಬರುತ್ತಾ ಅನ್ನೋ ಪ್ರಶ್ನೆ ನಮಗೆಲ್ಲ ಆಶ್ಚರ್ಯ ಮತ್ತು ಗಾಬರಿಯನ್ನುಂಟು ಮಾಡಬಹುದು ಆದರೆ ಇದು ಸತ್ಯವೂ ಕೂಡ ಹೌದು 0-19 ವರ್ಷದ ಮಕ್ಕಳಲ್ಲಿ ಕಾಣಿಸಿಕೊಳ್ಳಬಹುದು.

ಒಂದು ವರದಿಯ ಪ್ರಕಾರ ವಿಶ್ವದಾದ್ಯಂತ ಸುಮಾರು ನಾಲ್ಕು ಲಕ್ಷ ಮಕ್ಕಳು ಪ್ರತಿ ವರ್ಷ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ ಭಾರತದಲ್ಲಿ ಸುಮಾರು 80,000 ಮಕ್ಕಳು ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ .


ಕ್ಯಾನ್ಸರ್ ನಲ್ಲಿ ಹಲವಾರು ವಿಧಗಳಿವೆ

ಮುಖ್ಯವಾಗಿ ಮಕ್ಕಳಲ್ಲಿ ಬ್ಲಡ್ ಕ್ಯಾನ್ಸರ್ ಅಥವಾ ಲುಕೆಮಿಯ  ಎನ್ನುವ ಕ್ಯಾನ್ಸರ್ ಮಕ್ಕಳ ಮೂಳೆ ಮಜ್ಜೆಯಲ್ಲಿ ಉತ್ಪತ್ತಿಯಾಗಿ ರಕ್ತವನ್ನು ಸೇರಿಕೊಳ್ಳುತ್ತದೆ ಇದು ರಕ್ತದಲ್ಲಿ ಬಿಳಿ ರಕ್ತ ಕಣಗಳ ಉತ್ಪಾದನೆ ಹೆಚ್ಚು ಮಾಡುತ್ತಾ ಹೋಗಿ ಕೊನೆಗೆ ಮಕ್ಕಳ ಸಾವಿಗೆ ಕಾರಣವಾಗುತ್ತದೆ

ಈ ರಕ್ತ ಕ್ಯಾನ್ಸರ್ ನ ಗುಣಲಕ್ಷಣಗಳು ಪದೇ ಪದೇ ಜ್ವರ ಬರುವುದು, ವಾಂತಿಯಾಗುವುದು ,ಹೆಚ್ಚು ಸುಸ್ತಾಗುವುದು,ಬಾಯಿ ಮತ್ತು ಮೂಗಿನಿಂದ ರಕ್ತ ಬರುವುದು, ಮಕ್ಕಳ ಮೈಬಣ್ಣ ಬಿಳಿಯಾಗಿ ಬದಲಾಗುವುದು ,ಆಟ ಆಡಲು ಸಾಧ್ಯವಾಗದೇ ಇರುವುದು ,,ಚಿಕ್ಕ ಗಾಯವಾದರೂ ಹೆಚ್ಚು ರಕ್ತ ಸೂರಿಕೆಯಾಗುವುದು ಈ ರೀತಿಯ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಇದರ ಬಗ್ಗೆ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಬೇಕು 

 ಗಂಟಲು ಕ್ಯಾನ್ಸರ್ ಕತ್ತು ಹಾಗೂ ಕಂಕಳಲ್ಲಿ ಉಂಟಾಗುವ ಗಡ್ಡೆಗಳಿಂದ ಈ ಕ್ಯಾನ್ಸರ್ ಕಂಡುಬರುತ್ತದೆ ಮಕ್ಕಳಿಗೆ ಊಟ ಮಾಡಲು ಸಾಧ್ಯವಾಗದೇ ಇರುವುದು, ಗಂಟಲು ನೋವು ಕಾಣಿಸಿಕೊಳ್ಳುವುದು, ಪದೇ ಪದೇ ಜ್ವರ ಬರುವುದು ಇತ್ಯಾದಿ

ಬ್ರೈನ್ ಕ್ಯಾನ್ಸರ್ ಇದು ಮೆದುಳಿನ ಭಾಗದಲ್ಲಿ  ಜೀವಕೋಶಗಳ ಹೆಚ್ಚು ಉತ್ಪಾದನೆಯಾಗಿ ಉಂಟಾಗುವ ಒಂದು ಕಾಯಿಲೆಯಾಗಿದೆ .ಈ ಕ್ಯಾನ್ಸರ್ ನ ಲಕ್ಷಣಗಳು ಬೆಳಗಿನ ಜಾವ ತಲೆನೋವು ಬರುವುದು, ಪದೇ ಪದೇ ವಾಂತಿ ಯಾಗುವುದು ಮಕ್ಕಳು ಮಂಕಾಗಿ ವರ್ತಿಸುವುದು, ಮಡುತ್ತಾರೆ

ಚಿಕಿತ್ಸೆಗಳು

ಕಿಮೋಥೆರಫಿ  ಯಿಂದ ಶೇಕಡಾ 80ರಷ್ಟು ವಾಸಿ ಮಾಡುವ ಅವಕಾಶವಿದೆ.

ರೆಡಿಯೆಷನ್‌ ಥೆರಫಿ,

ಬೊನ್‌ ಮ್ಯಾರೋ ಟ್ರಾನ್ಸ್‌ ಪ್ಲಾಂಟ್‌

ಹಿಮೋಥೆರಫಿ ........

ಯಾವುದೇ ಕ್ಯಾನ್ಸರ್ ಇರಲ್ಲಿ ಮೊದಲು ಕಾಯಿಲೆಯನ್ನು ಗುರುತಿಸಿ   ಶೀಘ್ರ ಚಿಕಿತ್ಸೆ ಪ್ರಾರಂಭ ಮಾಡುವುದು ನಾವು ಮಾಡಬೇಕಾದ ಅತಿ ಮುಖ್ಯವಾದ ಜವಾಬ್ದಾರಿಯಾಗಿದೆ

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕುರಿತ ಸಂಶೋಧನೆಗಳು ಹೆಚ್ಚಾಗಿವೆ, ಇದರಿಂದ ಒಳ್ಳೆಯ ಗುಣಮಟ್ಟದ ಔಷಧಿಗಳು ರೇಡಿಯೋ ಥೆರಫಿ ಯಂತ್ರಗಳು ಗಳು ಹಾಗೂ ಸ್ಕ್ಯಾನಿಂಗ್ ಯಂತ್ರಗಳು ಗಳು ಆವಿಷ್ಕಾರ ಆಗಿರೋದ್ರಿಂದ ಪ್ರತಿ ಕ್ಯಾನ್ಸರ್ ಕಾಯಿಲೆಯನ್ನು ಬೇಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಿ ಗುಣಪಡಿಸಬಹುದು

 ಇಂದು ಹಲವಾರು ಕ್ಯಾನ್ಸರ್ ಸಂಶೋಧನಾ ಕೇಂದ್ರಗಳು ಮತ್ತು ಕ್ಯಾನ್ಸರ್ ಗಾಗಿಯೇ ಚಿಕಿತ್ಸಾ ಆಸ್ಪತ್ರೆಗಳು ಭಾರತದಲ್ಲಿರುವುದರಿಂದ ಜನಸಾಮಾನ್ಯರು ಒಳ್ಳೆಯ ಚಿಕಿತ್ಸೆ ಪಡೆದು ಗುಣಮುಖರಾಗುವ ಅವಕಾಶ ಹೆಚ್ಚಾಗಿದೆ.

 ಹಿರಿಯರಿಗಿಂತ ಮಕ್ಕಳು ಈ ಕಾಯಿಲೆಗೆ ಹೆಚ್ಚುಸ್ಪಂದನೆ ನೀಡುವುದರಿಂದ ಮಕ್ಕಳು ಇದರಿಂದ ಹೊರ ಬರಬಹುದು ಕ್ಯಾನ್ಸರ್ ಬಂದು ವಾಸಿಯಾದ ಮೇಲೆ ಮತ್ತೆ ಬರೋ ಬರುವುದಿಲ್ಲ ಎಂಬುದೇನಿಲ್ಲ ಮತ್ತೆ ಬಂದರೂ ಬರಬಹುದು ಆದರೆ ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಆಹಾರ ವ್ಯಾಯಾಮ ಹಾಗೂ ದೇಹವನ್ನು ಆರೋಗ್ಯವಾಗಿಟ್ಟುಕೊಂಡಲ್ಲಿ ಮತ್ತೆ ಕ್ಯಾನ್ಸರ್ ಬರುವುದಿಲ್ಲ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಆದ್ದರಿಂದ ಮಕ್ಕಳ ಕುರಿತು ಮಾಹಿತಿ ತಿಳಿದಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ . ಇಂದು ಅಂತರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನ ಆದ್ದರಿಂದ ಕ್ಯಾನ್ಸರ್ ಕುರಿತಾಗಿ ಎಚ್ಚರಿಕೆವಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.







ಆದಾಯ ತೆರಿಗೆ ಪಾವತಿಸುವವರು ತಿಳಿದಿರಬೇಕಾದ ಅಂಶಗಳು....

 

ಈ ವರ್ಷ ತೆರಿಗೆ ಪಾವತಿಸುವವರು ಈ ಕೆಳಗಿನಂತೆ ಎರಡು ವಿಧಗಳಲ್ಲಿ ತೆರಿಗೆ ಯನ್ನಪಾವತಿಸಬೇಕು.

ಸರ್ಕಾರಿ ನೌಕರರಿಗೆ ಹಾಗೂ ಸಂಬಳ ಪಡೆಯುವವರಿಗೆ  ಈಗ ಹಲವು ವೇತನ ಶ್ರೇಣಿಯಲ್ಲಿರುವವರು ತಮ್ಮ ವೇತನದಿಂದ ಕಟಾವಾಣೆ ಮಾಡುವಾಗ  ಕೆಲವು ಅಂಶಗಳನ್ನು ಗಮನಿಸಿ

 

New Tax Regime 

ಹೊಸ ತೆರಿಗೆಯಲ್ಲಿ ಯಾವದೇ ಉಳಿತಾಯ ಮಾಡಲು ಬರುವುದಿಲ್ಲ.

ಒಟ್ಟು ವೇತನ 7 ಲಕ್ಷ ಮತ್ತು 75000 Standard deduction=775000 ರೂ ಆದಾಯ  ಇದ್ದರೆ ತೆರಿಗೆ ಬರುವುದಿಲ್ಲ.


7.75000 ಕ್ಕಿಂತ ಅಧಿಕ ವೇತನ ಪಡೆಯುತ್ತಿದ್ದರೆ ಈ ಕೆಳಗಿನಂತೆ ಆದಾಯ ತೆರಿಗೆಗೆ ಒಳಪಡುತ್ತೀರಿ

೦-3 ಲಕ್ಷಕ್ಕೆ ತೆರಿಗೆ ಇಲ್ಲ

3-7 ಲಕ್ಷಕ್ಕೆ 5%. ಅಂದರೆ 20000 ರೂ.ತೆರಿಗೆ ಭರಿಸಬೇಕು.

7-10 ಲಕ್ಷಕ್ಕೆ 20000+10% (30000) =50000.ರೂ ತೆರಿಗೆ ಭರಿಸಬೇಕು

ತೆರಿಗೆ.10-12 ಲಕ್ಷಕ್ಕೆ 50000+ 15% ತೆರಿಗೆ (30000) = 80000 ರೂ ತೆರಿಗೆ ಭರಿಸಬೇಕು.

12-  15ಲಕ್ಷಕ್ಕೆ 80000ರೂ +20% ತೆರಿಗೆ (60000)  =140000 ರೂ ತೆರಿಗೆ ಭರಿಸಬೇಕು


 Old Tax Regime 


* ಇದರಲ್ಲಿ 5 ಲಕ್ಷ ಒಳಗಿನ ಆದಾಯಕ್ಕೆ ತೆರಿಗೆ ಬರುವದಿಲ್ಲ.

* 5-1೦ ಲಕ್ಷ ವರೆಗಿನ ಅದಾಯಕ್ಕೆ 125೦೦+20%(100000)= 112500 ತೆರಿಗೆ ಭರಿಸಬೇಕು

* 1೦ ಲಕ್ಷ  ಮೇಲ್ಪಟ್ಟ ಆದಾಯಕ್ಕೆ 112500+3೦% ರಷ್ಟು ಕಟ್ಟಬೇಕಾಗುವದು.

 ಹಳೆ ಪದ್ದತಿಯಲ್ಲಿ ಉಳಿತಾಯ ಮಾಡಲು ಈ ಕೆಳಗಿನಂತಿವೆ


* 80C:- (ಈಗಾಗಲೇ ವೇತನದಲ್ಲೇ ಕಟಾವಣೆಗಳ ಒಟ್ಟು ಮೊತ್ತ ರೂ 1,50,000 ಮೀರಿದವರಿಗೆ ಈ ಕೆಳಗಿನವುಗಳು ಅನ್ವಯಿಸುವುದಿಲ್ಲ)

* 1) ಮಕ್ಕಳ ಟ್ಯೂಷನ್ ಫೀ ರಸೀದಿ

* 2) PLI ತುಂಬಿದ ದಾಖಲೆ

* 3) ಕೈಯಿಂದ ತುಂಬುವ      LIC ಕಂತು

* 4) NSC

* 5) ಸುಕನ್ಯಾ ಸಮೃದ್ಧಿ

* 6) ವಾಪಸ್ಸು ತುಂಬಿದ ಗೃಹ ಸಾಲದ ಅಸಲು

•   7) ಇತರೆ


* 80 ಸಿ ಅಡಿ ರೂ. 1,50,000 ಮೀರಿದ್ದರೂ ನೇರವಾಗಿ ಆದಾಯದಲ್ಲಿ ಕಟಾವಣೆಗೆ ಇರುವ ಅವಕಾಶಗಳು


* ಗೃಹ ಸಾಲದ ಬಡ್ಡಿ ತುಂಬುತ್ತಿರುವವರು ಬ್ಯಾಂಕ್ ನಿಂದ 'Provisional Interest Certificate' ಅಂತಾ ಕೇಳಿ (ಸ್ಟೇಟ್ ಮೆಂಟ್ ಅಂತಾ ಕೇಳಿ ತರಬೇಡಿರಿ) ಪಡೆದುಕೊಂಡು ಪೂರೈಸಿರಿ.


* 80 D:- ಆರೋಗ್ಯ ವಿಮೆ ಸ್ವಂತ ಹಾಗೂ ಅವಲಂಬಿತರ ಹೆಸರಿನಲ್ಲಿ ಆರೋಗ್ಯ ವಿಮೆ ಮಾಡಿಸಲು ತುಂಬಿದ ಪ್ರೀಮಿಯಂ ಗೆ ಗರಿಷ್ಟ 25000 ವರೆಗೆ ಆದಾಯದಲ್ಲಿ ವಿನಾಯಿತಿ ಸಿಗುತ್ತದೆ.,


* 80 DD:- ವಿಕಲಚೇತನ ಅವಲಂಬಿತರ ವೈದ್ಯಕೀಯ ವೆಚ್ಚ ಅವಲಂಬಿತರು ವಿಕಲಚೇತನರಾಗಿದ್ದಲ್ಲಿ ಅವರ ವೈಕಲ್ಯ ಪ್ರಮಾಣ ಶೇ 40-79 ಇದ್ದಲ್ಲಿ ಗರಿಷ್ಠ ರೂ 75,000 ಅಥವಾ ಶೇ 80 ಕ್ಕಿಂತ ಹೆಚ್ಚಿದ್ದಲ್ಲಿ ಗರಿಷ್ಠ ರೂ 1,25,000 ಆದಾಯದಿಂದ ಕಳೆಯಲ್ಪಡುತ್ತದೆ.


* 80 DDB:- ನಿರ್ಧಾರಿತ ಖಾಯಿಲೆಗಳಿಗೆ ಚಿಕಿತ್ಸಾ ವೆಚ್ಚ ವಿನಾಯಿತಿ ಆದಾಯ ತೆರಿಗೆ ಇಲಾಖೆಯು ಕೆಲವು ನಿರ್ಧಾರಿತ ರೋಗಗಳಿಗೆ ಮಾಡುವ ವೆಚ್ಚಕ್ಕೆ ವಿನಾಯಿತಿ ನೀಡುತ್ತದೆ. ತಾವು ಅಥವಾ ತಮ್ಮಅವಲಂಬಿತರು ಅಂತಹ ರೋಗಗಳಿಗೆ ಚಿಕಿತ್ಸೆ ಪಡೆದಿದ್ದಲ್ಲಿ ರಸೀದಿಗಳು ಹಾಗೂ  ಹಾಗೂ ಎಂ.ಡಿ ಅಥವಾ ಎಂ.ಎಸ್ ಪದವಿ ಹೊಂದಿದ ವೈದ್ಯರಿಂದ '10 - I' ಪ್ರ.ಪತ್ರ ಪಡೆದು ಸಲ್ಲಿಸಬೇಕು. ಆ ನಿರ್ಧಾರಿತ ರೋಗಗಳ ಪಟ್ಟಿ ಈ ಕೆಳಗಿನಂತೆ ಇದೆ, ಇದನ್ನು ಸಕ್ಷಮ ವೈದ್ಯರೇ ನಿರ್ಧರಿಸಿ ಪ್ರಮಾಣ ಪತ್ರ ನೀಡಬೇಕಾಗುತ್ತದೆ. ಈ ಕೆಳಗಿನ ಚಿಕಿತ್ಸೆ ಗೆ ಮಾತ್ರ


* (i)   Neurological Diseases where the disability level has been certified to be of 40% and above,—

* (a)   Dementia ;

* (b)   Dystonia Musculorum Deformans ;

* (c)   Motor Neuron Disease ;

* (d)   Ataxia ;

* (e)   Chorea ;

* (f)   Hemiballismus ;

* (g)   Aphasia ;

* (h)   Parkinsons Disease ;

* (ii)   Malignant Cancers ;

* (iii)   Full Blown Acquired Immuno-Deficiency Syndrome (AIDS) ;

* (iv)   Chronic Renal failure ;

* (v)   Hematological disorders :

* (i)   Hemophilia ;

* (ii)   Thalassaemia.


* 80 CCD 1(B):- NPS ಗೆ ಹೆಚ್ಚುವರಿಯಾಗಿ ಸಂದಾಯ ಮಾಡಿದ ಮೊತ್ತ. ವೇತನದಲ್ಲಿ ಕಟಾವಣೆಯಾಗುವ ಮೊತ್ತವಲ್ಲದೇ ಎನ್.ಪಿ.ಎಸ್ ಗೆ ಹೆಚ್ಚುವರಿಯಾಗಿ ಹಣ ತುಂಬಿದ್ದರೆ ಗರಿಷ್ಠ ರೂ 50000 ವರೆಗೆ ವಿನಾಯಿತಿ ಇದೆ.


* 80 E:- ಶಿಕ್ಷಣ ಸಾಲದ ಬಡ್ಡಿ ನೌಕರನು ತನ್ನ ಹಾಗೂ ಅವಲಂಬಿತರ ಶಿಕ್ಷಣ ಸಾಲದ ಬಡ್ಡಿ ತುಂಬಿದ್ದರೆ ಅದಕ್ಕೆ ವಿನಾಯಿತಿ ಸಿಗುತ್ತದೆ. 


* 80 G:- ದೇಣಿಗೆ/ದಾನ ಕ್ಕೆ ವಿನಾಯಿತಿ. ಆದಾಯ  ಇಲಾಖೆಯಲ್ಲಿ 80ಜಿ ಅಡಿ ನೋಂದಣಿ ಮಾಡಿಕೊಂಡು ಚಾಲ್ತಿ ಪ್ರಮಾಣಪತ್ರ ಹೊಂದಿರುವ ಟ್ರಸ್ಟ್ / ಸಂಸ್ಥೆಗಳಿಗೆ ದಾನ ನೀಡಿದ್ದರೆ ಗರಿಷ್ಟ ಒಟ್ಟು ವೇತನದ ಶೇ 10 ಕ್ಕೆ ವಿನಾಯಿತಿ ಸಿಗುತ್ತದೆ.

* ಸರಕಾರೇತರ ಟ್ರಸ್ಟ್ ಗಳಿಗೆ ನೀಡಿರುವ ದೇಣಿಗೆಯ ಶೇ 50 ರಷ್ಟು ಮಾತ್ರ ನಿಮ್ಮ ಆದಾಯದಿಂದ ಕಳೆಯಲ್ಪಡುತ್ತದೆ.

* ಸರಕಾರಿ ನಿಧಿಗಳಾಗಿದ್ದಲ್ಲಿ ನೀಡಿರುವ ದೇಣಿಗೆಯ ಶೇ 100 ರಷ್ಟು ಮಾತ್ರ ನಿಮ್ಮ ಆದಾಯದಿಂದ ಕಳೆಯಲ್ಪಡುತ್ತದೆ.  

*   ರೂ 2000 ಕ್ಕಿಂತ ಹೆಚ್ಚಿಗೆ ದೇಣಿಗೆ ನೀಡುವವರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಯಿಂದ ಚೆಕ್/ಡಿ.ಡಿ/NEFT/RTGS ವಿಧಾನದ ಮುಖಾಂತರವೇ ಹಣ ಸಂದಾಯ ಮಾಡಿರಬೇಕಾಗುತ್ತದೆ* 

*  80 U:- ಸ್ವತಃ ನೌಕರನೇ ವಿಕಲಚೇತನರಾಗಿದ್ದಲ್ಲಿ ಪ್ರಮಾಣ ಪತ್ರ ಪೂರೈಸಿರಿ.


* HRA ಮನೆ ಬಾಡಿಗೆ ತೆಗೆದುಕೊಳ್ಳಬಹುದು.ಆದರೆ ಈ ವರ್ಷ ಹಳೆ ಪದ್ಧತಿಯಲ್ಲಿ ಹೆಚ್ಚು ತೆರಿಗೆ ಬರುವುದರಿಂದ ಹೆಚ್ಚಿನವರಿಗೆ ಮನೆ ಬಾಡಿಗೆ (HRA) ಉಪಯೋಗವಾಗುವು ದಿಲ್ಲ.

ಮುಂದಿನ ಹಣಕಾಸು ವರ್ಷದಿಂದ ಹೊಸ ಆದಾಯ ತೆರಿಗೆ ನೀತಿ ಜಾರಿಯಾಗಲಿದೆಅದರ ಕುರಿತು ಮಾಹಿತಿ...

ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಲೋಕಸಭೆಯ ಕಲಾಪದ ಕೇಂದ್ರ ಬಜೆಟ್ ನ ಭಾಷಣದ ವೇಳೆ ಹೊಸ ಆದಾಯ ತೆರಿಗೆ ನೀತಿಯಲ್ಲಿನ ಹಲವಾರು ಅಂಶಗಳನ್ನು ಮಂಡಿಸಿದರು ಹಳೆ ಆದಾಯ ತೆರಿಗೆ ನೀತಿ ಪುಸ್ತಕದಲ್ಲಿರುವ ಸುಮಾರು ಮೂರು ಲಕ್ಷ ಪದಗಳನ್ನು ತೆಗೆದುಹಾಕಿ ಸರಳವಾದ ವಿಧಾನದಲ್ಲಿ ಜನರಿಗೆ ಅರ್ಥವಾಗುವಂತೆ ಮೊದಲು ಇದ್ದ 880
ಪುಟಗಳಿಂದ ಈಗ 622 ಪುಟಗಳಿಗೆ ಇಳಿಸಲಾಗಿದೆ ಮತ್ತು ಓದುಗರಿಗೆ ಅರ್ಥವಾಗುವಂತೆ ಸುಲಭ ಹಾಗೂ ಸರಳ ಭಾಷೆಯಲ್ಲಿ ಪ್ರಸ್ತುತಪಡಿಸಲಾಗಿದೆ ಈ  ಬಿಲ್ಲನ್ನು ಲೋಕಸಭೆಯಲ್ಲಿ ಪಾಸ್ ಮಾಡಲಾಗಿದೆ ಈ ಹೊಸ ಆದಾಯ ತೆರಿಗೆ ನೀತಿಯು 2025 26 ನೇ ಸಾಲಿನಿಂದ ಜಾರಿಗೆ ಬರಲಿದೆ .



ಫೆ-14 ಇಂದು ಅಂತರಾಷ್ಟ್ರೀಯ ಪುಸ್ತಕ ಕೊಡುಗೆ ದಿನ .....ಪುಸ್ತಕಗಳ ಕುರಿತ ವಿಶೇಷ

ಪುಸ್ತಕ ಎಂದರೆ ವಸ್ತುವಲ್ಲ ಅದು ನಮ್ಮ ಸ್ನೇಹಿತ.......

ನೂರು ಜನ ಸ್ನೇಹಿತರಿಗಿಂತ ಒಂದು ಪುಸ್ತಕ ಉತ್ತಮ ಎಂಬ ನಾಣ್ನುಡಿಯಂತೆ  ನಮ್ಮ ಮಾನಸಿಕ ಆರೋಗ್ಯಕ್ಕಾಗಿ ಹಾಗು ಪ್ರಪಂಚವನ್ನು ತಿಳಿದುಕೊಳ್ಳಲು ಪುಸ್ತಕಗಳು ಬೇಕು. ಜೀವನದ  ಪ್ರತಿ  ಹಂತದಲ್ಲು ಪುಸ್ತಕಗಳು ನಮಗೆ ಪ್ರೇರಣೆಯನ್ನು ನೀಡುತ್ತವೆ.ಪುಸ್ತಕಳನ್ನು ನಂಬಿಕೊಂಡ ವ್ಯಕ್ತಿಯ ಜೀವನ ಎಂದು ಕಷ್ಟಕ್ಕೆ ಒಳಗಾಗಿಲ್ಲ.


ಆದ್ಯಾತ್ಮದ ಮೂಲಸೆಲೆ ಪುಸ್ತಕಗಳು
ನಾವು ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಬೇಕಾದರೆ ನಮ್ಮ ಜೀವನದಲ್ಲಿ ಮೌಲ್ಯಗಳನ್ನು ಉತ್ತಮ ತತ್ವ ಸಿದ್ದಾಂತಗಳನ್ನು  ಅಳವಡಿಸಿಕೊಳ್ಳಬೇಕು .ಮಹಾನ್ ಸಾಧು ಸಂತರು ತಾವು ಬರೆದ ತತ್ವಪದಗಳಲ್ಲಿ ಗ್ರಂಥಗಳಲ್ಲಿ ಉನ್ನತ ಮೌಲ್ಯಗಳನ್ನು ಹಾಕಿಕೊಟ್ಟಿದ್ದಾರೆ ಈ ಮೌಲ್ಯಗಳು ಮಾನವ ಸಮುದಾಯ ಭೂಮಿಯ ಮೇಲೆ ಇರುವವರೆಗೂ ಇರುತ್ತವೆ,. ಹಾಗಾಗಿ ಪುಸ್ತಕಗಳು ನಮ್ಮಲ್ಲಿ ಮೌಲ್ಯವನ್ನು ತುಂಬಿವೆ

ಪುಸ್ತಕಗಳಿಂದ ಆತ್ಮ ವಿಶ್ವಾಸ ಹೆಚ್ಚುತ್ತದೆ
ಪುಸ್ತಕಗಳು ನಮ್ಮ ಮಾನಸಿಕ ಬೆಳವಣಿಗೆಗೆ ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ  ವೈಜ್ಞಾನಿಕ ಸಮೀಕ್ಷೆಗಳ ಪ್ರಕಾರ ಪುಸ್ತಕಗಳನ್ನು ಓದುವವರಲ್ಲಿ ಸ್ಮರಣಶಕ್ತಿ ಹಾಗೂ ಕ್ರಿಯಾಶೀಲತೆ  ಗುಣಗಳು ಕೇವಲ ಪುಸ್ತಕಗಳನ್ನು ಓದುವುದರಿಂದ ಮಾತ್ರ ದೊರೆಯುತ್ತದೆ. ಸಮಾಜದಲ್ಲಿ ಇತರೆ ವ್ಯಕ್ತಿಗಳಿಗೆ ಹಾಗೂ ಪ್ರಾಣಿಗಳಿಗೆ ತಮ್ಮದೇ ಆದ ಮೌಲ್ಯವಿದೆ ಎಂಬುದನ್ನು ಪುಸ್ತಕಗಳಿಂದ ನಾವು ಕಲಿಯಬಹುದು

 ಜಗತ್ತಿನಲ್ಲಿರುವ ದೊಡ್ಡ ದೊಡ್ಡ ಕಂಪನಿಗಳ ಸಂಸ್ಥಾಪಕರು ಕೂಡ ಪುಸ್ತಕಗಳನ್ನು ಓದಿ ಅದರ ಮೂಲಕ ತಮ್ಮ ಜ್ಞಾನವನ್ನು, ಕ್ರಿಯಾಶೀಲತೆಯನ್ನು, ಸ್ಪೂರ್ತಿಗಳನ್ನು ,ಪ್ರೇರಣೆಯನ್ನು ತೆಗೆದುಕೊಂಡು ಹೊಸ ಹೊಸ ಆವಿಷ್ಕಾರಗಳಿಗೆ ಮನ್ವಂತರ ಬರೆದವರಾಗಿದ್ದಾರೆ

ಪುಸ್ತಕಗಳು ಉದ್ಯಮಿಗಳನ್ನು ಸೃಷ್ಟಿಸುತ್ತವೆ
 ಪುಸ್ತಕಗಳು ನಮ್ಮನ್ನು ಹಲವಾರು ಕ್ಷೇತ್ರಗಳಿಗೆ ಪರಿಚಯ ಮಾಡಿ ಕೊಡುತ್ತವೆ ಅದು ಕೈಗಾರಿಕೆ, ಕೃಷಿ ಇರಲಿ ,ಶಿಕ್ಷಣ ,ರಾಜಕೀಯ, ಉದ್ಯಮ, ಪ್ರೀತಿ, ಸ್ನೇಹ ,ನಂಬಿಕೆ ಎಲ್ಲ ವಿಷಯಗಳ ಬಗ್ಗೆ ನಮ್ಮಲ್ಲಿ ಪೂರ್ಣ ಪ್ರಮಾಣದ ಜ್ಞಾನ ನೀಡಲು ಪುಸ್ತಕಗಳಿಂದ ಮಾತ್ರ ಸಾಧ್ಯ .ಪುಸ್ತಕಗಳು ನಮ್ಮಲ್ಲಿ ಹೊಸ ಕಲ್ಪನೆಗಳು ಉತ್ಸಾಹವನ್ನು ಉಂಟುಮಾಡುತ್ತದೆ ನಮ್ಮ ಸುತ್ತಲಿನ ಪ್ರಪಂಚ ಹೇಗೆ ನೋಡಬೇಕು ಎಂಬುದನ್ನು ತಿಳಿಸಿಕೊಡುತ್ತದೆ ಇದರಿಂದ ನಾವು ಬಹಳಷ್ಟು ವಿಷಯಗಳನ್ನು ಕೌಶಲ್ಯಗಳನ್ನು ಕಲಿಯಲು ಸಾಧ್ಯವಾಗುತ್ತದೆ .

ಪುಸ್ತಕಗಳು ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಪ್ರತಿ ವಿದ್ಯಾರ್ಥಿಯು ತಾನು ಓದುತ್ತಿರುವಂತ ವಿಷಯದ ಬಗ್ಗೆ ನಿರಂತರತೆಯನ್ನು ಕಾಪಾಡಿಕೊಂಡಾಗ ಅವನು ವಿಶ್ವಾಸವನ್ನು ಪಡೆದುಕೊಳ್ಳುತ್ತಾನೆ ನಾನು ಇನ್ನು ಹೆಚ್ಚಿನ ವಿದ್ಯಾಭ್ಯಾಸ ಮಾಡಬಲ್ಲೆ ಹಾಗೂ ತನಗೆ ಇಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮಾಡಬಲ್ಲೆ ಎನ್ನುವ ವ್ಯಕ್ತಿತ್ವಗಳು ಪುಸ್ತಕಗಳಿಂದ ನಿರ್ಮಾಣ ವಾಗುತ್ತವೆ. ನಮ್ಮನ್ನು ಮಾನಸಿಕವಾಗಿ ಭಾವನಾತ್ಮಕವಾಗಿ ದೃಢ ವ್ಯಕ್ತಿಗಳನ್ನಾಗಿ ಬೆಳೆಯಲು ಸಹಾಯ ಮಾಡುತ್ತದೆ ಒಬ್ಬ ವ್ಯಕ್ತಿ ಕೇವಲ ದೈಹಿಕವಾಗಿ ಶಕ್ತಿವಂತನಾದರೆ ಸಾಲದು ಅವನಲ್ಲಿ ಶಬ್ದಕೋಶದ ಭಂಡಾರ ,ಸಂವಹನ ಕೌಶಲ್ಯ, ಇತರ ಜನರೊಂದಿಗೆ ಉತ್ತಮ ಬಾಂಧವ್ಯ  ಹೊಂದುವುದು ಇವೆಲ್ಲವನ್ನು ಪಡೆಯಲು ಅವನ ಮಾನಸಿಕ ಹಾಗೂ ಭಾವನಾತ್ಮಕ ವ್ಯಕ್ತಿತ್ವ ಬಹಳ ಸದೃಢವಾಗಿರಬೇಕಾಗುತ್ತದೆ ಅಂತಹ ವ್ಯಕ್ತಿತ್ವವನ್ನು ಪುಸ್ತಕಗಳು ನೀಡುತ್ತವೆ. ಹೀಗೆ ಪುಸ್ತಕಗಳು ನಮ್ಮನ್ನು ಒಬ್ಬ ಪೂರ್ಣ ಪ್ರಮಾಣದ ವ್ಯಕ್ತಿತ್ವವುಳ್ಳ ವ್ಯಕ್ತಿಯನ್ನಾಗಿ ಪರಿವರ್ತಿಸುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತವೆ

ಪ್ರತಿ ರಾತ್ರಿ ಮಲಗುವ ಮುನ್ನ ಪುಸ್ತಕ ಓದಿ ಮಲಗಿ 
 ನಿಮ್ಮ ಜೀವನದಲ್ಲಿ ಪ್ರತಿ ರಾತ್ರಿ ಮಲಗುವ ಮುನ್ನ ಐದು ನಿಮಿಷಗಳು ಪುಸ್ತಕ ಓದಿ ಮಲಗಿ ಹಾಗೂ ನಿಮ್ಮ ಬಿಡುವಿನ ಸಂದರ್ಭ ದಲ್ಲಿ ಪುಸ್ತಕಗಳಿಗಾಗಿ ಸಮಯ ಮೀಸಲಿಡಿ. ನಿಮ್ಮ ಮೆಚ್ಚಿನ ವಿಷಯಗಳ ಬಗ್ಗೆ ಪುಸ್ತಕಗಳನ್ನು ಸಂಗ್ರಹಿಸಿ ಇದರಿಂದ ನಮ್ಮ ಮನೆಯಲ್ಲಿನ ಮಕ್ಕಳಿಗೂ ಪುಸ್ತಕದ ಮಹತ್ವ ತಿಳಿದು ಬರುತ್ತದೆ ಇಂದು ಫೆಬ್ರವರಿ 14 ಎಂದರೆ ಪ್ರೇಮಿಗಳ ದಿನ ಎಂಬುದನ್ನು ಎಲ್ಲಾ ಯುವಕ ಯುವತಿಯರು ಯುವತಿಯರು ತಲೆಯಲ್ಲಿ ತುಂಬಿಕೊಂಡಿದ್ದಾರೆ ಆದರೆ ಇಂದು ಅಂತರಾಷ್ಟ್ರೀಯ ಪುಸ್ತಕ ಕೊಡುವ ದಿನ ನಾವೆಲ್ಲರೂ ಪುಸ್ತಕಗಳನ್ನು ಒಬ್ಬರು ಮತ್ತೊಬ್ಬರಿಗೆ ಕೊಡುವ ಈ ಸಂಪ್ರದಾಯವನ್ನು ಬೆಳೆಸಿ ನಮ್ಮ ಮಕ್ಕಳು ಹಾಗೂ ಕುಟುಂಬಗಳನ್ನು ಓದಿನ ಕಡೆಗೆ ಬೆಳೆಸೋಣ ಎಂದು ಆಶಿಸುತ್ತಾ ತಮ್ಮೆಲ್ಲರಿಗೂ ಅಂತರರಾಷ್ಟ್ರೀಯ ಪುಸ್ತಕ ಕೊಡುವ ದಿನದ ಹಾರ್ದಿಕ ಶುಭಾಶಯಗಳು.

ಜಾನಪದ ಅಸ್ಮಿತೆ ಸುಕ್ರಿ ಬೊಮ್ಮನಗೌಡ ನಿಧನ.... ಅವರ ಬದುಕಿನ ಕುರಿತ ಸಂಕ್ಷಿಪ್ತ ಒಳನೋಟ.......


"ದೊಡ್ಡ ಮಳೆ ಹೊಯ್ಯಲೆ ದೊಡ್ಡ ಕೆರೆ ತುಂಬಲೆ

ಗವಿಯಗಳೆಲ್ಲ ಹಯನಾಗಲೆ

ಹೊಯ್ಯೆ ಹೊಯ್ಯೆ ಮಳೆಯೆ ನಮ್ಮೂರಿಗೆ.".....


 ಕರ್ನಾಟಕ ಹಲವು ಜಾನಪದ ಹಾಡುಗಳು ಹಾಗೂ ಕಲೆಗಳ   ತವರೂರು ಅಂತಹ  ಜಾನಪದ ಕೊಂಡಿಯೊಂದು ಕಳಚಿ ನಾಡಿಗೆ ತುಂಬಲಾರದ ನಷ್ಟವಾಗಿದೆ . ಹೌದು ನಾಡಿನ ಖ್ಯಾತ ಜಾನಪದ ಗಾಯಕಿ , ಕರ್ನಾಟಕದ ಹಾಲಕ್ಕಿ ಹಾಡುಗಳ ಕೋಗಿಲೆ ಎಂದೆ ಖ್ಯಾತಿ ಪಡೆದ ಸುಪ್ರಸಿದ್ಧ ಜಾನಪದ ಹಾಡುಗಾರ್ತಿ ಸುಕ್ರಿ ಬೊಮ್ಮನ ಗೌಡ ಇಂದು ನಿಧನರಾಗಿದ್ದಾರೆ

 ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಮರಳಿ ಬರಲಿಲ್ಲ. ಸುಕ್ರಿ ಬೊಮ್ಮನಗೌಡ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾಲಕ್ಕಿ ಸಮುದಾಯಕ್ಕೆ ಸೇರಿದವರು. ಇವರು ಪಶ್ಚಿಮ ಘಟ್ಟಗಳ ಮಲೆನಾಡ ಕಾಡುಗಳಲ್ಲಿ ಜನಿಸಿ, ಜಾನಪದ ಹಾಡುಗಳ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದು ಯಾವ ಸಾಹಿತ್ಯ ಕಾರಣದಿಂದಲೂ ಕಡಿಮೆಯಲ್ಲ

 ಇಂದು ಹಾಲಕ್ಕಿ ಪದಗಳು ಕರ್ನಾಟಕದಲ್ಲಿ ಕಳೆದು ಹೋಗುತ್ತಿರುವ ಸಾಹಿತ್ಯ ಪದಗಳಲ್ಲಿ ಒಂದಾಗಿದೆ ಇಂತಹ ಸುಮಾರು 5000 ಹಾಲಕ್ಕಿ ಪದಗಳನ್ನು ಬಾಯಿ ಪಾಠವಾಗಿ ನೆನಪಿಟ್ಟಿದ್ದರು. 

  ಸುಕ್ರಿ ಬೊಮ್ಮನಗೌಡ ಅವರು ಮಧ್ಯಪಾನ ನಿಷೇಧ ಹೋರಾಟದಲ್ಲಿ ಮುಂಚೂಣಿಯ ಹೋರಾಟಗಾರರಾಗಿದ್ದರು ಇದಕ್ಕೆ ಕಾರಣ ಅವರ ಗಂಡ ಮಧ್ಯಪಾನ ಸೇವಿಸಿ ಮೃತರಾಗಿದ್ದರು. ತನ್ನಂತೆ ಇತರೆ ಯಾವ ಮಹಿಳೆಯರು ವಿಧವೆಯಾಗಬಾರದು ಎಂದು ಮಧ್ಯಪಾನ ನಿಷೇದ  ಹೋರಾಟದಲ್ಲಿ ಸುಧೀರ್ಘವಾಗಿ ಭಾಗವಹಿಸಿದ್ದರು. ಜೊತೆಗೆ ತಾವು ಅನಕ್ಷರಾಗಿದ್ದರು ತಮ್ಮಂತೆ ಕಾಡಿನ ಯಾವ ಮಕ್ಕಳು ಅನಕ್ಷರಸ್ಥರು  ಆಗಬಾರದೆಂದು ಕಾರವಾರ ಸಾಕ್ಷರತಾ ಜಾಗೃತಿ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಎಲ್ಲಾ ಕಾರಣಗಳಿಂದಾಗಿ ಸುಕ್ರಿ ಬೊಮ್ಮನ ಗೌಡ ಅವರು ವಿಶೇಷ ಸಾಲಿನಲ್ಲಿ ನಿಲ್ಲುತ್ತಾರೆ .

ಅವರು ತಮ್ಮ ಹಾಲಕ್ಕಿ ಪದಗಳ ಮೂಲಕ ತಮ್ಮ ಜನಾಂಗದ ಒಟ್ಟು ಸಂಸ್ಕೃತಿಯನ್ನು ಇನ್ನು ಜೀವಂತವಾಗಿ ಉಳಿಸಿಕೊಂಡಿದ್ದರು. ಜೊತೆಗೆ ಸಮಾಜದ ಒಳಿತಿಗೆ ಹೋರಾಡುತ್ತ ಸರ್ಕಾರದ ಒಳಗಣ್ಣನ್ನು ತೆರೆಸಲು ಪ್ರಯತ್ನ ಮಾಡಿದ್ದರು. ಅವರ ಬದುಕು ನಮಗೆಲ್ಲ ಆದರ್ಶವಾಗಬೇಕು ಜೊತೆಗೆ ನಾವೆಲ್ಲರೂ ಸುಕ್ರಿ ಬೊಮ್ಮಗೌಡ ಅವರ ಜಾನಪದ ಸಂಸ್ಕೃತಿಯನ್ನು ದಾಖಲಿಸುವ ಉಳಿಸುವ ಪ್ರಯತ್ನ ಮಾಡಬೇಕು .

ನಮ್ಮ ಜಾನಪದರು ಓದು ಬರಹ ಕಲಿಯದವರು ಆದರೆ ಅವರಲ್ಲಿರುವ ವಿದ್ವತ್ತು, ಭಾಷಾ ಪ್ರೌಢಿಮೆ, ಲೋಕಜ್ಞಾನ, ನೆನಪಿನ ಶಕ್ತಿ ,ಎಂಥವರನ್ನು ಬೆರಗುಗೊಳಿಸುತ್ತದೆ ಪಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ಜನಿಸಿ ಇಷ್ಟೊಂದು ಅಮೋಘ ಹೋರಾಟದ ಮೂಲಕ ನಮಗೆಲ್ಲರಿಗೂ ಸುಕ್ರಿ ಬೊಮ್ಮಗೌಡ ಅವರು ಆದರ್ಶರಾಗಿದ್ದಾರೆ .

ಅವರ ಈ ಎಲ್ಲ ಸಾಧನೆಯನ್ನು ಗೌರವಿಸಿ ಕೇಂದ್ರ ಸರ್ಕಾರವು 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿ ಗೌರವಿಸಲಾಯಿತು ಹಾಗೆ ರಾಜ್ಯ ಸರ್ಕಾರವು ನಾಡೋಜ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಇಷ್ಟೆಲ್ಲ ಪ್ರಶಸ್ತಿ ಬಂದರೂ ಸುಕ್ರಜ್ಜಿ ಆ ಪ್ರಶಸ್ತಿಯಿಂದ ಬಂದ ಹಣವನ್ನೆಲ್ಲ ಸಮಾಜ ಸೇವೆಗೆ ನೀಡಿದವರು ಹಣದ ಬಗ್ಗೆ ಯಾವುದೇ ಒಲವಿರಲಿಲ್ಲ .ಅವರು ತಮ್ಮ ಜೀವನದ ಪ್ರತಿ ಕ್ಷಣವನ್ನು ಆನಂದಿಸಿ ಬದುಕಿದವರು ಬೊಮ್ಮಗೌಡ ಅವರು ತಮ್ಮ 88ನೇ ವಯಸ್ಸಿನಲ್ಲಿ ನಮ್ಮನ್ನೆಲ್ಲ ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. 

ಇಂತಹ ಮಹಾನ್‌ ಜಾನಪದ ಹಾಡುಗಾರ್ತಿ, ಸಾಮಾಜಿಕ ಹೋರಾಟಗಾರ್ತಿಯನ್ನು ಕಳೆದುಕೊಂಡು ಕನ್ನಡ ನಾಡು ಬಡವಾಯಿತು . ಸುಕ್ರಿ ಬೊಮ್ಮಗೌಡ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ . ಅವರ ಅಗಲಿಕೆಗೆ ನಾಡಿನ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇನ್ವೆಸ್ಟ್‌ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ - 2025 ,ಮೊದಲ ದಿನ ಕರ್ನಾಟಕಕ್ಕೆ ಆದ ಹೂಡಿಕೆ ಎಷ್ಟು?

 ಕರ್ನಾಟಕವು  ಜಾಗತಿಕ ಹೂಡಿಕೆದಾರರ ಅಚ್ಚು ಮೆಚ್ಚಿನ ಸ್ಥಳ ಎನ್ನುವುದು ಮತ್ತೋಮ್ಮೆ ಸಾಬಿತಾಗಿದೆ  

   ಕರ್ನಾಟಕವು ಜಗತ್ತಿನಲ್ಲಿ 4 ನೇ ಅತಿದೊಡ್ಡ ತಂತ್ರಙ್ಞನ ಬೆಳವಣಿಗೆಯ ರಾಜ್ಯವಾಗಿದೆ ಹಾಗೂ  4ನೇ ಅತಿದೊಡ್ಡ ಆಟೋಮೊಬೈಲ್‌ ತಯಾರಿಕಾ ರಾಜ್ಯವಾಗಿದೆ. ಭಾರತದ ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ರಾಜ್ಯವು ಹೌದು, ಹೀಗೆ ಹಲವು ವಿಷಯಗಳಲ್ಲಿ ತನ್ನ ಛಾಪನ್ನು ಹೊಂದಿರುವುದರಿಂದ ಇಲ್ಲಿ ಹೂಡಿಕೆ ಮಾಡಲು ಹಲವು ಕಂಪನಿಗಳು ಅಸಕ್ತಿ ತೋರುತ್ತವೆ

ಮೊದಲ ದಿನದ ಹೂಡಿಕೆ ಸಮಾವೇಶದಲ್ಲಿ  ರಾಜ್ಯಕ್ಕೆ 5 ಲಕ್ಷ ಕೋಟಿ ಹೂಡಿಕೆಯಾಗಿದೆ  ಒಟ್ಟಾರೆಯಾಗಿ ಸಮಾವೇಶದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ನಿರೀಕ್ಷೆಯನ್ನು ರಾಜ್ಯ ಸರ್ಕಾರ ಮಾಡಿದೆ  ಸರ್ಕಾರವು ಹೂಡಿಕೆದಾರರ ಅನೂಕೂಲಕ್ಕಾಗಿ  ಹೊಸ ಉದ್ಯಮಗಳನ್ನು ಸೃಷ್ಠಿಸುವವರಿಗೆ  new industrial policy 2025-2030  ಎಂಬ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತಂದಿದೆ. ಇದರಿಂದಾಗಿ  2030 ರ ವೇಳೆಗೆ  7.5 ಲಕ್ಷ ಕೋಟಿ ಹೂಡಿಕೆಯಾಗಬಹುದು ಹಾಗೂ ರಾಜ್ಯದಲ್ಲಿ ಶೇಕಡಾ 12 ರಷ್ಟು ಕೈಗಾರಕಾ ಬೆಳವಣಿಗೆಯನ್ನು ಕಾಣಬಹುದು ಎಂದು ಅಂದಾಜಿಸಲಾಗಿದೆ ಹಾಗಾಗಿ 
ರಾಜ್ಯಕ್ಕೆ ಹೆಚ್ಚು ಕೈಗಾರಿಕೆಗಳು ಆಗಮಿಸುವ ನಿರೀಕ್ಷೆ ಇದೆ.

ಈ ಸಮಾವೇಶದಲ್ಲಿ 18 ದೇಶಗಳು, ಸುಮಾರು 5000 ಕ್ಕೂ ಹೆಚ್ಚು ಪ್ರತಿನಿಧಿಗಳು, 100ಕ್ಕೂ ಹೆಚ್ಚು ಕೈಗಾರಿಕಾ ಚಿಂತಕರು ಭಾಗಿಯಾಗಲಿದ್ದಾರೆ ಸರ್ಕಾರದ ಮಹತ್ವಾಕಾಂಕ್ಷೆKWIN CITY ಯೋಜನೆಗೆ ಚಾಲನೆ ಸಿಗಲಿದೆ ಈ ಯೋಜನೆಗಾಗಿ ಬೆಂಗಳೂರಿನ ಹೊರ ವಲಯದಲ್ಲಿ 2000 ಎಕರೆ ಭೂಮಿಯನ್ನು ಗುರುತಿಸಲಾಗಿದೆ ಹಾಗು ಸುಮಾರು 40,000 ಕೋಟಿ ಹೂಡಿಕೆಯ ನೀರೀಕ್ಷೆ ಮಾಡಲಾಗಿದೆ ಇದರಿಂದ ಸುಮಾರು 80,000 ಸಾವಿರ ಉದ್ಯೋಗ ಸೃಷ್ಟಿಯ ನಿರೀಕ್ಷೆ ಮಾಡಲಾಗಿದೆ

ಮೊದಲ ದಿನದ ಸಮಾವೇಶದಲ್ಲಿ ಹೂಡಿಕೆಯಾಗಿದ್ದೆಷ್ಟು....

2025 ರ ಹೂಡಿಕೆಯ ಸಮಾವೇಶಕ್ಕೆ ಭರ್ಜರಿ ಪ್ರತಿಕ್ರಿಯೆ ದೊರೆತಿದೆ ಹಲವು ಕಂಪನಿಗಳು ಹಲವು ಕ್ಷೇತ್ರಗಳಲ್ಲಿ ಮಹತ್ವದ ಹೂಡಿಕೆ ಮಾಡಿವೆ.

ಹೂಡಿಕೆ ಮಾಡಿದ ಕಂಪನಿಗಳು ಈ ಕೆಳಗಿನಂತಿವೆ

JSW NEO ENERGY-56,000 CR

JSW CEMENT AND STEEL - 43,900  CR

TATA [POWER RENEWABLE - 50,000 CR

MAHINDRA SUSTEN - 35,000 CR

LAN RESEARCH - 10,000 CR 

ಮುಂದುವರೆದು 3.43 ಲಕ್ಷ ಕೋಟಿ ಗ್ರೀನ್‌ ಎನರ್ಜಿಯ ಮೇಲೆ ಕಂಪನಿಗಳು ಹೂಡಿಕೆ ಮಾಡಬಹುದು ಎಂದು ಅಂದಾಜಿಸಲಾಗಿದೆ ವಿಮಾನಯಾನ,ಆಟೋಮೊಬೈಲ್‌, ರೋಬೊಟಿಕ್‌ ತಂತ್ರಙ್ಞನ, ಹಲವು ಕ್ಷೇತ್ರಗಳಲ್ಲಿ  ಮುಂದಿನ ದಿನಗಳಲ್ಲಿ ಹೂಡಿಕೆಯನ್ನು ನೀರಿಕ್ಷೆ ಮಾಡಬಹುದಾಗಿದೆ.

ಒಟ್ಟಾರೆಯಾಗಿ  ಮುಂದಿನ ದಿನಗಳಲ್ಲಿ ಜನರಿಗೆ ಉದ್ಯೋಗಗಳು ಖಾಸಗಿ ಕ್ಷೇತ್ರದಲ್ಲಿ ಸಿಗಲಿವೆ ಹಾಗೂ ರಾಜ್ಯ ಸರ್ಕಾರಕ್ಕೆ ಬರುವ ತೆರಿಗೆಯಿಂದಾಗಿ ರಾಜ್ಯದ ಅಭಿವೃದ್ದಿ ಮಾಡಲೂ ಸಹಕಾರಿಯಾಗುತ್ತದೆ.




ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ವಿದ್ಯಾರ್ಥಿಗಳು ಅಭ್ಯಾಸಕ್ಕಾಗಿ ಪರಿಣಾಮಕಾರಿಯಾಗಿ ನೆನಪಿಟ್ಟುಕೊಳ್ಳುವುದಕ್ಕೆ ಹೀಗೆ ಮಾಡಿ


 ವಿವಿಧ ಹುದ್ದೆಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವವರು ಹಾಗೂ ತಮ್ಮ ವಾರ್ಷಿಕ ಪರೀಕ್ಷೆಗಳಿಗಾಗಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ತಾವು ಓದಿದ್ದನ್ನು ಪರಿಣಾಮಕಾರಿಯಾಗಿ ನೆನಪಿಟ್ಟುಕೊಳ್ಳಲು ಈ ಕೆಳಗಿನ ನಿಯಮಗಳನ್ನು ಪಾಲಿಸಿ

1) ನಾವು ಓದಬೇಕಾಗಿರುವುದನ್ನು ಬರವಣಿಗೆಯಲ್ಲಿ ನೋಟ್ ಮಾಡಿಕೊಳ್ಳಬೇಕು.

ಬರೆಯುತ್ತಾ  ಓದುವುದು ಬಹಳ ಪರಿಣಾಮಕಾರಿಯಾದ ವಿಧಾನವಾಗಿದೆ. ಕಾರಣ ನಾವು ಬರೆಯುತ್ತಿರುವಾಗ ನಮ್ಮ ಕೈಗಳು ಹಾಗೂ ದೇಹವು ಕ್ರಿಯಾಶೀಲತೆಯಿಂದ ಕೂಡಿರುತ್ತವೆ. ಹಾಗೂ  ನಮ್ಮ ಮೆದುಳು, ದೇಹ ಎರಡು ಕೂಡ ಕಾರ್ಯಪ್ರವೃತ್ತವಾಗಿರುತ್ತವೆ. ನಾವು ಭಾವನತ್ಮಕವಾಗಿ ಕಲಿಯುವಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ*  ಇದು ನಮ್ಮನ್ನು ಹೊರಗಿನ ವಿಚಾರದಿಂದ ದೂರ ಇಡುವಲ್ಲಿ ಹಾಗೂ ನಮ್ಮನ್ನು ನಾವು ಕೆಲಸಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ *ಇದು ನಮ್ಮ ಮೆದುಳನ್ನು ಕ್ರಿಯಾಶೀಲವಾಗಿಡುತ್ತದೆ ಇದು ನಮ್ಮ ಬರವಣಿಗೆ ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ *ನಾವು ಬರೆಯುತ್ತಿರುವ ಮಾಹಿತಿಯನ್ನು ನಿಖರವಾಗಿ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ*

2)  ವಿಚಾರ ಘೋಷ್ಠಿಗಳಲ್ಲಿ ಭಾಗವಹಿಸುವುದು 

ಘೋಷ್ಠಿಗಳಲ್ಲಿ ಭಾಗವಹಿಸುವುದು ನಮ್ಮಲ್ಲಿ ಸ್ವತಂತ್ರವಾಗಿ ಆಲೋಚನೆ ಮಾಡುವ ಶಕ್ತಿಯನ್ನು ನೀಡುತ್ತದೆ .


ವಿಮರ್ಶೆ& ತರ್ಕ ಮಾಡುವ ಮನೋಭಾವವನ್ನು ಬೆಳೆಸುತ್ತದೆ. ಮಾತನಾಡುವ,ಆಲಿಸುವ ಕೌಶಲವನ್ನು  ಬೆಳೆಸುತ್ತದೆ.

3) ಇತರರಿಗೆ ಕಲಿಸುವ ಮುಖಾಂತರ ಕಲಿಯುವುದು.

ನಾವು ಕಲಿತಿರುವುದನ್ನು ಇತರರಿಗೆ ತಿಳಿಸುವುದು ನಮ್ಮಲ್ಲಿ ವಿಶ್ವಾಸವನ್ನು ತುಂಬುತ್ತದೆ. ಒಂದು ಅಧ್ಯಯಾನದ ಪ್ರಕಾರ ನಮ್ಮಲ್ಲಿರುವ ವಿಚಾರ ಧಾರೆಗಳನ್ನು ಮತ್ತೊಬ್ಬರಿಗೆ ತಿಳಿಸಿದಾಗ ನಮ್ಮ ಕಲಿಕೆಯು ಗರಿಷ್ಟ ಮಟ್ಟದಲ್ಲಿರುತ್ತದೆ .ಹಾಗಾಗಿ ನಿಮ್ಮಲ್ಲಿರುವ ವಿಚಾರಗಳನ್ನು ಹಂಚಿಕೊಳ್ಳಿ ಅದು ಒಳ್ಳೆಯ ವಿಚಾರವಾಗಿರಲಿ .

4) ಪ್ರಯೊಗಾತ್ಮಕವಾಗಿ ಕಲಿಯಲೂ ಪ್ರಯತ್ನಿಸಿ.

ಕಲಿಕೆಗಳಲ್ಲಿ ನಮ್ಮನ್ನು ನಾವು ಪ್ರಯೋಗಗಳಿಗೆ ಒಡ್ಡಿ ಕೊಳ್ಳುವುದು ಬಹುಮುಖ್ಯ ಒಂದು ವಿಷಯವನ್ನು  ಎಷ್ಠು ಅವಧಿಗಳಲ್ಲಿ ಕಲಿಯಬಲ್ಲೆ ಎಂಬುದನ್ನು ನಮಗೆ ನಾವೇ ಅನ್ವಯಿಸಿ ಕೊಂಡಾಗ ನಮ್ಮಲ್ಲಿನ ಸಾಮಾರ್ಥದ ಅರಿವಾಗುತ್ತದೆ. ನಿಮಗೆ ನೀವೆ  ಕಲಿಯುವಿಕೆಯ ಸವಾಲುಗಳನ್ನು ಹಾಕಿಕೊಳ್ಳಿ . ಒಂದು ವಿಷಯದ ಕುರಿತಾಗಿ ನನ್ನ ಏಕಗ್ರತೆ ಎಷ್ಠು ಎಂದು ತಿಳಿದುಕೊಳ್ಳಿ. ಕಲಿಯುವಿಕೆಗೆ ಸಂಬದಿಸಿಂದಂತೆ ಯೋಜನೆಗಳನ್ನು ಹಾಕಿಕೊಳ್ಳಿ. ನಿಮಗೆ ನೀವೆ ನಿಮ್ಮ ಗುರಿ ಉದ್ದೇಶಗಳ ಮೇಲೆ ಪ್ರಶ್ನೆಗಳನ್ನು ಹಾಕಿಕೊಳ್ಳಿ. ನೀವು ಕಲಿತಿರುವ ವಿಷಯದ ಕುರಿತು ಪರೀಕ್ಷೆಗಳನ್ನು ಬರೆಯಿರಿ. ಒಳ್ಳೆಯ ವಿಚಾರಗಳು ಯಾರಿಂದಲೇ ಆಗಿರಲಿ ಕಲಿಯಲು ಹಿಂಜರಿಯ ಬೇಡಿ ನಿಮ್ಮದೆ ಆದ ರೀತಿಯಲ್ಲಿ ನಿಮ್ಮ ಕಲಿಕೆಯ ಪಯಣ ಸಾಗಲಿ. ನಿಮ್ಮ ಹಾಗೇಯೆ ಗುರಿ ಉದ್ದೇಶಗಳನ್ನು ಹೊಂದಿರುವ ವ್ಯಕ್ತಿಗಳನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಿ. ಎಲ್ಲದಕ್ಕಿಂತ ಮುಖ್ಯವಾಗಿ ನಿಮ್ಮ ಆರೋಗ್ಯ ಹಾಗು ನೆಮ್ಮದಿಯನ್ನು ಕಾಪಡಿಕೊಳ್ಳಿ  .


 





ನಿವೃತ್ತ ನೌಕರರಿಗೆ ಸಿಗುವ ಸೌಲಭ್ಯಗಳು .........

SSLC ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯಕ್ಕೆ ಸಂಬದಿಸಿದಂತೆ ಅಧ್ಯಯಾನ ಮಾಡಬೇಕಾದ ಅವಶ್ಯಕ ಅಂಶಗಳು

 ಎಸ್‌. ಎಸ್‌ .ಎಲ್. ಸಿ  ವಿದ್ಯಾರ್ಥಿಗಳು ಪರೀಕ್ಷೆಗೆ ಉಳಿದಿರುವ ಕೆಲವು ದಿನಗಳನ್ನು ಸದುಪಯೋಗಪಡಿಸಿಕೊಳ್ಳಬೇಕು . ನೀವು ಮೊದಲಿನಿಂದಲೂ ಓದುತ್ತಾ ಬಂದಿದ್ದರೆ ಉಳಿದಿರುವ 2 ಅಥಾವ 3 ತಿಂಗಳುಗಳಲ್ಲಿ ಅತಿಯಾಗಿ ಕಷ್ಟ ಬೀಳುವ  ಅವಶ್ಯಕತೆ ಬರುವುದಿಲ್ಲ  .ಅದರೆ ಮೊದಲಿನಿಂದಲೂ ಪ್ರಯತ್ನ ಮಾಡದವರು ಇದ್ದರೆ ಈಗಲೂ ನಿವು ಶ್ರಮ ವಹಿಸಿದರೆ ಖಂಡಿತ ಯಶಸ್ಸು ಸಾಧಿಸಬಹುದು.ಅಂತಹವರಿಗಾಗಿ   ವಿಙ್ಞನ ವಿಷಯಕ್ಕೆ ಸಂಬದಿಸಿದಂತೆ ಮುಖ್ಯವಾಗಿರುವ ಅಂಶಗಳನ್ನು ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೆವೆ  ತಾವುಗಳು ಇನ್ನು ಉಳಿದ ವಿಷಯಗಳ ಕುರಿತು ಅಸಕ್ತಿ ವ್ಯಕ್ತಪಡಿಸಿದಲ್ಲಿಅದನ್ನು ಪ್ರಕಟಿಸುತ್ತೆವೆ.  ಅಧ್ಯಯಾನ ಮಾಡಿ ಯಶಸ್ಸು ಪಡೆಯಿರಿ.